ಬಾಲಕಿಯ ಬಲಾತ್ಕಾರ ಪ್ರಕರಣ; ವಜಾಗೊಂಡ ಪೊಲೀಸ್ ನಿರೀಕ್ಷಕನಿಗೆ ೨೦ ವರ್ಷಗಳ ಜೈಲು ಶಿಕ್ಷೆ

ದೌಸಾ (ರಾಜಸ್ಥಾನ) – ಇಲ್ಲಿನ ೪ ವರ್ಷದ ಬಾಲಕಿಗೆ ಚಾಕೊಲೇಟ್ ಆಮಿಷ ತೋರಿಸಿ ಬಲಾತ್ಕಾರ ಮಾಡಿದ ಅಂದಿನ ಪೊಲೀಸ್ ಉಪನಿರೀಕ್ಷಕ ಭೂಪೇಂದ್ರ ಸಿಂಗ್ ಯಾದವ್ ಎಂಬ ಕಿರಾತಕನಿಗೆ ಪೊಕ್ಸೊ ನ್ಯಾಯಾಲಯವು ೨೦ ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ ನ್ಯಾಯಾಲಯವು ಆರೋಪಿಗೆ ೨ ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದ್ದು, ಈ ಮೊತ್ತವನ್ನು ಸಂತ್ರಸ್ತೆಗೆ ನೀಡಲಾಗುವುದು. ಅಲ್ಲದೆ ಸಂತ್ರಸ್ತೆಗೆ ೩ ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಶಿಫಾರಸು ಮಾಡಲಾಗಿದೆ. ೨೦೨೩ ರಲ್ಲಿ ಈ ಘಟನೆ ನಡೆದಿತ್ತು.

ಈ ಘಟನೆ ಬೆಳಕಿಗೆ ಬಂದ ನಂತರ ರಾಜಸ್ಥಾನದಲ್ಲಿ ಭಾರಿ ಸಂಚಲನ ಮೂಡಿತ್ತು. ಸಂತ್ರಸ್ತೆಯ ಕುಟುಂಬದವರ ದೂರಿನ ಮೇರೆಗೆ ಪೊಲೀಸರು ಭೂಪೇಂದ್ರ ಸಿಂಗ್ ಯಾದವ್ ವಿರುದ್ಧ ಪಾಕ್ಸೊ ಕಾಯ್ದೆಯಡಿ ತಕ್ಷಣವೇ ಮೊಕದ್ದಮೆ ದಾಖಲಿಸಿ ಆತನನ್ನು ಬಂಧಿಸಿದ್ದರು. ಪೊಲೀಸ್ ಇಲಾಖೆಯು ಆತನನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಿತು. ಈ ಪ್ರಕರಣದ ತನಿಖೆಯನ್ನು ವೇಗವಾಗಿ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಯಿತು. ಪೊಕ್ಸೊ ನ್ಯಾಯಾಲಯದ ನ್ಯಾಯಾಧೀಶರಾದ ರೇಖಾ ರಾಥೋಡ್ ಅವರು ಸಾಕ್ಷಿಗಳ ಹೇಳಿಕೆ ಮತ್ತು ಲಭ್ಯವಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಭೂಪೇಂದ್ರ ಸಿಂಗ್ ಯಾದವ್‌ನನ್ನು ದೋಷಿ ಎಂದು ಘೋಷಿಸಿದರು. ಈ ಮೊಕದ್ದಮೆಯಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಜಿತೇಂದ್ರ ಕುಮಾರ್ ಸೈನಿ ಅವರು ವಾದ ಮಂಡಿಸಿದ್ದರು.

ಸಂಪಾದಕೀಯ ನಿಲುವು

ಇಂತಹ ಕಾಮುಕ ಪೊಲೀಸರಿಂದ ತುಂಬಿರುವ ಪೊಲೀಸ್ ಪಡೆಯು ಮಹಿಳೆಯರನ್ನು ಹೇಗೆ ತಾನೇ ರಕ್ಷಿಸಲು ಸಾಧ್ಯ?