ಗಂಗಾನದಿಯಲ್ಲಿ ಮಾಂಸಾಹಾರಿ ಪದಾರ್ಥ ಎಸೆದರೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು ! – Allahabad High Court

ಪ್ರಯಾಗರಾಜ್ (ಉತ್ತರ ಪ್ರದೇಶ) – ಗಂಗಾನದಿಯ ಪಾತ್ರದಲ್ಲಿ ಮಾಂಸಾಹಾರಿ ಆಹಾರ ಎಸೆಯುವುದರಿಂದ ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಬಹುದು ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮಾರ್ಚ್ ತಿಂಗಳಲ್ಲಿ ಗಂಗಾನದಿಯಲ್ಲಿ ದೋಣಿಯೊಂದರಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ ಪ್ರಕರಣದಲ್ಲಿ ಪ್ರಕರಣ ದಾಖಲಾಗಿದ್ದ 14 ಮುಸ್ಲಿಂ ಪುರುಷರ ಪೈಕಿ 5 ಜನರಿಗೆ ಜಾಮೀನು ಮಂಜೂರು ಮಾಡುವಾಗ ನ್ಯಾಯಮೂರ್ತಿ ರಾಜೀವ್ ಲೋಚನ್ ಶುಕ್ಲಾ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

1. ನ್ಯಾಯಾಲಯವು, ಆರೋಪಿಗಳು ವ್ಯಕ್ತಪಡಿಸಿದ ಪಶ್ಚಾತ್ತಾಪದ ಭಾವನೆಯನ್ನು ಜಾಮೀನು ಮಂಜೂರು ಮಾಡಲು ಪರಿಗಣಿಸಬಹುದು ಎಂದು ಹೇಳಿದೆ. ಕೇವಲ ಆರೋಪಿಗಳು ಮಾತ್ರವಲ್ಲ, ಅವರ ಕುಟುಂಬದವರು ಕೂಡ ಸಮಾಜಕ್ಕಾದ ನೋವಿನ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

2. ನ್ಯಾಯಾಲಯವು, ಈ ಹಿಂದೆ ಆರೋಪಿಗಳ ಮೇಲೆ ಹೊರಿಸಲಾದ ಯಾವುದೇ ಅಪರಾಧಕ್ಕೆ 7 ವರ್ಷಗಳಿಗಿಂತ ಹೆಚ್ಚಿನ ಶಿಕ್ಷೆಯ ಅವಕಾಶವಿಲ್ಲ ಎಂದು ಗಮನಿಸಿದೆ. ಅಲ್ಲದೆ, ದೋಣಿ ಚಾಲಕನ ದೋಣಿಯನ್ನು ಆರೋಪಿಗಳು ಬಲವಂತವಾಗಿ ವಶಪಡಿಸಿಕೊಂಡಿದ್ದಾರೆ ಎಂಬ ದೋಣಿ ಚಾಲಕನ ದೂರಿನ ಬಗ್ಗೆಯೂ ನ್ಯಾಯಾಲಯ ಸಂಶಯ ವ್ಯಕ್ತಪಡಿಸಿದೆ. ಪ್ರಕರಣ ದಾಖಲಾಗುವ ಮುನ್ನ ಸಂಬಂಧಪಟ್ಟ ದೋಣಿ ಚಾಲಕ ತನಗಾದ ಸುಲಿಗೆ ಅಥವಾ ಬಲವಂತದ ಬಗ್ಗೆ ಯಾವುದೇ ದೂರು ನೀಡಿರಲಿಲ್ಲ ಎಂದು ಹೇಳಿದೆ. ದೋಣಿ ಚಾಲಕನು ಈ ಆರೋಪಗಳನ್ನು ಮಾಡುವಲ್ಲಿ ಮಾಡಿರುವ ವಿಳಂಬವು ಆತನ ಕಥೆಯ ಬಗ್ಗೆ ಅನುಮಾನವನ್ನು ಉಂಟುಮಾಡುತ್ತದೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದಾಗ ಅವರು ಅನೇಕ ಬಾರಿ ನಿಷ್ಕ್ರಿಯರಾಗಿರುತ್ತಾರೆ ಅಥವಾ ಪೊಲೀಸ್ ಅಥವಾ ಆಡಳಿತಕ್ಕೆ ಮನವಿ ನೀಡಿ ಸುಮ್ಮನಾಗುತ್ತಾರೆ ! ಮತ್ತೊಂದೆಡೆ ಮುಸಲ್ಮಾನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದರೆ ಅವರು ತಕ್ಷಣವೇ ‘ಸರ್ ತನ್ ಸೆ ಜುದಾ’ (ಶಿರಚ್ಛೇದ) ಘೋಷಣೆ ಕೂಗಿ ಕಾನೂನನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸುತ್ತಾರೆ. ಇದರಿಂದಾಗಿ ಪೊಲೀಸ್ ಮತ್ತು ಆಡಳಿತ ತಕ್ಷಣ ಕಾರ್ಯಪ್ರವೃತ್ತರಾಗಿ ಭಾವನೆಗಳಿಗೆ ಧಕ್ಕೆ ತಂದವರ ವಿರುದ್ಧ ಕ್ರಮ ಕೈಗೊಳ್ಳುತ್ತದೆ !