​ಅಪಾಯಕಾರಿಯಾಗಿ ವಾಹನ ಚಲಾಯಿಸಿದ ಚಾಲಕನಿಗೆ ರಸ್ತೆ ಸ್ವಚ್ಛಗೊಳಿಸುವ ಶಿಕ್ಷೆ

ಬೆಂಗಳೂರು – ಅಪಾಯಕಾರಿಯಾಗಿ ವಾಹನ ಚಲಾಯಿಸಿದ ಪ್ರಕರಣವೊಂದರಲ್ಲಿ ಲಂಬೋರ್ಗಿನಿ ವಾಹನ ಚಾಲಕನಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಛಡಿಯೇಟು ನೀಡಿದ್ದು, ಈ ಪ್ರಕರಣವನ್ನು ಕೈಬಿಡಲಾಗುವುದು; ಆದರೆ ಶಿಕ್ಷೆ ಎಂದು ಆತ ಸಮುದಾಯ ಸೇವೆ ಮಾಡಬೇಕೆಂದು ನ್ಯಾಯಾಲಯ ಹೇಳಿದೆ. ಚಿರಂತ್ ಬಿ.ಆರ್. ಎಂದು ಈ ಆರೋಪಿಯ ಹೆಸರಾಗಿದ್ದು ಡಿಸೆಂಬರ್ ೨೦೨೫ ರಲ್ಲಿ ನಡೆದ ಈ ಪ್ರಕರಣದ ನಂತರ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಕೇಸು ದಾಖಲಿಸಲಾಗಿತ್ತು.

​ಆರೋಪಿಯು ತನ್ನ ಲಂಬೋರ್ಗಿನಿ ಕಾರಿನಲ್ಲೇ ಬಂದು ರಸ್ತೆಗಳ ಸ್ವಚ್ಛತೆ ಮಾಡಬೇಕು. ಶಿಕ್ಷೆಯು ಅವನು ಮಾಡಿದ ಅಪರಾಧಕ್ಕೆ ಸಂಬಂಧಿಸಿರಬೇಕೆಂದು ನ್ಯಾಯಾಲಯ ಹೇಳಿದೆ.