Rudrapur Muslims Encroachment : ರುದ್ರಪುರ (ಉತ್ತರಾಖಂಡ) ದಲ್ಲಿ ಮುಸ್ಲಿಂ ವ್ಯಕ್ತಿಯಿಂದ ಸರಕಾರಿ ಭೂಮಿಯ ಮೇಲೆ ಮನೆ ನಿರ್ಮಾಣ!

  • ​ಮನೆಯಲ್ಲಿಯೇ ತಂದೆಯ ಶವ ಹೂತು ಗೋರಿ ನಿರ್ಮಾಣ!

  • ​ಆಡಳಿತದಿಂದ ಕ್ರಮ ಕೈಗೊಳ್ಳಲಾಗುವುದು!

ರುದ್ರಪುರ (ಉತ್ತರಾಖಂಡ) – ಇಲ್ಲಿನ ಸರಕಾರಿ ಭೂಮಿಯನ್ನು ಅಬ್ಬಾಸ್ ಎಂಬುವವನು ಅತಿಕ್ರಮಿಸಿ ಮನೆ ನಿರ್ಮಿಸಿದ್ದಾನೆ ಮತ್ತು ತಂದೆಯ ಸಾವಿನ ನಂತರ ಅವರ ಶವವನ್ನು ಅಲ್ಲಿಯೇ ಹೂತು ಗೋರಿಯನ್ನು ಕಟ್ಟಿದ್ದಾನೆ. ಮೇಯರ್ ವಿಕಾಸ್ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಪಂಕಜ್ ಉಪಾಧ್ಯಾಯ ಮತ್ತು ಮಹಾನಗರ ಪಾಲಿಕೆ ಆಯುಕ್ತ ಶಿಪ್ರಾ ಜೋಶಿ-ಪಾಂಡೆ ಸೇರಿದಂತೆ ಮಹಾನಗರ ಪಾಲಿಕೆ ಹಾಗೂ ಆಡಳಿತ ಮಂಡಳಿಯ ತಂಡವು ಪರಿಸರದ ಪರಿಶೀಲನೆ ನಡೆಸುತ್ತಿತ್ತು. ಈ ಸಮಯದಲ್ಲಿ ಸ್ಥಳೀಯ ಜನರು ಈ ಗೋರಿಯ ಬಗ್ಗೆ ಅವರಿಗೆ ದೂರು ನೀಡಿದರು.

ಆ ನಂತರ ಆಡಳಿತ ಮಂಡಳಿಯು ತಕ್ಷಣವೇ ಈ ಕಟ್ಟಡವನ್ನು ವಶಪಡಿಸಿಕೊಂಡಿದೆ. ‘ಈ ಪ್ರಕರಣದ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿಗಳು ತಿಳಿಸಿದರೆ, ಮೇಯರ್ ಅವರು ‘ಗೋರಿಯನ್ನು ತೆರವುಗೊಳಿಸಲಾಗುವುದು’ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

​ದೇಶದಾದ್ಯಂತ ಬಹುತೇಕ ಸರಕಾರಿ ಭೂಮಿಯನ್ನು ಅತಿಕ್ರಮಿಸಲಾಗುತ್ತಿದೆ ಮತ್ತು ಹೆಚ್ಚಿನ ಸಮಯ ಆಡಳಿತವು ನಿದ್ರಾವಸ್ಥೆಯಲ್ಲಿರುತ್ತದೆ!