ಮಧ್ಯಪ್ರದೇಶದ ಸರಕಾರಿ ಆಸ್ಪತ್ರೆಯಲ್ಲಿ ಮದ್ಯಪಾನ ಮಾಡಿ ಬಂದ ಪೊಲೀಸರಿಂದ ಕಸದ ಬುಟ್ಟಿಯಲ್ಲಿ ಮೂತ್ರ ವಿಸರ್ಜನೆ!

೪ ಪೊಲೀಸರ ಅಮಾನತು

ಭೋಪಾಲ್ (ಮಧ್ಯಪ್ರದೇಶ) – ಸಿಧಿ ಜಿಲ್ಲೆಯ ರೇವಾ ಸರಕಾರಿ ಆಸ್ಪತ್ರೆಗೆ ಆರೋಪಿಯೊಬ್ಬನನ್ನು ವೈದ್ಯಕೀಯ ತಪಾಸಣೆಗಾಗಿ ಕರೆತಂದಿದ್ದ ನಾಲ್ವರು ಪೊಲೀಸರು ಮದ್ಯ ಸೇವಿಸಿ ಬಂದಿದ್ದರು. ಅವರಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಆಸ್ಪತ್ರೆಯ ವಾರ್ಡ್‌ವೊಂದರಲ್ಲಿ ಇರಿಸಲಾಗಿದ್ದ ಕಸದ ಬುಟ್ಟಿಯಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಅಮಾನತುಗೊಂಡವರಲ್ಲಿ ಉಪನಿರೀಕ್ಷಕ ನರ್ಮದಾ ಪ್ರಸಾದ್ ಪ್ರಜಾಪತಿ, ಹವಾಲ್ದಾರ್ ಉದಯ್‌ರಾಜ್ ಸಿಂಗ್, ಹವಾಲ್ದಾರ್ ಮನೀಶ್ ತಿವಾರಿ ಮತ್ತು ಇನ್ನೊಬ್ಬ ಹವಾಲ್ದಾರ್ ಸೇರಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತಾರೆಯೇ?