ಪಿಜ್ಜಾ ತಯಾರಿಸುವಾಗ ಅದರ ಮೇಲೆ ಉಗುಳುತ್ತಿದ್ದ ಮುಜಮ್ಮಿಲ್‌ನನ್ನು ಜನರು ಥಳಿಸಿದರು

ನೋಯ್ಡಾ (ಉತ್ತರ ಪ್ರದೇಶ) – ಪಿಜ್ಜಾ ಅಂಗಡಿಯೊಂದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ಮುಜಮ್ಮಿಲ್ ಎಂಬ ಯುವಕನು ಪಿಜ್ಜಾ ತಯಾರಿಸುವಾಗ ಅದರ ಮೇಲೆ ಉಗುಳುತ್ತಿರುವುದು ಕಂಡುಬರುತ್ತಿದೆ. ಮುಜಮ್ಮಿಲ್ ಚೌಡಾ ಗ್ರಾಮದ ‘ಪಿಜ್ಜಾ ಹಂಟ್’ ಎಂಬ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ. ವಿಡಿಯೋ ಪ್ರಸಾರವಾದ ನಂತರ ಜನರು ಆಕ್ರೋಶಗೊಂಡು ಹಿಂದೂ ರಕ್ಷಾ ದಳದ ಕಾರ್ಯಕರ್ತರು ಅವನನ್ನು ಥಳಿಸಿದರು.

೧. ಇದರ ನಂತರ ಹಿಂದೂ ರಕ್ಷಾ ದಳದ ಕಾರ್ಯಕರ್ತರು ಘಟನಾ ಸ್ಥಳಕ್ಕೆ ತಲುಪಿದರು ಮತ್ತು ಅವರು ನಿಷೇಧ ಆಂದೋಲನ ಮಾಡಿದರು. ಹಿಂದೂ ರಕ್ಷಾ ದಳದ ಕಾರ್ಯಕರ್ತರು, ಅಂಗಡಿಯಲ್ಲಿ ಪದಾರ್ಥಗಳನ್ನು ತಯಾರಿಸುವಾಗ ಅದರಲ್ಲಿ ಉಗುಳಲಾಗುತ್ತಿದೆ ಎಂಬ ದೂರು ಅವರಿಗೆ ಲಭಿಸಿತ್ತು, ಎಂದು ಹೇಳಿದರು.

೨. ನಂತರ ಅವರು ಸಿಸಿಟಿವಿ ಚಿತ್ರಣವನ್ನು ಪರಿಶೀಲಿಸಿದಾಗ ದೂರು ನಿಜವೆಂದು ಸಾಬೀತಾಗಿದೆ. ಸಂಘಟನೆಯ ಕಾರ್ಯಕರ್ತರು ಮೇ ೧೦ ರಂದು ಮುಜಮ್ಮಿಲ್‌ನನ್ನು ಹಿಡಿದರು ಮತ್ತು ಪೊಲೀಸರ ವಶಕ್ಕೆ ಒಪ್ಪಿಸಿದರು.

೩. ವಿಚಾರಣೆಯ ಸಮಯದಲ್ಲಿ ಮುಜಮ್ಮಿಲ್, ಪಿಜ್ಜಾ ತಯಾರಿಸುವಾಗ ಅದರ ಮೇಲೆ ಜಮೆಯಾಗಿದ್ದ ಮೈದಾವನ್ನು ತೆಗೆಯಲು ತಾನು ಕೇವಲ ಊದಿದ್ದೆ, ಎಂದು ಹೇಳಿದ್ದಾನೆ.

೪. ಪೊಲೀಸರು ಈ ಸಂಪೂರ್ಣ ಪ್ರಕರಣದ ತನಿಖೆ ನಡೆಸುತ್ತಿದ್ದು ವಿಡಿಯೋದ ಸತ್ಯತೆಯನ್ನು ದೃಢಪಡಿಸಲಾಗುತ್ತಿದೆ.

ಸಂಪಾದಕೀಯ ನಿಲುವು

ಮತಾಂಧರ ಉಗುಳು ಜಿಹಾದ್ !