ಮಧ್ಯಪ್ರದೇಶದ ಭೋಜಶಾಲಾ ಪ್ರಕರಣ

ನವದೆಹಲಿ – ಭೋಜಶಾಲಾ ಪ್ರಕರಣದಲ್ಲಿ ಮುಸಲ್ಮಾನ ಪಕ್ಷದವರು ಉಚ್ಚ ನ್ಯಾಯಾಲಯದ ವಿಚಾರಣೆಯನ್ನು ಮುಂದೂಡಬೇಕೆಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ. ಪ್ರಕರಣದ ಮೂಲ ಅಂಶಗಳ ಕುರಿತು ಉಚ್ಚ ನ್ಯಾಯಾಲಯವು ಯಾವುದೇ ಟಿಪ್ಪಣಿ ಮಾಡಿಲ್ಲ, ಆದ್ದರಿಂದ ಈ ಹಂತದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
🚨 Bhojshala Case Update
The Supreme Court has refused to hear the plea by Muslim Party seeking postponement of the Madhya Pradesh High Court hearing.
⚖️ Court’s Stand:
• High Court has not commented on core merits of the case
• Hence, no intervention needed at this stage— Sanatan Prabhat (@SanatanPrabhat) April 1, 2026
೧. ವಿಚಾರಣೆಯ ಸಮಯದಲ್ಲಿ ಮುಸಲ್ಮಾನ ಪಕ್ಷದ ಪರ ವಕೀಲ ಸಲ್ಮಾನ್ ಖುರ್ಷಿದ್ ಅವರು, ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ಏಪ್ರಿಲ್ ೨ ರಿಂದ ಪ್ರಾರಂಭವಾಗಲಿರುವ ವಿಚಾರಣೆಯನ್ನು ಮುಂದೂಡಬೇಕು ಮತ್ತು ಸಮೀಕ್ಷೆಗೆ ಸಂಬಂಧಿಸಿದ ಚಿತ್ರೀಕರಣ (ವಿಡಿಯೋಗ್ರಫಿ) ಹಾಗೂ ಬಣ್ಣದ ಛಾಯಾಚಿತ್ರಗಳನ್ನು ಮಸೀದಿ ಸಮಿತಿಗೆ ಒದಗಿಸಬೇಕು ಎಂದು ನ್ಯಾಯಾಲಯಕ್ಕೆ ವಿನಂತಿಸಿದರು. ಅಲ್ಲದೆ, ಪುರಾತತ್ವ ಇಲಾಖೆಯ ವರದಿಗೆ ಉತ್ತರ ನೀಡಲು ಸಾಕಷ್ಟು ಸಮಯ ನೀಡಿಲ್ಲ ಮತ್ತು ಸಂಪೂರ್ಣ ಮಾಹಿತಿ ನೀಡದೆ ಅವಸರದಲ್ಲಿ ವಿಚಾರಣೆ ಆರಂಭಿಸಲಾಗುತ್ತಿದೆ ಎಂದು ವಾದಿಸಿದರು.
೨. ಈ ವಾದಗಳ ಕುರಿತು ನ್ಯಾಯಾಧೀಶ ಸೂರ್ಯಕಾಂತ್ ಅವರು ಮಾತನಾಡಿ, ಉಚ್ಚ ನ್ಯಾಯಾಲಯವು ಚಿತ್ರೀಕರಣವನ್ನು ಪರಿಶೀಲಿಸುತ್ತದೆ ಮತ್ತು ನೈಸರ್ಗಿಕ ನ್ಯಾಯದ ತತ್ವಗಳ ಅನ್ವಯ ಎಲ್ಲ ಆಕ್ಷೇಪಗಳ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ ಎಂಬ ವಿಶ್ವಾಸ ಸರ್ವೋಚ್ಚ ನ್ಯಾಯಾಲಯಕ್ಕಿದೆ. ಯಾವುದೇ ಪಕ್ಷಕ್ಕೆ ದೂರುಗಳಿದ್ದರೆ ಅವರು ಉಚ್ಚ ನ್ಯಾಯಾಲಯದಲ್ಲೇ ಮನವಿ ಮಾಡಬಹುದು ಎಂದು ತಿಳಿಸಿದರು.
೩. ಉಚ್ಚ ನ್ಯಾಯಾಲಯದ ನಿರ್ಧಾರದ ವಿರುದ್ಧ ಮುಸಲ್ಮಾನ ಪಕ್ಷವು ಸಲ್ಲಿಸಿದ ಅರ್ಜಿಯ ಕುರಿತು ಸರ್ವೋಚ್ಚ ನ್ಯಾಯಾಲಯವು, ಸಮೀಕ್ಷೆಯ ವರದಿಯಲ್ಲಿ ಕೆಲವು ಆಕ್ಷೇಪಗಳನ್ನು ದಾಖಲಿಸಲಾಗಿದೆ, ಆದರೆ ಕೆಲವು ಆಕ್ಷೇಪಗಳನ್ನು ಸೇರಿಸಲಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಚಿತ್ರೀಕರಣವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಮತ್ತು ಎಲ್ಲ ಪಕ್ಷಗಳು ಅದರ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆ ಎತ್ತಬಹುದು. ವರದಿಯಲ್ಲಿ ಎಲ್ಲ ಎಲೆಕ್ಟ್ರಾನಿಕ್ ಮತ್ತು ದಾಖಲೆಗಳ ಪುರಾವೆಗಳನ್ನು ಸೇರಿಸಲಾಗುವುದು, ಇದರಿಂದ ಪಾರದರ್ಶಕತೆ ಕಾಯ್ದುಕೊಳ್ಳಬಹುದು ಎಂದು ಹೇಳಿತು.
೪. ಈ ಅರ್ಜಿಯನ್ನು ಮೌಲಾನಾ ಕಮಾಲುದ್ದೀನ್ ವೆಲ್ಫೇರ್ ಸೊಸೈಟಿಯು ಸಲ್ಲಿಸಿತ್ತು, ಇದರಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಮಾರ್ಚ್ ೧೬ ರ ಆದೇಶವನ್ನು ಪ್ರಶ್ನಿಸಲಾಗಿತ್ತು. ಉಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ಭೋಜಶಾಲಾದ ಸ್ವಯಂ-ಪರಿಶೀಲನೆಗೆ ಅನುಮತಿ ನೀಡಿತ್ತು. ಈ ಸ್ಥಳವನ್ನು ದೇವಿ ವಾಗ್ದೇವಿ (ಶ್ರೀ ಸರಸ್ವತಿ) ದೇವಾಲಯವೆಂದು ಘೋಷಿಸಬೇಕೆಂದು ಕೋರಿ ‘ಹಿಂದೂ ಫ್ರಂಟ್ ಫಾರ್ ಜಸ್ಟಿಸ್’ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಆದೇಶವನ್ನು ನೀಡಲಾಗಿತ್ತು.
೫. ಹಿಂದೂ ಪಕ್ಷದ ಪರ ವಕೀಲ ವಿಷ್ಣು ಶಂಕರ್ ಜೈನ್ ಮಾತನಾಡಿ, ಉಚ್ಚ ನ್ಯಾಯಾಲಯವು ಮುಸಲ್ಮಾನ ಪಕ್ಷದ ಬೇಡಿಕೆಯನ್ನು ತಿರಸ್ಕರಿಸಿಲ್ಲ, ಬದಲಾಗಿ ಅಂತಿಮ ವಿಚಾರಣೆಯ ಸಮಯದಲ್ಲಿ ಎಲ್ಲ ಆಕ್ಷೇಪಗಳನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು.
೬. ಸರ್ವೋಚ್ಚ ನ್ಯಾಯಾಲಯವು, ಉಚ್ಚ ನ್ಯಾಯಾಲಯವು ತನ್ನ ಹಿಂದಿನ ಆದೇಶಗಳನ್ನು ಗೌರವಿಸಿ ಮಧ್ಯಂತರ ವ್ಯವಸ್ಥೆಯನ್ನು ನೀಡಿದೆ ಮತ್ತು ಎಲ್ಲ ಆಕ್ಷೇಪಗಳನ್ನು ದಾಖಲಿಸಿದೆ. ಹಾಗೆಯೇ ಚಿತ್ರೀಕರಣ ಮತ್ತು ಇತರ ಪುರಾವೆಗಳನ್ನು ಪರಿಶೀಲಿಸಿ ಎಲ್ಲ ಪಕ್ಷಗಳ ವಾದವನ್ನು ಆಲಿಸಿದ ನಂತರ ಉಚ್ಚ ನ್ಯಾಯಾಲಯವು ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿತು.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ