ಬಂಗಾಳದಲ್ಲಿ 64 ವರ್ಷಗಳ ಹಿಂದೆ ನಡೆದ ದಂಗೆಗಳಲ್ಲಿ ಹಿಂದೂಗಳ ಕಿರುಕುಳ ಮತ್ತು ಮುಸ್ಲಿಮರ ಓಲೈಕೆಯ ಅಡಿಪಾಯ ಹಾಕಲಾಗಿತ್ತು!

  • ಭಾಜಪ ಸಂಸದ ಶ್ರೀ ನಿಶಿಕಾಂತ್ ದುಬೆ ಅವರ ಆರೋಪ

  • ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ನೆಹರೂ ಕಾರಣ ಎಂಬ ಆರೋಪ!

ನವದೆಹಲಿ – ಬಂಗಾಳದಲ್ಲಿ 64 ವರ್ಷಗಳ ಹಿಂದೆ ನಡೆದ ದಂಗೆಗಳಲ್ಲಿ ಹಿಂದೂಗಳ ಕಿರುಕುಳಕ್ಕೆ ಅಡಿಪಾಯ ಹಾಕಲಾಯಿತು ಎಂದು ಭಾಜಪ ಸಂಸದ ನಿಶಿಕಾಂತ್ ದುಬೆ ಅವರು ‘X’ (ಟ್ವಿಟರ್) ನಲ್ಲಿ ಪೋಸ್ಟ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ. ಇದಕ್ಕೆ ನೆಹರೂ ಅವರೇ ಕಾರಣ ಮತ್ತು ಇದು ಕಾಂಗ್ರೆಸ್‌ನ ಕರಾಳ ಅಧ್ಯಾಯವಾಗಿದೆ ಎಂದು ಅವರು ಹೇಳಿದ್ದಾರೆ. ಸಂಸದ ದುಬೆ ಅವರು ತಮ್ಮ ಪೋಸ್ಟ್‌ನೊಂದಿಗೆ ಕೆಲವು ದಾಖಲೆಗಳನ್ನೂ ಸಹ ಹಂಚಿಕೊಂಡಿದ್ದಾರೆ.

ನಿಶಿಕಾಂತ್ ದುಬೆ ಅವರು ತಮ್ಮ ಪೋಸ್ಟ್ ನಲ್ಲಿ,

1. ಇಂದು ಬಂಗಾಳದಲ್ಲಿ ನಡೆಯುತ್ತಿರುವ ಹಿಂದೂಗಳ ಕಿರುಕುಳ ಮತ್ತು ಮುಸ್ಲಿಮರ ಓಲೈಕೆಯ ಅಡಿಪಾಯವು ಮೇ 3, 1962 ರಂದು ಹಾಕಲ್ಪಟ್ಟಿತು. ಮೇ 3 ರಿಂದ ಮೇ 30, 1962 ರ ಅವಧಿಯಲ್ಲಿ ಬಂಗಾಳದ ಮಾಲ್ಡಾ, ಮುರ್ಷಿದಾಬಾದ್, ನದಿಯಾ ಮತ್ತು ಕೂಚ್ ಬೆಹಾರ್ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂ-ಮುಸ್ಲಿಂ ದಂಗೆಗಳು ನಡೆದಿದ್ದವು. ಆ ದಂಗೆಗಳಲ್ಲಿ ಬಹಳಷ್ಟು ಜನರು ಸಾವನ್ನಪ್ಪಿದರು ಮತ್ತು ಅನೇಕರು ನಿರಾಶ್ರಿತರಾದರು.

2. ಇಂತಹದೇ ಪರಿಸ್ಥಿತಿಯನ್ನು ಪೂರ್ವ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳೂ ಅನುಭವಿಸಿದ್ದರು. ಅಲ್ಲಿನ ಹಿಂದೂಗಳು ಸಾವನ್ನಪ್ಪಿದರು ಅಥವಾ ಓಡಿಹೋಗಿ ನಿರಾಶ್ರಿತರಾದರು. ದಂಗೆಗೆ ತುತ್ತಾದವರಲ್ಲಿ ಹೆಚ್ಚಿನವರು ಮತುವಾ ಅಂದರೆ ಪರಿಶಿಷ್ಟ ಜಾತಿ ಸಮುದಾಯದವರು. ಈ ಸಮುದಾಯದವರಿಗೆ ಮೋದಿ ಸರಕಾರವು ಪೌರತ್ವವನ್ನು ನೀಡಿದೆ.

3. ನೆಹರೂ ಅವರು ಯಾವಾಗಲೂ ಸಂಸತ್ತಿನ ಒಳಗೆ ಮತ್ತು ಹೊರಗೆ ಮುಸ್ಲಿಮರ ಪರವಾಗಿಯೇ ಮಾತನಾಡುತ್ತಿದ್ದರು. ರಾಜಗೋಪಾಲಚಾರಿ ಅವರಿಗೆ ಬರೆದ ಪತ್ರಗಳಿಂದ ಕಾಂಗ್ರೆಸ್‌ನ ಮತ ಬ್ಯಾಂಕ್ ರಾಜಕಾರಣದ ಬಗ್ಗೆ ಮಾಹಿತಿ ಸಿಗುತ್ತದೆ. ಸಂಸದ ದುಬೆ ಅವರು ಈ ಪತ್ರವನ್ನೂ ಸಹ ಬಹಿರಂಗಪಡಿಸಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸ್‌ನ ಈ ಹಿಂದೂ ವಿರೋಧಿ ನೀತಿಯಿಂದಾಗಿ ಇಂದು ದೇಶದ 9 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಇಂತಹ ಪರಿಸ್ಥಿತಿ ಇತರ ರಾಜ್ಯಗಳಲ್ಲಿ ಬರಬಾರದು ಎಂದರೆ, ಹಿಂದೂಗಳು ಈಗಲೇ ಕಾಂಗ್ರೆಸ್ ಅನ್ನು ರಾಜಕೀಯವಾಗಿ ನಾಶಪಡಿಸುವ ಅಡಿಪಾಯ ಹಾಕಬೇಕು!