ಜಿಹಾದಿ ಭಯೋತ್ಪಾದಕರು ನಾಶ ಮಾಡಿದ ದೇವಾಲಯದ ಭೂಮಿ ೩೬ ವರ್ಷಗಳ ನಂತರ ಮತ್ತೆ ಕಾಶ್ಮೀರಿ ಹಿಂದೂಗಳ ವಶಕ್ಕೆ !

ಕುಪ್ವಾಡಾ (ಕಾಶ್ಮೀರ) – ಜಿಹಾದಿ ಭಯೋತ್ಪಾದಕರು ಕುಪ್ವಾಡಾದ ಚಾಂದಿಗಾಮ್‌ನಲ್ಲಿ ನಾಶ ಮಾಡಿದ ಒಂದು ದೇವಾಲಯದ ಭೂಮಿಯನ್ನು ೩೬ ವರ್ಷಗಳ ನಂತರ ಆಡಳಿತ ಮಂಡಳಿಯಿಂದ ಮತ್ತೆ ಕಾಶ್ಮೀರಿ ಹಿಂದೂಗಳ ವಶಕ್ಕೆ ನೀಡಲಾಯಿತು, ಎಂಬ ಮಾಹಿತಿಯನ್ನು ಭಾಜಪದ ಜಮ್ಮು-ಕಾಶ್ಮೀರ ಶಾಖೆಯು ‘ಎಕ್ಸ್’ ಮೇಲಿನ ಪೋಸ್ಟ್ ಮೂಲಕ ನೀಡಿದೆ. ಸ್ಥಳೀಯ ಮಟ್ಟದಲ್ಲಿ ಇದನ್ನು ದೊಡ್ಡ ಉತ್ಸಾಹದಲ್ಲಿ ಸ್ವಾಗತಿಸಲಾಗಿದೆ. ೧೯೯೦ ರ ದಶಕದಲ್ಲಿ ಜಿಹಾದಿ ಭಯೋತ್ಪಾದನೆಯಿಂದಾಗಿ ಯಾವ ಕುಟುಂಬಗಳಿಗೆ ಕಾಶ್ಮೀರ ಕಣಿವೆಯಿಂದ ಪಲಾಯನ ಮಾಡಬೇಕಾಗಿತ್ತೋ, ಆ ಕುಟುಂಬಗಳಿಗೆ ಇದು ಅತ್ಯಂತ ಭಾವನಾತ್ಮಕ ಕ್ಷಣವಾಗಿತ್ತು.

ಜಿಹಾದಿ ಭಯೋತ್ಪಾದಕರು ಧ್ವಂಸಗೊಳಿಸಿದ್ದರು ದೇವಾಲಯ ಮತ್ತು ಆಶ್ರಮ !

‘ಕಾಶ್ಮೀರಿ ಹಿಂದೂ’ ಹೆಸರಿನ ಒಂದು ‘ಫೇಸ್‌ಬುಕ್ ಪೇಜ್’ ಮೇಲೆ ನೀಡಿರುವ ಮಾಹಿತಿಯ ಪ್ರಕಾರ, ೧೯೯೦ ರಲ್ಲಿ ಜಿಹಾದಿ ಭಯೋತ್ಪಾದಕರು ದೇವಾಲಯ ಮತ್ತು ಆಶ್ರಮದ ಮೇಲೆ ವಶಪಡಿಸಿಕೊಂಡಿದ್ದರು; ಅವರು ಕೇವಲ ಈ ದೇವಾಲಯವನ್ನು ಲೂಟಿ ಮಾಡಿ ಅದಕ್ಕೆ ಬೆಂಕಿ ಹಚ್ಚಲಿಲ್ಲ, ಬದಲಿಗೆ ಅಲ್ಲಿನ ಎಲ್ಲಾ ವಾಸ್ತುಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದರು. ಈಗ ಇದೇ ಪವಿತ್ರ ಸ್ಥಳದಲ್ಲಿ ಭೂಮಿಪೂಜೆ (ಅಡಿಪಾಯ ಸಮಾರಂಭ) ನೆರವೇರಿದ್ದು ಮತ್ತು ಶೀಘ್ರದಲ್ಲೇ ಅಲ್ಲಿ ಒಂದು ಭವ್ಯವಾದ ದೇವಾಲಯ ಮತ್ತು ಆಶ್ರಮದ ನಿರ್ಮಾಣ ಮಾಡಲಾಗುವುದು.

ಸಂಪಾದಕೀಯ ನಿಲುವು

ಇದರೊಂದಿಗೆ ಈ ದೇವಾಲಯ ಮತ್ತು ಹಿಂದೂಗಳನ್ನು ಜಿಹಾದಿ ಭಯೋತ್ಪಾದಕರಿಂದ ರಕ್ಷಿಸುವ ಭರವಸೆಯನ್ನೂ ಸರಕಾರ ನೀಡಬೇಕು !