ಬಂಗಾಳ: ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಿಯಂತ್ರಣದಲ್ಲಿದ್ದ ದೇವಸ್ಥಾನ ಮುಕ್ತಗೊಳಿಸಿದ ಭಾಜಪ

ಬೀರ್‌ ಭೂಮ್ (ಬಂಗಾಳ) – ಬಂಗಾಳದಲ್ಲಿ ಭಾಜಪ ಅಧಿಕಾರಕ್ಕೆ ಬರುತ್ತಿದ್ದಂತೆ ಬೀರ್‌ ಭೂಮ್ ಜಿಲ್ಲೆಯ ರಾಂಪುರಹಾಟ್‌ ನಲ್ಲಿರುವ ‘ಶ್ರೀ ಶ್ರೀ ರಾಧಾ ಗೋವಿಂದ ದೇವಸ್ಥಾನ’ದ ಅನ್ನಪ್ರಸಾದದ ಕೋಣೆಯ ಮೇಲಿದ್ದ ತೃಣಮೂಲ ಕಾಂಗ್ರೆಸ್ಸಿನ ನಿಯಂತ್ರಣವನ್ನು ತೆರವುಗೊಳಿಸಲಾಗಿದೆ. ಅಲ್ಲಿ ನಡೆಯುತ್ತಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಭಾಜಪ ಕಾರ್ಯಕರ್ತರು ಮತ್ತು ಸ್ಥಳೀಯ ಜನರ ಸಹಾಯದಿಂದ ಮುಚ್ಚಲಾಗಿದ್ದು, ಆ ಜಾಗವನ್ನು ಮತ್ತೆ ದೇವಸ್ಥಾನ ಸಮಿತಿಗೆ ಹಸ್ತಾಂತರಿಸಲಾಗಿದೆ.

ಈ ದೇವಸ್ಥಾನವನ್ನು 1990 ರಲ್ಲಿ ಸ್ಥಳೀಯ ಜನರು ದೇಣಿಗೆ ಸಂಗ್ರಹಿಸಿ ಸ್ಥಾಪಿಸಿದ್ದರು. ಈ ದೇವಸ್ಥಾನವು ದೀರ್ಘಕಾಲದಿಂದ ಭಕ್ತರ ಶ್ರದ್ಧೆಯ ಪ್ರಮುಖ ಕೇಂದ್ರವಾಗಿದೆ. ತದನಂತರ ದೇವಸ್ಥಾನದ ಪಕ್ಕದಲ್ಲಿ ಭೋಗಶಾಲೆಯ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗಿತ್ತು. ಆದರೆ ತೃಣಮೂಲ ಕಾಂಗ್ರೆಸ್ಸಿನ ಕೆಲವು ಕಾರ್ಯಕರ್ತರು ನಿರ್ಮಾಣ ಕಾರ್ಯವನ್ನು ತಡೆದು ಆ ಜಾಗವನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಂಡಿದ್ದರು ಮತ್ತು ಅಲ್ಲಿ ತಮ್ಮ ಪಕ್ಷದ ಕಚೇರಿ ಪ್ರಾರಂಭಿಸಿದ್ದರು.

ಸಂಪಾದಕೀಯ ನಿಲುವು

ದೇವಸ್ಥಾನವನ್ನು ತನ್ನ ನಿಯಂತ್ರಣಕ್ಕೆ ಪಡೆದಿದ್ದ ತೃಣಮೂಲ ಕಾಂಗ್ರೆಸ್ಸಿನ ಗೂಂಡಾಗಳ ವಿರುದ್ಧ ಕ್ರಮ ಕೈಗೊಂಡು ಅವರಿಗೆ ಕಠಿಣ ಶಿಕ್ಷೆಯಾಗಬೇಕು!