ವಿಧಾನಸಭಾಧ್ಯಕ್ಷರ ಕಚೇರಿಯ ಹೊರಗೆ ಹೂಗುಚ್ಛವನ್ನಿಟ್ಟು ಕಾರಿನೊಂದಿಗೆ ಪರಾರಿಯಾದ ಚಾಲಕ!

ನವದೆಹಲಿ – ದೆಹಲಿ ವಿಧಾನಸಭೆಯ ಅತಿ ಗಣ್ಯ ವ್ಯಕ್ತಿಗಳ (ವಿಐಪಿ) ಪ್ರವೇಶದ್ವಾರ 2ರ ಬಳಿಯಿದ್ದ ತಡೆಗೋಡೆಗಳನ್ನು (ಬ್ಯಾರಿಕೇಡ್) ಮುರಿದು ಕಾರೊಂದು ಒಳನುಗ್ಗಿದೆ. ವಾಹನದ ಚಾಲಕ ಮುಖವಾಡವನ್ನು ಧರಿಸಿದ್ದನು. ಚಾಲಕ ನೇರವಾಗಿ ವಿಧಾನಸಭಾಧ್ಯಕ್ಷರಾದ ವಿಜೇಂದ್ರ ಗುಪ್ತ ಅವರ ಕಚೇರಿಯತ್ತ ತೆರಳಿ, ಕಚೇರಿಯ ಹೊರಗಿನ ಜಾಗದಲ್ಲಿ ಹೂಗುಚ್ಛವನ್ನಿಟ್ಟು ವಾಹನದೊಂದಿಗೆ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆ ಮಧ್ಯಾಹ್ನ 2 ಗಂಟೆಗೆ ನಡೆದಿದೆ. ಪೊಲೀಸರು ಈ ವಾಹನ ಮತ್ತು ಚಾಲಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ವಿಧಾನಸಭೆಯನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿಯೂ ಬೆದರಿಕೆಗಳು ಬಂದಿದ್ದವು.
ಸಂಪಾದಕೀಯ ನಿಲುವುದೇಶದ ರಾಜಧಾನಿಯಲ್ಲಿನ ವಿಧಾನಸಭೆಯ ಭದ್ರತೆಯ ವೈಫಲ್ಯವನ್ನು ಬಯಲು ಮಾಡಿದ ಘಟನೆ! ಇದರಿಂದ ‘ದೆಹಲಿ ಜನಪ್ರತಿನಿಧಿಗಳಿಗೇ ಇಷ್ಟು ಅಸುರಕ್ಷಿತವಾಗಿದ್ದರೆ, ಜನಸಾಮಾನ್ಯರಿಗೆ ಇನ್ನೆಷ್ಟು ಸುರಕ್ಷಿತವಾಗಿರಬಹುದು?’, ಎಂಬುದು ಸ್ಪಷ್ಟವಾಗುತ್ತದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!