ಮಧ್ಯಪ್ರದೇಶ ಸರಕಾರದ ‘ದೇವಸ್ಥಾನ ನಿರ್ವಹಣೆ’ ಪಠ್ಯಕ್ರಮಕ್ಕೆ ಕಾಂಗ್ರೆಸ್ ವಿರೋಧ!

ಭೋಪಾಲ್ – ಮಧ್ಯಪ್ರದೇಶ ಸರಕಾರವು ದೇವಸ್ಥಾನ ನಿರ್ವಹಣೆ (ಟೆಂಪಲ್ ಮ್ಯಾನೇಜ್‌ಮೆಂಟ್) ಕುರಿತ ಪಠ್ಯಕ್ರಮವನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದ್ದು, ಆ ವಿಷಯದ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಈ ಪಠ್ಯಕ್ರಮವನ್ನು ಸಾಮ್ರಾಟ್ ವಿಕ್ರಮಾದಿತ್ಯ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ. ವಿದ್ಯಾರ್ಥಿಗಳಿಗಾಗಿ ಪ್ರಾರಂಭಿಸಲಾಗುವುದು. ಸರಕಾರವು ಈ ಪಠ್ಯಕ್ರಮವನ್ನು ಧಾರ್ಮಿಕ ಪ್ರವಾಸೋದ್ಯಮ ಮತ್ತು ಉದ್ಯೋಗದೊಂದಿಗೆ ಜೋಡಿಸುತ್ತಿದೆ; ಆದರೆ ವಿರೋಧ ಪಕ್ಷದವರು ಈ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಪಿ.ಸಿ. ಶರ್ಮಾ ಅವರು, ಸರಕಾರವು ಧಾರ್ಮಿಕ ಉದ್ದೇಶಗಳನ್ನು ಸಾಧಿಸುತ್ತಿದೆ ಎಂದು ಆರೋಪಿಸಿದ್ದಾರೆ. (ದೇಶದಲ್ಲಿ ಲಕ್ಷಾಂತರ ದೇವಸ್ಥಾನಗಳಿದ್ದು, ಅಲ್ಲಿ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಯುತ್ತಿರುತ್ತದೆ. ಈ ಮೂಲಕ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವುದು ಆಡಳಿತಗಾರರ ಕರ್ತವ್ಯವೇ ಆಗಿದೆ. ಇದನ್ನು ಧಾರ್ಮಿಕತೆಗೆ ಜೋಡಿಸಿ ಕಾಂಗ್ರೆಸ್ ‘ಮುಸ್ಲಿಮರನ್ನು ಓಲೈಸುವ’ ತನ್ನ ನಿಜವಾದ ಅಜೆಂಡಾವನ್ನು ಜಾರಿಗೆ ತರುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು! – ಸಂಪಾದಕರು)

೧. ಈ ಪಠ್ಯಕ್ರಮದಿಂದ ದೇವಸ್ಥಾನಗಳ ನಿರ್ವಹಣೆ ಹೆಚ್ಚು ಪರಿಣಾಮಕಾರಿಯಾಗಲಿದೆ ಮತ್ತು ಯುವಕರಿಗೆ ಉದ್ಯೋಗದ ಹೊಸ ಅವಕಾಶಗಳು ಲಭ್ಯವಾಗಲಿವೆ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ತಿಳಿಸಿದ್ದಾರೆ.

೨. ಉಜ್ಜಯಿನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಗಳಿರುವುದರಿಂದ ಇದೇ ಸ್ಥಳದಿಂದ ಈ ಪಠ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಪ್ರಕಾರ, ಇದುವರೆಗೆ ದೇವಸ್ಥಾನಗಳ ನಿರ್ವಹಣೆಯು ಸಾಂಪ್ರದಾಯಿಕ ರೀತಿಯಲ್ಲಿ ನಡೆಯುತ್ತಿತ್ತು; ಆದರೆ ಈಗ ವೈಜ್ಞಾನಿಕ ಮತ್ತು ವೃತ್ತಿಪರ ರೀತಿಯಲ್ಲಿ ದೇವಸ್ಥಾನ ನಿರ್ವಹಣೆಯನ್ನು ಕಲಿಸಲಾಗುವುದು.

೩. ಜುಲೈನಿಂದ ಆರಂಭವಾಗಲಿರುವ ಈ ಪಠ್ಯಕ್ರಮಕ್ಕಾಗಿ ಅರ್ಜಿಗಳನ್ನು ಸ್ವೀಕರಿಸುವುದು ಪ್ರಾರಂಭವಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅರ್ಪಣ್ ಭಾರದ್ವಾಜ್ ತಿಳಿಸಿದ್ದಾರೆ.

೪. ಮಧ್ಯಪ್ರದೇಶದಲ್ಲಿ ‘ಎಂ.ಬಿ.ಎ. ಟೆಂಪಲ್ ಮ್ಯಾನೇಜ್‌ಮೆಂಟ್’ ಪಠ್ಯಕ್ರಮವನ್ನು ಪ್ರಾರಂಭಿಸುವ ಮೊದಲ ವಿಶ್ವವಿದ್ಯಾಲಯ ಸಾಮ್ರಾಟ್ ವಿಕ್ರಮಾದಿತ್ಯ ವಿಶ್ವವಿದ್ಯಾಲಯವಾಗಲಿದೆ.

ಸಂಪಾದಕೀಯ ನಿಲುವು

ಪಠ್ಯಕ್ರಮದಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ಸೇರಿಸಿದರೂ ಕಾಂಗ್ರೆಸ್‌ಗೆ ಹೊಟ್ಟೆನೋವು ಶುರುವಾಗುತ್ತದೆ. ಆದ್ದರಿಂದ ಅವರು ಇದನ್ನು ವಿರೋಧಿಸುವುದರಲ್ಲಿ ಆಶ್ಚರ್ಯವೇನಿಲ್ಲ!