ಮೇ ೧೭ ರಂದು ನಡೆಯಲಿರುವ ಶ್ರೀ ರಾಜಮಾತಂಗಿ ಮಹಾಯಜ್ಞದ ನಿಮಿತ್ತ...

ಮುಂಬಯಿ, ಮೇ ೧೦ (ವಾರ್ತೆ.) – ಪ್ರಸ್ತುತ ಯುದ್ಧದ ಸಮಯದಲ್ಲಿ ತಪೋಭೂಮಿಯಾದ ಭಾರತಕ್ಕೆ ರಕ್ಷಾಕವಚ ದೊರೆಯಲಿ ಮತ್ತು ಭಾರತದ ಸರ್ವಾಂಗೀಣ ಅಭಿವೃದ್ಧಿಯಾಗಲಿ ಎಂಬ ಉದ್ದೇಶದಿಂದ ಸನಾತನ ಸಂಸ್ಥೆಯ ವತಿಯಿಂದ ಮೇ ೧೭ ರಂದು ‘ಶ್ರೀ ರಾಜಮಾತಂಗಿ ಮಹಾಯಜ್ಞ’ವನ್ನು ಆಯೋಜಿಸಲಾಗಿದೆ. ಶ್ರೀ ಗಣೇಶನ ಕೃಪಾಶೀರ್ವಾದದಿಂದ ಈ ಯಜ್ಞ ಸಮಾರಂಭವು ನಿರ್ವಿಘ್ನವಾಗಿ ನೆರವೇರಲಿ ಎಂದು, ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಸದ್ಗುರು ಅನುರಾಧಾ ವಾಡೇಕರ್ ಅವರ ಶುಭಹಸ್ತದಿಂದ ಮೇ ೭ ರಂದು ಯಜ್ಞಕ್ಕಾಗಿ ನಿಗದಿಪಡಿಸಿದ ಮೈದಾನದಲ್ಲಿ ವಿಘ್ನಹರ್ತ ಶ್ರೀ ಮಹಾಗಣಪತಿ ಮತ್ತು ಭೂಮಾತೆಯ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಪೂ. (ಸೌ.) ಸಂಗೀತಾ ಜಾಧವ್ ಅವರ ವಂದನೀಯ ಉಪಸ್ಥಿತಿಯೂ ಇತ್ತು. ಈ ವೇಳೆ ಸನಾತನ ಸಂಸ್ಥೆಯ ಸಾಧಕರು ಕೂಡ ಉಪಸ್ಥಿತರಿದ್ದರು.

ಸನಾತನದ ಸಾಧಕ ಪುರೋಹಿತ ಶ್ರೀ. ಶ್ರೇಯಸ ಪಿಸೋಳ್ಕರ್ ಅವರು ಈ ಪೂಜಾವಿಧಿಯ ಪೌರೋಹಿತ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಾಧಕರು ಚೈತನ್ಯ ಮತ್ತು ಆನಂದವನ್ನು ಅನುಭವಿಸಿ, ಶ್ರೀ ರಾಜಮಾತಂಗಿದೇವಿಯ ಅಸ್ತಿತ್ವ ಮತ್ತು ಆಶೀರ್ವಾದದ ಅನುಭೂತಿಯನ್ನು ಪಡೆದರು. ಮೇ ೧೭ ರಂದು ಪ್ರಭಾದೇವಿಯಲ್ಲಿರುವ ಶ್ರೀ ಸಿದ್ಧಿವಿನಾಯಕ ಮಂದಿರದ ಹಿಂಭಾಗದಲ್ಲಿರುವ ನರ್ದುಲ್ಲಾ ಟ್ಯಾಂಕ್ ಮೈದಾನದಲ್ಲಿ ಮಧ್ಯಾಹ್ನ ೩.೩೦ ರಿಂದ ಸಂಜೆ ೭.೩೦ ರವರೆಗೆ ಈ ಮಹಾಯಜ್ಞವು ನಡೆಯಲಿದೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ