ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೆ ಯಾವುದೇ ಪುರಾವೆಗಳಿಲ್ಲ!

ಬಾಂಗ್ಲಾದೇಶದ ಗೃಹ ಸಚಿವ ಸಲಾಹುದ್ದೀನ್ ಅಹ್ಮದ್ ಸ್ಪಷ್ಟನೆ

ಢಾಕಾ (ಬಾಂಗ್ಲಾದೇಶ) – ಭಾರತದ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬುದಕ್ಕೆ ನಿಮ್ಮ ಬಳಿ ಏನು ಪುರಾವೆಗಳಿವೆ? ಸಾಮಾಜಿಕ ಮಾಧ್ಯಮಗಳಲ್ಲಿ ಹಳೆಯ ಘಟನೆಗಳನ್ನು ಹರಡಲಾಗುತ್ತಿದೆ. ನಮ್ಮ ವಿದೇಶಾಂಗ ಸಚಿವಾಲಯಕ್ಕೆ ಇಂತಹ ಯಾವುದೇ ವರದಿ ಬಂದಿಲ್ಲ, ಎಂದು ಬಾಂಗ್ಲಾದೇಶದ ಗೃಹ ಸಚಿವ ಸಲಾಹುದ್ದೀನ್ ಅಹ್ಮದ್ ಅವರು ಭಾರತದ ಮೇಲೆ ಆರೋಪ ಮಾಡುತ್ತಿದ್ದ ಬಾಂಗ್ಲಾದೇಶದ ಕಟ್ಟರಪಂಥೀಯ ಮುಸ್ಲಿಮರ ಬಾಯಿ ಮುಚ್ಚಿಸಿದ್ದಾರೆ.

ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಬಾಂಗ್ಲಾದೇಶದ ‘ಜಮಾತ್-ಎ-ಇಸ್ಲಾಮಿ’ ಮತ್ತು ಅದರ ಮಿತ್ರಪಕ್ಷಗಳು ಭಾರತದಲ್ಲಿ ಮುಸ್ಲಿಮರ ವಿರುದ್ಧದ ಕ್ರಮಗಳು ತೀವ್ರಗೊಂಡಿವೆ ಎಂದು ಆರೋಪಿಸಿದ್ದವು. ಅಲ್ಲದೆ ಭಾರತೀಯ ರಾಯಭಾರಿಯನ್ನು ಕರೆಸುವಂತೆ ಢಾಕಾ ಸರಕಾರವನ್ನು ಒತ್ತಾಯಿಸಿದ್ದವು. ‘ಬಾಂಗ್ಲಾದೇಶ ಖಿಲಾಫತ್ ಮಜ್ಲಿಶ್’ ನಂತಹ ಸಂಘಟನೆಗಳೂ ಕೂಡ ಭಾರತದ ಮೇಲೆ ಆರೋಪ ಮಾಡಿ, ಸರಕಾರದ ಬಳಿ ಕಠಿಣ ನಿಲುವು ತಳೆಯುವಂತೆ ಒತ್ತಾಯಿಸಿದ್ದವು.

ಭಾರತದೊಂದಿಗೆ ಸಂಬಂಧವನ್ನು ಹಾಳುಮಾಡಿಕೊಳ್ಳಲು ಇಷ್ಟವಿಲ್ಲ! – ಬಾಂಗ್ಲಾದೇಶ ಸರಕಾರ

ಬಾಂಗ್ಲಾದೇಶದ ‘ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ’ ಸರಕಾರವು ಭಾರತದೊಂದಿಗೆ ತನ್ನ ಸಂಬಂಧವನ್ನು ಹಾಳುಮಾಡಿಕೊಳ್ಳಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಬಾಂಗ್ಲಾದೇಶವು ಭಾರತದೊಂದಿಗೆ ಪರಸ್ಪರ ಗೌರವ ಮತ್ತು ಶಾಂತಿಯ ಆಧಾರದ ಮೇಲೆ ಸಂಬಂಧವನ್ನು ಮುಂದುವರಿಸಲು ಬಯಸುತ್ತದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ. ಗಡಿ ಬೇಲಿಯ ವಿಷಯಕ್ಕೆ ಸಂಬಂಧಿಸಿದಂತೆ, ನನಗೆ ಭಾರತದಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎಂದು ಬಾಂಗ್ಲಾದೇಶ ತಿಳಿಸಿದೆ. ಭಾರತ ತನ್ನ ಗಡಿಯೊಳಗೆ ಯಾವುದೇ ಕ್ರಮ ಕೈಗೊಂಡರೆ, ಅದರ ಬಗ್ಗೆ ರಾಜತಾಂತ್ರಿಕ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಬಾಂಗ್ಲಾದೇಶ ಸರಕಾರ ಸ್ಪಷ್ಟಪಡಿಸಿದೆ.