ನಾಜಿ ವಿಚಾರಧಾರೆಯ ಆರೋಪಿಯ ಬಂಧನ

ಆಮಸ್ಟರಡ್ಯಾಮ್ (ನೆದರಲ್ಯಾಂಡ) – ನೆದರಲ್ಯಾಂಡ ಮುಂದಿನ ರಾಣಿ ರಾಜಕುಮಾರಿ ಕ್ಯಾಥರಿನಾ ಅಮಾಲಿಯಾ ಮತ್ತು ಆಕೆಯ ಸಹೋದರಿ ರಾಜಕುಮಾರಿ ಅಲೆಕ್ಸಿಯಾ ಅವರ ಹತ್ಯೆಗೆ ಸಂಚು ರೂಪಿಸಿದ್ದ ೩೩ ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಬಳಿ ಕೊಡಲಿ ಮತ್ತು ‘ಬ್ಲಡ್ ಬಾತ್’ (ಯುದ್ಧ ಅಥವಾ ದಂಗೆಯ ಸಮಯದಲ್ಲಿ ಅನೇಕರು ಮೃತಪಡುವುದನ್ನು ‘ರಕ್ತಸ್ನಾನ’ ಎನ್ನಲಾಗುತ್ತದೆ) ಎಂಬ ಉಲ್ಲೇಖವಿರುವ ಪತ್ರ ಪತ್ತೆಯಾಗಿದೆ. ಈ ಘಟನೆಯ ನಂತರ ನೆದರಲ್ಯಾಂಡ ರಾಜಮನೆತನದ ಭದ್ರತೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.
ಬಂಧಿತ ವ್ಯಕ್ತಿಯು ಕಟ್ಟಾ ಬಲಪಂಥೀಯ ವಿಚಾರಧಾರೆಯವನಾಗಿದ್ದು, ನಾಜಿ ವಿಚಾರಗಳಿಂದ ಪ್ರೇರಿತನಾಗಿ ರಾಜಕುಮಾರಿಯರ ಹತ್ಯೆಗೆ ಸಂಚು ರೂಪಿಸಿದ್ದನು. ಪೊಲೀಸರು ಆರೋಪಿಯಿಂದ ಜಪ್ತಿ ಮಾಡಿದ ಕೊಡಲಿಯ ಮೇಲೆ ರಾಜಕುಮಾರಿ ಅಲೆಕ್ಸಿಯಾಳ ಹೆಸರು, ಇಸ್ರೇಲಿ ಗುಪ್ತಚರ ಸಂಸ್ಥೆ ‘ಮೊಸಾದ್’ ಮತ್ತು ನಾಜಿ ಕಾಲದ ‘ಸೀಗ್ ಹೇಲ್’ ಎಂಬ ಪದಗಳನ್ನು ಕೆತ್ತಲಾಗಿತ್ತು.
ರಾಜಕುಮಾರಿ ಅಮಾಲಿಯಾ (೨೨ ವರ್ಷ) ಕಳೆದ ಹಲವು ವರ್ಷಗಳಿಂದ ಸತತವಾಗಿ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಬೆದರಿಕೆಗಳ ಕಾರಣದಿಂದಾಗಿ ಸುರಕ್ಷತೆಯ ದೃಷ್ಟಿಯಿಂದ ಆಕೆಯು ಆಮಸ್ಟರಡ್ಯಾಮನಲ್ಲಿನ ತನ್ನ ವಿದ್ಯಾರ್ಥಿ ಜೀವನವನ್ನು ತೊರೆಯಬೇಕಾಯಿತು ಮತ್ತು ೨೦೨೪ ರಲ್ಲಿ ಕೆಲವು ಕಾಲ ಸ್ಪೇನ್ ನ ಮ್ಯಾಡ್ರಿಡ್ ನಲ್ಲಿ ರಹಸ್ಯವಾಗಿ ವಾಸಿಸಬೇಕಾಗಿತ್ತು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!