ನಾನು ಅಸ್ಸಾಂನಿಂದ ಹೊರಹಾಕುವ ಬಾಂಗ್ಲಾದೇಶಿ ನುಸುಳುಕೋರರನ್ನು ಮಮತಾ ಬ್ಯಾನರ್ಜಿ ಬಂಗಾಳದಲ್ಲಿ ಸ್ವಾಗತಿಸುತ್ತಾರೆ ! – – Himanta Biswa Sarma

ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರ ಟೀಕೆ

ಕೂಚ್ ಬೆಹಾರ್ (ಬಂಗಾಳ) – ನಾನು ಅಸ್ಸಾಂನಿಂದ ಯಾವ ಬಾಂಗ್ಲಾದೇಶಿ ನುಸುಳುಕೋರರನ್ನು ಹೊರಹಾಕುತ್ತೇನೋ, ಅವರನ್ನು ಮಮತಾ ಬ್ಯಾನರ್ಜಿ ಬಂಗಾಳದಲ್ಲಿ ಸ್ವಾಗತಿಸುತ್ತಾರೆ ಎಂಬ ಶಬ್ದಗಳಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸಿದರು. ಅವರು ಕೂಚ್ ಬೆಹಾರ್‌ನ ಚುನಾವಣಾ ಸಭೆಯೊಂದರಲ್ಲಿ ಮಾತನಾಡುತ್ತಿದ್ದರು. ಮಮತಾ ಬ್ಯಾನರ್ಜಿ ಅವರಿಂದಾಗಿ ಬಂಗಾಳ ಮತ್ತು ಅಸ್ಸಾಂನಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗಲಿದೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸರಮಾ ಅವರು ಮಾತನಾಡಿ, “ಈ ವರ್ಷ ಬಂಗಾಳದಲ್ಲಿ ಭಾಜಪ ಸರಕಾರವನ್ನು ಅಧಿಕಾರಕ್ಕೆ ತರಬೇಕಿದೆ. ಅದನ್ನು ಏಕೆ ತರಬೇಕು ಎಂಬುದನ್ನು ನೀವೇ (ಮತದಾರರೇ) ನಿರ್ಧರಿಸಿ. ನಾನು ಅಸ್ಸಾಂನಲ್ಲಿ ಬಾಂಗ್ಲಾದೇಶಿ ನುಸುಳುಕೋರರು ಬರದಂತೆ ತಡೆದಿದ್ದೇನೆ. ಒಬ್ಬನೇ ಒಬ್ಬ ಬಾಂಗ್ಲಾದೇಶಿ ನುಸುಳುಕೋರ ಬಂದರೂ, ನಾನು ಅವನನ್ನು ಅದೇ ದಿನ ಒದ್ದು ಬಾಂಗ್ಲಾದೇಶಕ್ಕೆ ಓಡಿಸುತ್ತೇನೆ” ಎಂದು ಹೇಳಿದರು.