ಭಾರತದ ಗುಪ್ತಚರ ಸಂಸ್ಥೆ 'ರಾ'ದ ಮಾಜಿ ಏಜೆಂಟ್ ಲಕ್ಕಿ ಬಿಷ್ಟ ಅವರಿಂದ ಭಾಜಪ ಬಳಿ ಆಗ್ರಹ

ನವ ದೆಹಲಿ – ಭಾಜಪ ಬಂಗಾಳದಲ್ಲಿ ಸಚಿವ ಸಂಪುಟಕ್ಕಾಗಿ ಸಚಿವರ ಪಟ್ಟಿಯನ್ನು ಸಿದ್ಧಪಡಿಸುವ ಮೊದಲು ಜಿಹಾದಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಇದರಿಂದ ಕಳೆದ ೧೪ ವರ್ಷಗಳಿಂದ ಬಂಗಾಳವನ್ನು ಹಿಂಸೆಯಲ್ಲಿ ಬೇಯಿಸಿದವರಿಗೆ ಶಿಕ್ಷೆ ನೀಡಬಹುದು ಎಂದು ಭಾರತದ ಗುಪ್ತಚರ ಸಂಸ್ಥೆ ‘ರಾ’ದ ಮಾಜಿ ಏಜೆಂಟ್ ಲಕ್ಕಿ ಬಿಷ್ಟ ಅವರು ಭಾಜಪವನ್ನು ಆಗ್ರಹಿಸಿದ್ದಾರೆ.
ಲಕ್ಕಿ ಬಿಷ್ಟ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಬಂಗಾಳದಲ್ಲಿ ಶೀಘ್ರದಲ್ಲೇ ಹೊಸ ಸರಕಾರ ಅಸ್ತಿತ್ವಕ್ಕೆ ಬರಲಿದೆ. ಜನರು ನಿಮಗೆ (ಭಾಜಪಕ್ಕೆ) ಅಪಾರ ಪ್ರೀತಿಯನ್ನು ನೀಡಿ, ಪೂರ್ಣ ಬಹುಮತದೊಂದಿಗೆ ನಿಮ್ಮನ್ನು ಆರಿಸಿ ತಂದಿದ್ದಾರೆ. ಶೀಘ್ರದಲ್ಲೇ ನಿಮ್ಮ ಸಚಿವ ಸಂಪುಟದ ಪಟ್ಟಿ ಸಿದ್ಧವಾಗಲಿದೆ; ಆದರೆ ನನ್ನದೊಂದು ವಿನಂತಿಯಿದೆ. ಸಚಿವರ ಪಟ್ಟಿಯನ್ನು ಮಾಡುವ ಮೊದಲು ಆ ಜಿಹಾದಿಗಳ ಪಟ್ಟಿಯನ್ನು ಖಂಡಿತವಾಗಿ ಸಿದ್ಧಪಡಿಸಿ, ಯಾರ ಕೃತ್ಯಗಳಿಂದಾಗಿ ೧೪ ವರ್ಷ ೩೪೯ ದಿನಗಳ ಕಾಲ ಇಡೀ ಬಂಗಾಳವು ಬೆಂಕಿಯಲ್ಲಿ ಬೇಯುವಂತಾಯಿತು. ಈ ಜಿಹಾದಿಗಳು ನಿರಪರಾಧಿ ಜನರನ್ನು ಮನೆಯಿಂದ ಹೊರಗೆ ಎಳೆದು ತಂದು ಗುಂಡಿಕ್ಕಿ ಕೊಂದಿದ್ದಾರೆ ಮತ್ತು ಮಹಿಳೆಯರ ಮೇಲೆ ಬಲಾತ್ಕಾರ ಮಾಡಿದ್ದಾರೆ. ಹೊಸ ಸರಕಾರಕ್ಕೆ ನನ್ನದೊಂದು ವಿನಂತಿಯಿದೆ, ಆ ಜಿಹಾದಿಗಳನ್ನು ಅವರ ಯೋಗ್ಯ ಸ್ಥಾನಕ್ಕೆ (ಕಾರಾಗೃಹಕ್ಕೆ) ಖಂಡಿತವಾಗಿಯೂ ತಲುಪಿಸಿ, ಎಂದು ಮನವಿ ಮಾಡಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ