ಘಟನೆಯನ್ನು ‘ಭಯೋತ್ಪಾದನಾ ಘಟನೆ’ ಎಂದು ಕರೆಯಲು ಕಾಂಗ್ರೆಸ್ ನಿರಾಕರಿಸಿತ್ತು ! – Mangaluru Cooker Blast – NIA

ಮಂಗಳೂರು ಬಾಂಬ್ ಸ್ಫೋಟದ ಆರೋಪಿ ಮಹಮ್ಮದ್ ಶಾರಿಕ್ ನಿಂದ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ !


ಬೆಂಗಳೂರು – ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ೨೦೨೨ ರಲ್ಲಿ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಈ ಸಮಯದಲ್ಲಿ ಬಂಧಿತ ಆರೋಪಿ ಮಹಮ್ಮದ್ ಶಾರಿಕ್ ನ್ಯಾಯಾಲಯದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ಘಟನೆಯಲ್ಲಿ ವ್ಯವಸ್ಥಿತ ಸಂಚು ರೂಪಿಸಲಾಗಿತ್ತು ಮತ್ತು ಹಿಂದೂ ದೇವಾಲಯಗಳ ಸುತ್ತಮುತ್ತಲಿನ ಪ್ರದೇಶಗಳೇ ಗುರಿಯಾಗಿದ್ದವು ಎಂಬುದು ಸಾಬೀತಾಗಿದೆ.

ರಾಜ್ಯದ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರು ೨೦೨೨ ರಲ್ಲಿ ಅಂದಿನ ಭಾಜಪ ಸರಕಾರವು ಈ ಸ್ಫೋಟವನ್ನು ಉದ್ದೇಶಪೂರ್ವಕವಾಗಿ ಭಯೋತ್ಪಾದನಾ ಘಟನೆಯೆಂದು ಬಿಂಬಿಸಿದೆ ಎಂದು ಆರೋಪಿಸಿದ್ದರು. ಭಾಜಪ ಬಳಿ ತೋರಿಸಿಕೊಳ್ಳಲು ಯಾವುದೇ ಸಾಧನೆ ಇಲ್ಲದ ಕಾರಣ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ದೊಡ್ಡದು ಮಾಡಲಾಗಿದೆ ಎಂದು ಅವರು ಹೇಳಿದ್ದರು. ಅಲ್ಲದೆ, ಈ ಘಟನೆಯು ಮುಂಬಯಿ, ಪುಲವಾಮಾ ಅಥವಾ ಜಮ್ಮು-ಕಾಶ್ಮೀರದ ಘಟನೆಗಳಂತೆ ಭಯೋತ್ಪಾದನಾ ಕೃತ್ಯವೇ? ಎಂದು ಪ್ರಶ್ನಿಸಿದ್ದರು.

ಏನಿದು ಘಟನಾವಳಿ ?

ಶಿವಮೊಗ್ಗದ ಮಹಮ್ಮದ್ ಶಾರಿಕ್ ನವೆಂಬರ್ ೧೯, ೨೦೨೨ ರಂದು ರಿಕ್ಷಾವೊಂದರಲ್ಲಿ ಸುಮಾರು ೩ ಕಿಲೋ ಸ್ಫೋಟಕಗಳನ್ನು ಕುಕ್ಕರ್‍‌ನಲ್ಲಿ ಇಟ್ಟುಕೊಂಡು ಹೋಗುತ್ತಿದ್ದನು. ‘ಟೈಮರ್’ನಲ್ಲಿನ ತಾಂತ್ರಿಕ ದೋಷದಿಂದಾಗಿ ಕುಕ್ಕರ್ ಅವನ ತೊಡೆಯ ಮೇಲೆಯೇ ಸ್ಫೋಟಗೊಂಡಿತು ಮತ್ತು ಅವನು ಗಂಭೀರವಾಗಿ ಗಾಯಗೊಂಡನು. ನಂತರ ಅವನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ನಂತರ ರಾಷ್ಟ್ರೀಯ ತನಿಖಾ ದಳ ಅವನನ್ನು ಬಂಧಿಸಿತು. ಶಾರಿಕ್ ಇಸ್ಲಾಮಿಕ್ ಸ್ಟೇಟ್ ಗೆ ಸಂಬಂಧಿಸಿದ ಶಿವಮೊಗ್ಗ ತಂಡದ ಸದಸ್ಯನಾಗಿದ್ದನು. ಅವನಿಗೆ ಅನೇಕ ಭಯೋತ್ಪಾದನಾ ಘಟನೆಗಳೊಂದಿಗೆ ಸಂಬಂಧವಿತ್ತು. ಸೆಪ್ಟೆಂಬರ್ ೨೦೨೨ ರ ಶಿವಮೊಗ್ಗ ಪ್ರಕರಣದಲ್ಲಿಯೂ ಅವನು ಆರೋಪಿಯಾಗಿದ್ದನು. ಆ ಪ್ರಕರಣದಲ್ಲಿ ಸ್ಫೋಟಕಗಳ ಪರೀಕ್ಷೆ ನಡೆಸಲಾಗಿತ್ತು. ಇದಕ್ಕೂ ಮೊದಲು ದೇಶವಿರೋಧಿ ಘೋಷಣೆಗಳನ್ನು ಬರೆದ ಪ್ರಕರಣದಲ್ಲಿಯೂ ಅವನನ್ನು ಬಂಧಿಸಲಾಗಿತ್ತು. (ಇಂತಹ ಭಯೋತ್ಪಾದಕನನ್ನು ಸಾಕುವ ಬದಲು ಅವನಿಗೆ ಗಲ್ಲು ಶಿಕ್ಷೆಯನ್ನೇ ನೀಡಬೇಕು ಎಂದು ಜನತೆಗೆ ಎನಿಸುತ್ತದೆ! ಹಾಗೆಯೇ ಅವನ ಪರವಾಗಿ ಮಾತನಾಡುವ ಕಾಂಗ್ರೆಸ್ ಪಕ್ಷದ ಮೇಲೆಯೂ ಭಯೋತ್ಪಾದನೆಗೆ ಬೆಂಬಲ ನೀಡುವ ಕಲಂಗಳನ್ನು ಹಾಕಿ ಅದರ ಮೇಲೆ ನಿಷೇಧ ಹೇರಬೇಕು! – ಸಂಪಾದಕರು)

ಸಂಪಾದಕೀಯ ನಿಲುವು

ಕಾಂಗ್ರೆಸ್ ಜಿಹಾದಿ ಭಯೋತ್ಪಾದಕರ ಬೆಂಬಲಿಗ ಆಗಿರುವುದರಿಂದಲೇ ಮೊದಲಿನಿಂದಲೂ ಹೀಗೆ ಹೇಳುತ್ತಾ ಬಂದಿದೆ ಮತ್ತು ಹೇಳುತ್ತಲೇ ಇರುತ್ತದೆ. ಈ ಕಾರಣಕ್ಕಾಗಿಯೇ ಅದರ ಮೇಲೆ ನಿಷೇಧ ಹೇರುವುದು ಈಗ ಅನಿವಾರ್ಯವಾಗಿದೆ !