Bengal Jagannath Temple : ಬಂಗಾಳದಲ್ಲಿ ಶ್ರೀ ಜಗನ್ನಾಥ ದೇವಾಲಯದ ಭಾಗವು ತೃಣಮೂಲ ಕಾಂಗ್ರೆಸ್ ನ ವಶದಿಂದ ಮುಕ್ತ!

ಬೀರ್‌ಭೂಮ್ (ಬಂಗಾಳ) – ಜಿಲ್ಲೆಯ ಭಗವಾನ್ ಜಗನ್ನಾಥ ದೇವಾಲಯದ ಒಂದು ಭಾಗವನ್ನು ತೃಣಮೂಲ ಕಾಂಗ್ರೆಸ್‌ನ ಗೂಂಡಾ ಕಾರ್ಯಕರ್ತರು ಅತಿಕ್ರಮಿಸಿದ್ದರು. ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಭಾಜಪದ ಕಾರ್ಯಕರ್ತರು ಆಕ್ರಮಣಕಾರಿ ನಿಲುವು ತಳೆದು, ಈ ಜಾಗವನ್ನು ತೃಣಮೂಲದ ವಶದಿಂದ ಬಿಡಿಸಿ ಪುನಃ ದೇವಾಲಯ ಸಮಿತಿಯ ವಶಕ್ಕೆ ನೀಡಿದ್ದಾರೆ.

ಈ ದೇವಾಲಯದ ಜಾಗದ ಮೇಲೆ ನಿಯಂತ್ರಣ ಸಾಧಿಸಿ ಅಲ್ಲಿ ‘ಶರಿಯತ್ ಕಾನೂನು’ ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಭಾಜಪದ ಕಾರ್ಯಕರ್ತರು ಈ ಹಿಂದೆ ಆರೋಪಿಸಿದ್ದರು. ‘ದೇವಾಲಯದ ಜಾಗವನ್ನು ಕಬಳಿಸಿ ಅಲ್ಲಿ ಧಾರ್ಮಿಕ ಸರ್ವಾಧಿಕಾರ ನಡೆಸುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂಬ ನಿಲುವನ್ನು ಭಾಜಪ ಬೆಂಬಲಿಗರು ವ್ಯಕ್ತಪಡಿಸಿದ್ದಾರೆ’, ಈ ಕ್ರಮದ ನಂತರ ಪರಿಸರದಲ್ಲಿ ಉದ್ವಿಗ್ನತೆಯಿಂದ ಕೂಡಿದ ಶಾಂತಿ ನೆಲೆಸಿದೆ.