
ಶಿವಮೊಗ್ಗ – ಫೆಬ್ರವರಿ 23, 2026 ರ ರಾತ್ರಿ ಟ್ಯುಟೋರಿಯಲ್ ಕ್ಲಾಸ್ನಿಂದ ವಾಪಸ್ ಬರುತ್ತಿದ್ದಾಗ ಮುಸ್ಲಿಮರು ಸಂಕೇತ್ ಎಂಬ ಹಿಂದೂ ಯುವಕನನ್ನು ಹತ್ಯೆ ಮಾಡಿದ್ದರು. ಈಗ ಸಂಕೇತ್ ಕುಟುಂಬಸ್ಥರು ನಿರ್ಮಿಸಿದ್ದ ಆತನ ಸಮಾಧಿಯನ್ನೂ ಕೂಡ ಮತಾಂಧ ಮುಸ್ಲಿಮರು ಧ್ವಂಸಗೊಳಿಸಿರುವುದು ಬೆಳಕಿಗೆ ಬಂದಿದೆ.
1. ಊರಗಡೂರು ಬಳಿಯ ಗುಡ್ಡೇಮರಡಿ ದೇವಸ್ಥಾನದ ಸಮೀಪವಿರುವ ಸ್ಮಶಾನದಲ್ಲಿ ಸಂಕೇತ್ನ ಅಂತ್ಯಸಂಸ್ಕಾರ ಮಾಡಲಾಗಿತ್ತು. ಅಲ್ಲಿಯೇ ಪೋಷಕರು ಸಂಕೇತ್ನ ಫೋಟೋ ಹಾಕಿ ಒಂದು ಸಣ್ಣ ಸಮಾಧಿಯನ್ನು ನಿರ್ಮಿಸಿದ್ದರು. ಆತನ ಕುಟುಂಬದವರು ಪ್ರತಿ ಬುಧವಾರ ಸ್ಮಶಾನಕ್ಕೆ ಹೋಗಿ ಸಂಕೇತ್ನ ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದರು.
2. ಮತಾಂಧರು ಸಂಕೇತ್ನ ಭಾವಚಿತ್ರವಿದ್ದ ಗ್ರಾನೈಟ್ ಕಲ್ಲನ್ನು ಒಡೆದು ಹಾಕಿರುವುದು ಏಪ್ರಿಲ್ 1 ರಂದು ಗಮನಕ್ಕೆ ಬಂದಿದೆ. ಈ ಬಗ್ಗೆ ಸಂಕೇತ್ನ ತಂದೆ ಕುಮಾರ್ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
3. ಈ ಬಗ್ಗೆ ಮಾತನಾಡಿದ ಕುಮಾರ್, “ನನ್ನ ಮಗ ಸತ್ತ ಮೇಲೂ ಅವರು ಆತನ ಸಮಾಧಿಯನ್ನು ಬಿಡಲಿಲ್ಲ. ಈ ಘಟನೆ ನಡೆದಾಗಿನಿಂದ ಮನೆಯಲ್ಲಿ ಯಾರೂ ಸರಿಯಾಗಿ ಊಟ ಮಾಡಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.
4. ಸಮಾಧಿ ಧ್ವಂಸದ ಬಗ್ಗೆ ಪ್ರತಿಕ್ರಿಯಿಸಿದ ಸಂಕೇತ್ನ ಅಜ್ಜ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ದೇಶದಲ್ಲಿ ಎಲ್ಲಾದರೂ ಈ ರೀತಿ ಸಮಾಧಿ ಒಡೆಯುವ ಘಟನೆಗಳು ನಡೆಯುತ್ತವೆಯೇ? ಅವರು ಇಂತಹ ದುಷ್ಕೃತ್ಯಗಳನ್ನು ಏಕೆ ಮಾಡುತ್ತಾರೆ? ನಾವು ಅವರಿಗೆ ಏನು ಮಾಡಿದ್ದೇವೆ?” ಎಂದು ಅವರು ಪ್ರಶ್ನಿಸಿದರು.
5. ಈ ಪ್ರಕರಣದಲ್ಲಿ ಕುಟುಂಬಸ್ಥರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.
“ರಾತ್ರಿಯಾದರೆ ಮನೆಯಿಂದ ಹೊರಬರಲು ಭಯವಾಗುತ್ತದೆ!” – ಸ್ಥಳೀಯರು
“ಸಂಕೇತ್ ಹತ್ಯೆಯ ನಂತರ ಶಿವಮೊಗ್ಗ ನಗರದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ಪೊಲೀಸರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ. ರಾತ್ರಿಯಾದರೆ ಮನೆಯಿಂದ ಹೊರಬರಲು ಭಯವಾಗುತ್ತದೆ” ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!