ದಾದಾಗಿರಿ ಮತ್ತು ಸುಲಿಗೆಯಿಂದಾಗಿ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಸೋಲು! – ಹಿರಿಯ ನಾಯಕ ಸಂಸದ ಸೌಗತ ರಾಯ್

ತೃಣಮೂಲ ಕಾಂಗ್ರೆಸ್ಸಿನ ಹಿರಿಯ ನಾಯಕ ಸಂಸದ ಸೌಗತ ರಾಯ್ ಅವರ ಸ್ವೀಕೃತಿ !

ಕೋಲಕಾತಾ (ಬಂಗಾಳ) – ಚುನಾವಣಾ ಸಮಯದಲ್ಲಿ ಮತ್ತು ಅದಕ್ಕೂ ಮೊದಲು ಬಂಗಾಳದಲ್ಲಿ ಅತ್ಯಂತ ಕೆಳಮಟ್ಟದ ದಾದಾಗಿರಿಯ ವಾತಾವರಣವಿತ್ತು. ಸ್ಥಳೀಯ ಮಟ್ಟದ ನಾಯಕರು ಮತ್ತು ‘ದಾದಾ’ಗಳು (ಗುಂಡಾ ಪ್ರವೃತ್ತಿಯ ಜನರು) ತಪ್ಪು ವಾತಾವರಣವನ್ನು ನಿರ್ಮಿಸಿದರು. ಅವರು ಜನರಿಂದ ಹಣ ವಸೂಲಿ ಮಾಡಿದರು, ಇದರಿಂದಾಗಿ ಪಕ್ಷದ ಬಗ್ಗೆ ಜನರಲ್ಲಿ ನಕಾರಾತ್ಮಕ ಸಂದೇಶ ಹೋಯಿತು ಎಂದು ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಸಂಸದ ಸೌಗತ ರಾಯ್ ಅವರು ‘ನ್ಯೂಸ್ 18’ ಸುದ್ದಿ ವಾಹಿನಿಯ ಮುಂದೆ ಒಪ್ಪಿಕೊಂಡಿದ್ದಾರೆ.

ಒಂದೆಡೆ ಮಮತಾ ಬ್ಯಾನರ್ಜಿ ಅವರು ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆದಿಲ್ಲ ಎಂದು ಹೇಳುತ್ತಿದ್ದರೆ, ಇನ್ನೊಂದೆಡೆ ಸೌಗತ ರಾಯ್ ಅವರು ಮತದಾನವು ಸಂಪೂರ್ಣ ಶಾಂತಿಯುತವಾಗಿ ನಡೆದಿದೆ ಎಂದು ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ. ಮಮತಾ ಬ್ಯಾನರ್ಜಿ ಅವರು ‘ಸೋಲಿನ ಹಿಂದೆ ಪಿತೂರಿಯಿದೆ’ ಎಂದು ಹೇಳಿದರೆ, ರಾಯ್ ಅವರು ತಳಮಟ್ಟದ ನಮ್ಮದೇ ನಾಯಕರ ದಾದಾಗಿರಿ ಮತ್ತು ಸುಲಿಗೆಯಿಂದಾಗಿ ಪಕ್ಷದ ಬೇರುಗಳು ಶಿಥಿಲಗೊಂಡಿವೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಸೌಗತ ರಾಯ್ ಅವರು ಮಂಡಿಸಿದ ಪ್ರಮುಖ ಅಂಶಗಳು

1. ಸ್ಥಳೀಯ ಮಟ್ಟದಲ್ಲಿ ಅಧಿಕಾರದ ದುರುಪಯೋಗ ಮತ್ತು ದಾದಾಗಿರಿ ನಡೆದಿತ್ತು.

2. ಪಕ್ಷದ ವಿರುದ್ಧ ದೊಡ್ಡ ಮಟ್ಟದ ಆಡಳಿತ ವಿರೋಧಿ ಅಲೆ ಇತ್ತು, ಇದನ್ನು ಅರ್ಥಮಾಡಿಕೊಳ್ಳುವಲ್ಲಿ ನಾಯಕತ್ವ ವಿಫಲವಾಯಿತು.

3. ಹಿಂದೂ ಮತಗಳ ದೊಡ್ಡ ಪ್ರಮಾಣದ ಧ್ರುವೀಕರಣ (ಒಗ್ಗೂಡುವಿಕೆ) ಆಯಿತು, ಇದು ಪಕ್ಷದ ಸೋಲಿಗೆ ದೊಡ್ಡ ಕಾರಣವಾಯಿತು.

4. ಕೇಂದ್ರ ಅರೆಸೇನಾ ಪಡೆಗಳ ಕಟ್ಟುನಿಟ್ಟಿನ ಶಿಸ್ತಿನಿಂದಾಗಿ ಮತದಾನವು ಸಂಪೂರ್ಣ ಶಾಂತಿಯುತವಾಗಿ ನಡೆಯಿತು.

5. ಈ ಅಂಶಗಳ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ.

ಸಂಪಾದಕೀಯ ನಿಲುವು

ಸೋಲಿಗೆ ಚುನಾವಣಾ ಆಯೋಗ ಮತ್ತು ಬಿಜೆಪಿಯನ್ನು ದೂಷಿಸುವ ಮಮತಾ ಬ್ಯಾನರ್ಜಿ ಅವರಿಗೆ ಮುಖಭಂಗವಾಗಿದ್ದೂ, ಅವರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಸುಧಾರಣೆ ಮಾಡಿಕೊಳ್ಳದಿದ್ದರೆ, ಅವರ ಪಕ್ಷ ಇತಿಹಾಸ ಸೇರುವುದರಲ್ಲಿ ಸಂಶಯವಿಲ್ಲ!