ರಾಮರಾಜ್ಯದ ಸ್ಥಾಪನೆಗಾಗಿ ಕಟಿಬದ್ಧರಾಗಲು ಪ್ರತಿಜ್ಞೆ !

  • ಶ್ರೀರಾಮ ನವಮಿ ನಿಮಿತ್ತ ಹಿಂದೂ ಜನಜಾಗೃತಿ

  • ಸಮಿತಿ ವತಿಯಿಂದ ರಾಜ್ಯದ ವಿವಿಧೆಡೆ

  • ಶ್ರೀ ರಾಮನಾಮ ಸಂಕೀರ್ತನೆ ಆಯೋಜನೆ !

ಶುಂಠಿಕೊಪ್ಪದ ಶ್ರೀರಾಮ ಮಂದಿರದಲ್ಲಿ ಸಾಮೂಹಿಕ ಶ್ರೀರಾಮ ನಾಮಜಪ

ಬೆಂಗಳೂರು – ಧರ್ಮದ ಎಲ್ಲಾ ಆದರ್ಶಗಳನ್ನು ಪಾಲಿಸುವ ‘ಮರ್ಯಾದಾ ಪುರುಷೋತ್ತಮ’ ಶ್ರೀರಾಮನು ಆದರ್ಶ ಪುತ್ರ, ಆದರ್ಶ ಸಹೋದರ, ಆದರ್ಶ ಪತಿ, ಆದರ್ಶ ಮಿತ್ರ, ಆದರ್ಶ ರಾಜನಾಗಿ ಇಡೀ ಮಾನವಕುಲಕ್ಕೆ ಮಾರ್ಗದರ್ಶಿಯಾಗಿದ್ದಾನೆ. ಶ್ರೀರಾಮನವಮಿಯ ದಿನದಂದು ಶ್ರೀರಾಮತತ್ತ್ವವು ಎಂದಿಗಿಂತಲೂ ಸಾವಿರ ಪಟ್ಟು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಈ ಆಧ್ಯಾತ್ಮಿಕ ಲಾಭವನ್ನು ಸಮಾಜಕ್ಕೆ ತಲುಪಿಸುವ ದೃಷ್ಟಿಯಿಂದ ಹಿಂದೂ ಜನಜಾಗೃತಿ ಸಮಿತಿಯಿಂದ ಮಾರ್ಚ್ ೨೬ ರಂದು ಉಡುಪಿ, ಬೆಂಗಳೂರು, ಧಾರವಾಡ, ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿ ಸಾಮೂಹಿಕವಾಗಿ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ನಾಮವನ್ನು ಜಪಿಸಲಾಯಿತು.

ಮಾಲಿಂಗಪುರ (ಬಾಗಲಕೋಟೆ)ಯಲ್ಲಿ ರಾಮರಾಜ್ಯ ಸ್ಥಾಪನೆಗಾಗಿ ಪ್ರತಿಜ್ಞೆ ಮಾಡುತ್ತಿರುವ ರಾಮಭಕ್ತರು

ಈ ಶುಭ ದಿನದಂದು ‘ರಾಮರಾಜ್ಯ’ದ ಸ್ಥಾಪನೆಗಾಗಿ ಕಟಿಬದ್ಧರಾಗಲು ಪ್ರತಿಜ್ಞೆ ಮಾಡಲಾಯಿತು. ಈ ವೇಳೆ ಉಪಸ್ಥಿತ ಧರ್ಮಾಭಿಮಾನಿಗಳು ಸಂಘಟಿತರಾಗಿ, ತಮ್ಮ ಸಾಧನೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ರಾಮರಾಜ್ಯ ಸ್ಥಾಪನೆಯ ದೈವೀ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ನಿಶ್ಚಯಿಸಿದರು.