ಶ್ರೀ ಸಿದ್ಧಿವಿನಾಯಕನ ಚರಣಗಳಿಗೆ ಶ್ರೀ ರಾಜಮಾತಂಗಿ ಮಹಾಯಜ್ಞದ ಆಮಂತ್ರಣ ಪತ್ರಿಕೆ ಅರ್ಪಣೆ !

ಮುಂಬಯಿ, ಮೇ ೧೦ (ವಾರ್ತೆ.) – ಇಲ್ಲಿನ ಜಾಗೃತ ಮತ್ತು ಸ್ವಯಂಭೂ ಶ್ರೀ ಸಿದ್ಧಿವಿನಾಯಕನ ದರ್ಶನ ಪಡೆದು, ಸನಾತನ ಸಂಸ್ಥೆಯ ಸಾಧಕರು ಗಣೇಶನ ಚರಣಗಳಿಗೆ ಶ್ರೀ ರಾಜಮಾತಂಗಿ ಮಹಾಯಜ್ಞದ ಆಮಂತ್ರಣ ಪತ್ರಿಕೆಯನ್ನು ಅರ್ಪಿಸಿದರು. ಭಾರತದ ಸರ್ವಾಂಗೀಣ ಅಭಿವೃದ್ಧಿಗಾಗಿ ನಡೆಯುತ್ತಿರುವ ಈ ಮಹಾಯಜ್ಞವು ನಿರ್ವಿಘ್ನವಾಗಿ ನೆರವೇರಲಿ ಎಂದು ಸಾಧಕರು ಶ್ರೀ ಸಿದ್ಧಿವಿನಾಯಕನ ಚರಣಗಳಲ್ಲಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಿ ‘ಶ್ರೀ’ಗಳ ಆಶೀರ್ವಾದ ಪಡೆದರು.

ಎಡಭಾಗದಿಂದ ಶ್ರೀ. ಸಾಗರ ಚೋಪದಾರ್, ಶ್ರೀ. ಸದಾನಂದ ಸರವಣಕರ್ ಅವರಿಗೆ ಆಮಂತ್ರಣ ನೀಡುತ್ತಿರುವ ಶ್ರೀ. ಅಭಯ ವರ್ತಕ್, ಪಕ್ಕದಲ್ಲಿ ಸೌ. ಮನಾಲಿ ನಾಯಕ್, ಸೌ. ಕಲ್ಪನಾ ಕಾರ್ಯೇಕರ್.

 

ಎಡಭಾಗದಿಂದ ಶ್ರೀ. ಸಾಗರ ಚೋಪದಾರ್, ಸೌ. ಕಲ್ಪನಾ ಕಾರ್ಯೇಕರ್, ಸೌ. ಮನಾಲಿ ನಾಯಕ್, ಶ್ರೀ. ಅಭಯ ವರ್ತಕ್, ಆಮಂತ್ರಣವನ್ನು ಸ್ವೀಕರಿಸುತ್ತಿರುವ ಆಚಾರ್ಯ ಪವನ್ ತ್ರಿಪಾಠಿ ಮತ್ತು ಶ್ರೀ. ಭಾಸ್ಕರ ಶೆಟ್ಟಿ

ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ್, ಸನಾತನದ ಸಾಧಕಿಯರಾದ ಸೌ. ಮನಾಲಿ ನಾಯಕ್, ಸೌ. ಕಲ್ಪನಾ ಕಾರ್ಯೇಕರ್, ಶ್ರೀ. ರವೀಂದ್ರ ನಲಾವಡೆ, ಹಿಂದೂ ಜನಜಾಗೃತಿ ಸಮಿತಿಯ ಮುಂಬಯಿ, ಥಾಣೆ ಮತ್ತು ರಾಯಗಡ ಜಿಲ್ಲಾ ಸಂಯೋಜಕ ಶ್ರೀ. ಸಾಗರ ಚೋಪದಾರ್ ಉಪಸ್ಥಿತರಿದ್ದರು. ‘ಶ್ರೀ ಸಿದ್ಧಿವಿನಾಯಕ ಗಣಪತಿ ಮಂದಿರ ಟ್ರಸ್ಟ್’ನ ಅಧ್ಯಕ್ಷ ಶ್ರೀ. ಸದಾನಂದ ಸರವಣಕರ್, ಖಜಾಂಚಿ ಆಚಾರ್ಯ ಪವನ ತ್ರಿಪಾಠಿ, ಧರ್ಮದರ್ಶಿ ಶ್ರೀ. ಭಾಸ್ಕರ್ ಶೆಟ್ಟಿ ಅವರಿಗೆ ಮಹಾಯಜ್ಞದ ಆಮಂತ್ರಣ ನೀಡಲಾಯಿತು.