ದೇವಳಗಾಂವ್ ರಾಜೆ (ತಾ. ದೌಂಡ್) ಇಲ್ಲಿನ ಸಿದ್ಧೇಶ್ವರ ಮಹಾರಾಜ ದೇವಸ್ಥಾನದಲ್ಲಿ ಕಳ್ಳತನ

೩ ಕಿಲೋ ತೂಕದ ಬೆಳ್ಳಿಯ ಮುಕುಟ ಕಳವು

ಪುಣೆ – ದೇವಳಗಾಂವ್ ರಾಜೆ (ತಾ. ದೌಂಡ್) ಅಪರಿಚಿತ ಕಳ್ಳರು ಕಪಾಟಿನ ಬಾಗಿಲು ಮುರಿದು ಇಲ್ಲಿನ ಪ್ರಸಿದ್ಧ ಸಿದ್ಧೇಶ್ವರ ಮಹಾರಾಜ ದೇವಸ್ಥಾನದ ಗಾಜಿನ ಕಪಾಟಿನಲ್ಲಿ ಇರಿಸಲಾಗಿದ್ದ ೩ ಕಿಲೋ ತೂಕದ, ಹಾವಿನ ಪಣಿಯ ಆಕಾರದ ಮತ್ತು ಹರಳುಗಳನ್ನು ಹೊಂದಿದ್ದ ಬೆಳ್ಳಿಯ ಮುಕುಟವನ್ನು ಕದ್ದೊಯ್ದಿದ್ದಾರೆ. ೧ ಲಕ್ಷ ೯೫ ಸಾವಿರ ರೂಪಾಯಿ ಮೌಲ್ಯದ ಈ ಬೆಳ್ಳಿಯ ಮುಕುಟವು ಏಪ್ರಿಲ್ ೨ ರಂದು ಬೆಳಿಗ್ಗೆ ೧೦ ಗಂಟೆಗೆ ಕಳ್ಳತನವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುವ ಶ್ರೀ. ಭಾನುದಾಸ ಔತಾಡೆ ಅವರು ದೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಗಲು ಹೊತ್ತಿನಲ್ಲೇ ಈ ಕಳ್ಳತನದ ಘಟನೆ ನಡೆದಿರುವುದರಿಂದ ದೇವಸ್ಥಾನಗಳ ಸುರಕ್ಷತೆಯ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ.

ಸಂಪಾದಕೀಯ ನಿಲುವು

ಹಿಂದೂ ಬಹುಸಂಖ್ಯಾತ ದೇಶದಲ್ಲಿ ಹಿಂದೂಗಳ ದೇವಸ್ಥಾನಗಳೇ ಅಸುರಕ್ಷಿತ!