ಮುಸ್ಲಿಮರು ಮತ್ತು ನಾವು ಯಾವಾಗಲೂ ಸಹೋದರರು ಮತ್ತು ಕಾಂಗ್ರೆಸ್ ಯಾವಾಗಲೂ ಮುಸ್ಲಿಮರ ಬೆನ್ನಿಗೆ ನಿಂತಿದೆ! – Dr. G. Parameshwar

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಹೇಳಿಕೆ

ಬೆಂಗಳೂರು (ಕರ್ನಾಟಕ) – ಮುಸ್ಲಿಂ ಬಾಂಧವರು ಯಾವಾಗಲೂ ನಮ್ಮೊಂದಿಗಿದ್ದಾರೆ. ನಾವು ಮತ್ತು ಅವರು ಯಾವಾಗಲೂ ಸಹೋದರರಂತೆ ಇರುತ್ತೇವೆ. ಮುಂದಿನ ದಿನಗಳಲ್ಲೂ ಈ ಸಂಬಂಧ ಹೀಗೆಯೇ ಮುಂದುವರಿಯಲಿದೆ. ಅಲ್ಪಸಂಖ್ಯಾತ ಸಮುದಾಯದ ಹಿತಾಸಕ್ತಿ ಕಾಪಾಡುವಲ್ಲಿ ಕಾಂಗ್ರೆಸ್ ಪಕ್ಷ ಎಂದಿಗೂ ಹಿಂದೆ ಬಿದ್ದಿಲ್ಲ ಎಂದು ರಾಜ್ಯದ ಕಾಂಗ್ರೆಸ್ ಸರಕಾರದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ಚುನಾವಣಾ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮುಸ್ಲಿಮರಲ್ಲಿ ಉಂಟಾಗಿರುವ ಅಸಮಾಧಾನದ ಕುರಿತು ಮಾತನಾಡಿದ ಗೃಹ ಸಚಿವ ಪರಮೇಶ್ವರ್, “ಯಾವುದೋ ಒಂದು ಕ್ಷೇತ್ರದಲ್ಲಿ ಟಿಕೆಟ್ ಸಿಗದ ಕಾರಣಕ್ಕೆ ಸಂಪೂರ್ಣ ಚಿತ್ರಣ ಬದಲಾಗುವುದಿಲ್ಲ. ಅಲ್ಪಸಂಖ್ಯಾತ ಸಮುದಾಯದವರು ಈ ಬಗ್ಗೆ ನಿರಾಸೆಗೊಳ್ಳುವ ಅಗತ್ಯವಿಲ್ಲ. ಏನಾದರೂ ಲೋಪದೋಷಗಳಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚರ್ಚಿಸಿ ಸರಿಪಡಿಸುತ್ತಾರೆ. ನಾವೆಲ್ಲರೂ ಒಟ್ಟಾಗಿ ಮುಂದೆ ಹೋಗುವ ಅಗತ್ಯವಿದೆ,” ಎಂದು ಕರೆ ನೀಡಿದರು.

ಸಂಪಾದಕೀಯ ನಿಲುವು

ಇದೇ ಕಾರಣಕ್ಕಾಗಿ ಕಾಂಗ್ರೆಸ್ ಭಾರತವನ್ನು ವಿಭಜಿಸಿತು ಮತ್ತು ಹಿಂದೂಗಳನ್ನು 'ಕೇಸರಿ ಭಯೋತ್ಪಾದಕರು' ಎಂದು ಬಿಂಬಿಸುತ್ತಾ ಜಿಹಾದಿ ಭಯೋತ್ಪಾದಕರನ್ನು ಬೆಂಬಲಿಸಿತು. ಕಾಂಗ್ರೆಸ್ ಅನ್ನು ಹಿಂದೂಗಳು ಅಧಿಕಾರದಿಂದ ಹೊರಹಾಕಿದ ನಂತರವೂ ಕಾಂಗ್ರೆಸ್ ಇನ್ನೂ ಎಚ್ಚೆತ್ತುಕೊಂಡಿಲ್ಲ ಮತ್ತು ಇಂತಹ ಹೇಳಿಕೆಗಳಿಂದ ಈ ಪರಿಸ್ಥಿತಿ ಸರಿಹೋಗುವ ಸಾಧ್ಯತೆಯೂ ಇಲ್ಲದ ಕಾರಣ, ಕಾಂಗ್ರೆಸ್ ನ ರಾಜಕೀಯ ಅಸ್ತಿತ್ವವನ್ನು ಈಗ ಕೊನೆಗೊಳಿಸುವುದು ಅಗತ್ಯವಾಗಿದೆ !