ಮುಂಬಯಿ: 33 ವರ್ಷಗಳಿಂದ ಕಾನೂನುಬಾಹಿರವಾಗಿದ್ದ ಸರಕಾರಿ ಭೂಮಿ; ಸದ್ಯ ‘ಚರ್ಚ್ ಆಫ್ ಸೇಂಟ್ ಆಂಡ್ರ್ಯೂ ಆಂಡ್ ಸೇಂಟ್ ಕೊಲಂಬಾ’ ಸಂಸ್ಥೆಯ ವಶದಲ್ಲಿ!

  • ತಕ್ಷಣ ಕ್ರಮಕ್ಕೆ ಆಗ್ರಹಿಸಿದ ಹಿಂದೂ ವಿಧಿಜ್ಞ ಪರಿಷತ್ತು

  • 3 ಕೋಟಿ 17 ಲಕ್ಷ 4 ಸಾವಿರ 895 ರೂಪಾಯಿಗಳ ಹಣ ಪಾವತಿ ಬಾಕಿ!

ಮುಂಬಯಿ – ಮುಂಬಯಿಯ ಅತ್ಯಂತ ಪ್ರಮುಖ ಪ್ರದೇಶವಾದ ‘ಫೋರ್ಟ್’ ವಲಯದಲ್ಲಿನ 1,137.32 ಚದರ ಮೀಟರ್‌ ನ ಸರಕಾರಿ ಭೂಮಿಯು ಕಳೆದ 33 ವರ್ಷಗಳಿಂದ ಕಾನೂನುಬಾಹಿರವಾಗಿ ‘ಫ್ರೀ ಚರ್ಚ್ ಆಫ್ ಸ್ಕಾಟ್‌ ಲ್ಯಾಂಡ್’ (ಇಂದಿನ ‘ಚರ್ಚ್ ಆಫ್ ಸೇಂಟ್ ಆಂಡ್ರ್ಯೂ ಆಂಡ್ ಸೇಂಟ್ ಕೊಲಂಬಾ’) ಸಂಸ್ಥೆಯ ವಶದಲ್ಲಿದೆ ಎಂದು ಹಿಂದೂ ವಿಧಿಜ್ಞ ಪರಿಷತ್ತು ಗಂಭೀರ ಆರೋಪ ಮಾಡಿದೆ. ಈ ಕುರಿತು ಕಂದಾಯ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಪರಿಷತ್ತು, ಸಂಬಂಧಪಟ್ಟ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಈ ಭೂಮಿಯನ್ನು ತಕ್ಷಣವೇ ಸರಕಾರದ ವಶಕ್ಕೆ ಪಡೆಯಬೇಕೆಂದು ಆಗ್ರಹಿಸಿದೆ. ಹಿಂದೂ ವಿಧಿಜ್ಞ ಪರಿಷತ್ತು ನೀಡಿರುವ ದೂರಿನ ಪ್ರಕಾರ, 1894 ರಲ್ಲಿ ‘ಫೋರ್ಟ್’ ವಿಭಾಗದ ‘ಸರ್ವೆ ನಂಬರ್ 1,405’ ರ ಭೂಮಿಯನ್ನು ಆಗಿನ ‘ಫ್ರೀ ಚರ್ಚ್ ಆಫ್ ಸ್ಕಾಟ್‌ ಲ್ಯಾಂಡ್’ ಸಂಸ್ಥೆಗೆ 99 ವರ್ಷಗಳ ಅವಧಿಗೆ ಗುತ್ತಿಗೆ (ಲೀಸ್) ಆಧಾರದ ಮೇಲೆ ನೀಡಲಾಗಿತ್ತು. 1930 ರ ದಶಕದಲ್ಲಿ ಈ ಸಂಸ್ಥೆಯನ್ನು ‘ಚರ್ಚ್ ಆಫ್ ಸೇಂಟ್ ಆಂಡ್ರ್ಯೂ ಆಂಡ್ ಸೇಂಟ್ ಕೊಲಂಬಾ’ ಸಂಸ್ಥೆಯೊಂದಿಗೆ ವಿಲೀನಗೊಳಿಸಲಾಯಿತು. ಈ ಗುತ್ತಿಗೆಯ ಅವಧಿಯು 13 ಜೂನ್ 1993 ರಂದೇ ಮುಕ್ತಾಯಗೊಂಡಿದೆ. ನಿಯಮಗಳ ಪ್ರಕಾರ ಅವಧಿ ಮುಗಿದ ನಂತರ ಸರಕಾರ ಗುತ್ತಿಗೆಯನ್ನು ನವೀಕರಿಸಬೇಕಿತ್ತು ಅಥವಾ ಸಂಬಂಧಿತ ಸಂಸ್ಥೆಯನ್ನು ತೆರವುಗೊಳಿಸಿ ಭೂಮಿಯನ್ನು ತನ್ನ ವಶಕ್ಕೆ ಪಡೆಯಬೇಕಿತ್ತು; ಆದರೆ ಕಳೆದ ಮೂರು ದಶಕಗಳಿಂದ ಮುಂಬಯಿ ನಗರ ಜಿಲ್ಲಾಧಿಕಾರಿಗಳು ಇವುಗಳಲ್ಲಿ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ.

ಮೂಲ ಬಾಡಿಗೆದಾರರು ನಾಪತ್ತೆಯಾದರೂ ನಿಯಂತ್ರಣ ಮುಂದುವರಿಕೆ; ಆಡಳಿತ ಮಂಡಳಿಯಿಂದ ನೋಟಿಸ್ ನೀಡುವ ಔಪಚಾರಿಕ ಪ್ರಕ್ರಿಯೆ!

ಮೂಲತಃ ಯಾವ ಸಂಸ್ಥೆಗೆ (‘ಫ್ರೀ ಚರ್ಚ್ ಆಫ್ ಸ್ಕಾಟ್‌ಲ್ಯಾಂಡ್’) ಭೂಮಿಯನ್ನು ನೀಡಲಾಗಿತ್ತೋ, ಆ ಸಂಸ್ಥೆ ಈಗ ಅಸ್ತಿತ್ವದಲ್ಲೇ ಇಲ್ಲ. ‘ಚರ್ಚ್ ಆಫ್ ಸೇಂಟ್ ಆಂಡ್ರ್ಯೂ ಆಂಡ್ ಸೇಂಟ್ ಕೊಲಂಬಾ’ ಸಂಸ್ಥೆಯು ಈ ಭೂಮಿಯ ಮೇಲೆ ನಿಯಂತ್ರಣ ಸಾಧಿಸಿದೆ. ಭೂಮಿಯ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳನ್ನು ಈ ಸಂಸ್ಥೆ ನೀಡದಿದ್ದರೂ, ಜಿಲ್ಲಾಧಿಕಾರಿಗಳ ಕಚೇರಿಯು ಅವರಿಗೆ ನೋಟಿಸ್ ಕಳುಹಿಸುವ ಮೂಲಕ ಕೇವಲ ಔಪಚಾರಿಕ ಪ್ರಕ್ರಿಯೆಯನ್ನು ಪೂರೈಸುತ್ತಿದೆ.

ಮೂರು ವರ್ಷಗಳಿಗಿಂತಲೂ ಹೆಚ್ಚು ಅವಧಿಯಿಂದ 3 ಕೋಟಿ 17 ಲಕ್ಷ 4 ಸಾವಿರ 895 ರೂಪಾಯಿಗಳಷ್ಟು ಹಣ ಪಾವತಿ ಬಾಕಿ!

2022 ರಲ್ಲಿ ಜಿಲ್ಲಾಧಿಕಾರಿಗಳು 3 ಕೋಟಿ 17 ಲಕ್ಷ 4 ಸಾವಿರ 895 ರೂಪಾಯಿಗಳ ಬಾಕಿ ಪಾವತಿಯ ನೋಟಿಸ್ ಜಾರಿ ಮಾಡಿದ್ದರು; ಆದರೆ ಈ ಮೊತ್ತ ಇದುವರೆಗೆ ಜಮೆಯಾಗಿಲ್ಲ. ‘ಮಹಾರಾಷ್ಟ್ರ ಭೂ ಕಂದಾಯ ಸಂಹಿತೆ’ಯ ಕಲಂ 53 ರ ಪ್ರಕಾರ ಅನಧಿಕೃತ ನಿಯಂತ್ರಣ ಸಾಧಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವಿದ್ದರೂ, ಆಡಳಿತ ಮಂಡಳಿಯು ಕಳೆದ ಮೂರು ವರ್ಷಗಳಲ್ಲಿ ಬಾಕಿ ವಸೂಲಾತಿಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ.

ದೋಷಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ! – ವಕೀಲ ವೀರೇಂದ್ರ ಇಚಲಕರಂಜೀಕರ್

ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್

ಈ ಸಮಸ್ಯೆಯು ಕೇವಲ ಒಂದು ಚರ್ಚ್‌ ಗೆ ಮಾತ್ರ ಸೀಮಿತವಾಗಿರದೆ, ಮಹಾರಾಷ್ಟ್ರದ ಅನೇಕ ನಗರಗಳಲ್ಲಿ ಗುತ್ತಿಗೆ ಅವಧಿ ಮುಗಿದಿದ್ದರೂ ಸರಕಾರಿ ಭೂಮಿಗಳ ದುರ್ಬಳಕೆ ಮುಂದುವರೆದಿದೆ. ಲೆಕ್ಕಪರಿಶೋಧಕರು (ಆಡಿಟರ್ಸ್) ಕಂದಾಯದಲ್ಲಿನ ಭಾರಿ ನಷ್ಟದ ಕುರಿತು ಪದೇ-ಪದೇ ನೋಂದಾಯಿಸಿದ್ದಾರೆ. ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಈ ಭೂಮಿ ಇಂದಿಗೂ ಆ ಸಂಸ್ಥೆಯ ವಶದಲ್ಲಿದೆ. ಈ ಪ್ರಕರಣದಲ್ಲಿ ‘ದೋಷಿ ಅಧಿಕಾರಿಗಳ ವಿರುದ್ಧ ಶಿಸ್ತುಭಂಗದ ಕ್ರಮ ಕೈಗೊಳ್ಳಬೇಕು’ ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾದ ವಕೀಲ ವೀರೇಂದ್ರ ಇಚಲಕರಂಜೀಕರ್ ಅವರು ಒತ್ತಾಯಿಸಿದ್ದಾರೆ.