ಸದ್ಗುರು ಅನುರಾಧಾ ವಾಡೇಕರ್ ಅವರ ಶುಭಹಸ್ತದಿಂದ ಮುಂಬಯಿನಲ್ಲಿ ಶ್ರೀ ಮಹಾಗಣಪತಿ ಮತ್ತು ಭೂಮಿ ಪೂಜೆ !

ಮೇ ೧೭ ರಂದು ನಡೆಯಲಿರುವ ಶ್ರೀ ರಾಜಮಾತಂಗಿ ಮಹಾಯಜ್ಞದ ನಿಮಿತ್ತ...

ಮುಂಬಯಿ, ಮೇ ೧೦ (ವಾರ್ತೆ.) – ಪ್ರಸ್ತುತ ಯುದ್ಧದ ಸಮಯದಲ್ಲಿ ತಪೋಭೂಮಿಯಾದ ಭಾರತಕ್ಕೆ ರಕ್ಷಾಕವಚ ದೊರೆಯಲಿ ಮತ್ತು ಭಾರತದ ಸರ್ವಾಂಗೀಣ ಅಭಿವೃದ್ಧಿಯಾಗಲಿ ಎಂಬ ಉದ್ದೇಶದಿಂದ ಸನಾತನ ಸಂಸ್ಥೆಯ ವತಿಯಿಂದ ಮೇ ೧೭ ರಂದು ‘ಶ್ರೀ ರಾಜಮಾತಂಗಿ ಮಹಾಯಜ್ಞ’ವನ್ನು ಆಯೋಜಿಸಲಾಗಿದೆ. ಶ್ರೀ ಗಣೇಶನ ಕೃಪಾಶೀರ್ವಾದದಿಂದ ಈ ಯಜ್ಞ ಸಮಾರಂಭವು ನಿರ್ವಿಘ್ನವಾಗಿ ನೆರವೇರಲಿ ಎಂದು, ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಸದ್ಗುರು ಅನುರಾಧಾ ವಾಡೇಕರ್ ಅವರ ಶುಭಹಸ್ತದಿಂದ ಮೇ ೭ ರಂದು ಯಜ್ಞಕ್ಕಾಗಿ ನಿಗದಿಪಡಿಸಿದ ಮೈದಾನದಲ್ಲಿ ವಿಘ್ನಹರ್ತ ಶ್ರೀ ಮಹಾಗಣಪತಿ ಮತ್ತು ಭೂಮಾತೆಯ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಪೂ. (ಸೌ.) ಸಂಗೀತಾ ಜಾಧವ್ ಅವರ ವಂದನೀಯ ಉಪಸ್ಥಿತಿಯೂ ಇತ್ತು. ಈ ವೇಳೆ ಸನಾತನ ಸಂಸ್ಥೆಯ ಸಾಧಕರು ಕೂಡ ಉಪಸ್ಥಿತರಿದ್ದರು.

ಶ್ರೀ ರಾಜಮಾತಂಗಿ ಮಹಾಯಜ್ಞದ ನಿಮಿತ್ತ ಶ್ರೀ ಮಹಾಗಣಪತಿ ಮತ್ತು ಭೂಮಿ ಪೂಜೆಯನ್ನು ನೆರವೇರಿಸುವಾಗ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರು ಅನುರಾಧಾ ವಾಡೇಕರ್, ಪೌರೋಹಿತ್ಯವನ್ನು ನೆರವೇರಿಸುವಾಗ ಶ್ರೀ. ಶ್ರೇಯಸ್ ಪಿಸೋಳ್ಕರ್ ಮತ್ತು ಸನಾತನ ಸಂಸ್ಥೆಯ ಪೂ. (ಸೌ.) ಸಂಗೀತಾ ಜಾಧವ್.

ಸನಾತನದ ಸಾಧಕ ಪುರೋಹಿತ ಶ್ರೀ. ಶ್ರೇಯಸ ಪಿಸೋಳ್ಕರ್ ಅವರು ಈ ಪೂಜಾವಿಧಿಯ ಪೌರೋಹಿತ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಾಧಕರು ಚೈತನ್ಯ ಮತ್ತು ಆನಂದವನ್ನು ಅನುಭವಿಸಿ, ಶ್ರೀ ರಾಜಮಾತಂಗಿದೇವಿಯ ಅಸ್ತಿತ್ವ ಮತ್ತು ಆಶೀರ್ವಾದದ ಅನುಭೂತಿಯನ್ನು ಪಡೆದರು. ಮೇ ೧೭ ರಂದು ಪ್ರಭಾದೇವಿಯಲ್ಲಿರುವ ಶ್ರೀ ಸಿದ್ಧಿವಿನಾಯಕ ಮಂದಿರದ ಹಿಂಭಾಗದಲ್ಲಿರುವ ನರ್ದುಲ್ಲಾ ಟ್ಯಾಂಕ್ ಮೈದಾನದಲ್ಲಿ ಮಧ್ಯಾಹ್ನ ೩.೩೦ ರಿಂದ ಸಂಜೆ ೭.೩೦ ರವರೆಗೆ ಈ ಮಹಾಯಜ್ಞವು ನಡೆಯಲಿದೆ.