ನಾಶಿಕ: ಐಟಿ ಕ್ಷೇತ್ರದಲ್ಲಿ ‘ಕಾರ್ಪೊರೇಟ್ ಜಿಹಾದ್’ !

ನಾಶಿಕ – ಐಟಿ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ನಡೆದ ವೃತ್ತಿಪರ ಜಿಹಾದ್ ಪ್ರಕರಣದ ಪೀಡಿತ ಹಿಂದೂ ಯುವತಿಯೊಬ್ಬಳು ತನ್ನ ಅನುಭವವನ್ನು ಹಂಚಿಕೊಂಡಿದ್ದಾಳೆ. ೨೦೨೨ ರಲ್ಲಿ ತಾನಿಶ್ ಶೇಖ್ ಎಂಬಾತನು ದೊಡ್ಡ ಸಂಸ್ಥೆಯಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಆಕೆಯನ್ನು ತನ್ನ ಬಲೆಗೆ ಸಿಲುಕಿಸಿದ್ದನು. ಮದುವೆಯ ಕನಸು ತೋರಿಸಿ ಅವಳೊಂದಿಗೆ ಸ್ನೇಹ ಬೆಳೆಸಿದ ಅವನು, ಆಗಸ್ಟ್ ೨೦೨೪ ರಲ್ಲಿ ಹೋಟೆಲ್ ವೊಂದರಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದನು. ಈ ಷಡ್ಯಂತ್ರದಲ್ಲಿ ತಾನಿಶ್ ಜೊತೆಗೆ ತೌಸಿಫ್ ಅಖ್ತರ್ ಮತ್ತು ನಿದಾ ಖಾನ್ ಎಂಬುವವರೂ ಭಾಗಿಯಾಗಿದ್ದರು. ‘ನಿನ್ನ ಧರ್ಮ ತಪ್ಪು’ ಎಂದು ಹೇಳುವ ಮೂಲಕ ಈ ಮೂವರು ಯುವತಿಯ ವಿಚಾರಧಾರೆಯನ್ನು ಬದಲಿಸಲು ಪ್ರಯತ್ನಿಸಿದರು. ತೌಸಿಫ್ ಸಂತ್ರಸ್ತೆಯ ಛಾಯಾಚಿತ್ರಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿ ಆಕೆಯ ಲೈಂಗಿಕ ಶೋಷಣೆ ಮಾಡಿದನು. ಫೆಬ್ರವರಿ ೨೦೨೬ ರಲ್ಲಿ ತಾನಿಶ್ ವಿವಾಹಿತನಾಗಿದ್ದು, ಅವನಿಗೆ ಇಬ್ಬರು ಮಕ್ಕಳಿದ್ದಾರೆ ಎಂಬ ಸತ್ಯ ಸಂತ್ರಸ್ತೆಗೆ ತಿಳಿಯಿತು.
🚨 ‘Corporate Jihad’ Allegations in Nashik IT Sector
A disturbing case has emerged where 3 accused individuals allegedly conspired to sexually exploit a young woman under the pretext of a job opportunity in TCS BPO.
⚠️ The victim has shared serious allegations:
➡️ Lured with… https://t.co/43VGEsM6RJ pic.twitter.com/EgNxfunQqK— Sanatan Prabhat (@SanatanPrabhat) April 12, 2026
ಐಟಿ ಕ್ಷೇತ್ರದಲ್ಲಿ ನಿರ್ದಿಷ್ಟ ವಿಚಾರಧಾರೆಯ ಜನರಿಂದಲೇ ಹಿಂದೂಗಳ ಶೋಷಣೆ!
ಐಟಿ ಕ್ಷೇತ್ರದ ದೊಡ್ಡ ಸಂಸ್ಥೆಗಳಲ್ಲಿ ನಿರ್ದಿಷ್ಟ ಸಮುದಾಯದ ಜನರು ಪ್ರಮುಖ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅದರ ಮಾಧ್ಯಮದಿಂದ ಹಿಂದೂ ಯುವಕ-ಯುವತಿಯರ ಶೋಷಣೆ ಮತ್ತು ಮತಾಂತರ ಮಾಡಲಾಗುತ್ತಿದೆ ಎಂಬ ಸಂಶಯ ವ್ಯಕ್ತವಾಗಿದೆ. ಅರ್ಹತೆಯನ್ನು ಬದಿಗೊತ್ತಿ ಕೇವಲ ಪರಿಚಯದ ಆಧಾರದ ಮೇಲೆ ನಿರ್ದಿಷ್ಟ ಸಮುದಾಯದ ಜನರನ್ನು ನೇಮಿಸಿಕೊಳ್ಳುತ್ತಿರುವುದು ಬೆಳಕಿಗೆ ಬರುತ್ತಿದೆ.
ನಾಶಿಕ ‘ಡಿಫೆನ್ಸ್ ಹಬ್’ (ರಕ್ಷಣಾ ಕೇಂದ್ರ) ಆಗಿರುವುದರಿಂದ ಈ ‘ಕಾರ್ಪೊರೇಟ್ ಜಿಹಾದ್’ಗೆ ವಿದೇಶಿ ಹಣದ ನೆರವು ಸಿಗುತ್ತಿರುವ ಸಾಧ್ಯತೆ ದಟ್ಟವಾಗಿದೆ. ಕೇಂದ್ರ ತನಿಖಾ ಸಂಸ್ಥೆಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ರಹಸ್ಯವಾಗಿ ದೇಶದ ಪ್ರಮುಖ ನಗರಗಳಲ್ಲಿನ ಸಂಸ್ಥೆಗಳ ದಾಖಲೆಗಳ ಪರಿಶೀಲನೆ ಆರಂಭಿಸಿವೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ