
ನವ ದೆಹಲಿ – ಭಾರತವನ್ನು ನಕ್ಸಲವಾದದಿಂದ ಮುಕ್ತಗೊಳಿಸುವ ಉದ್ದೇಶದ ಕುರಿತು ಮಾರ್ಚ್ 30 ರಂದು ಸಂಸತ್ತಿನಲ್ಲಿ ವಿವರವಾದ ಚರ್ಚೆ ನಡೆಯಲಿದೆ. ಕೇಂದ್ರ ಸರಕಾರವು 31 ಮಾರ್ಚ್ 2026 ರೊಳಗೆ ಭಾರತವನ್ನು ನಕ್ಸಲ್ ಮುಕ್ತಗೊಳಿಸಲು ಸಮಯ ಮಿತಿಯನ್ನು ನಿಗದಿಪಡಿಸಿದ್ದು, ಈ ಗುರಿಯ ಸಮೀಪಕ್ಕೆ ತಲುಪಿರುವುದಾಗಿ ಕೇಂದ್ರ ಸರಕಾರವು ಹೇಳಿದೆ.
೧. ಕಳೆದ ಒಂದು ವರ್ಷದಲ್ಲಿ ಅನೇಕ ಪ್ರಮುಖ ಮಾವೋವಾದಿ ನಾಯಕರು ಶರಣಾಗಿ ಮುಖ್ಯವಾಹಿನಿಗೆ ಬಂದಿದ್ದಾರೆ. ಇತ್ತೀಚೆಗಷ್ಟೇ ಮಾರ್ಚ್ 25 ರಂದು ಒಡಿಶಾದಲ್ಲಿ ಬೇಕಾಗಿದ್ದ ಕುಖ್ಯಾತ ಮಾವೋವಾದಿ ನಾಯಕ ಸುಕ್ರು ಸೇರಿದಂತೆ 4 ಜನರು ಪೊಲೀಸರ ಎದುರು ಶರಣಾಗಿದ್ದಾರೆ. ಈ ನಾಲ್ವರ ಮೇಲೆ ಒಟ್ಟು 66 ಲಕ್ಷ ರೂಪಾಯಿಗಳ ಬಹುಮಾನವಿತ್ತು.
೨. ಒಡಿಶಾ ಪೊಲೀಸರ ಹೆಚ್ಚುವರಿ ಮಹಾನಿರ್ದೇಶಕ ಸಂಜೀವ ಪಾಂಡಾ ಅವರ ಮಾಹಿತಿಯ ಪ್ರಕಾರ, ಕಂಧಮಾಲ್ ಜಿಲ್ಲೆಯಲ್ಲಿ ಈಗ ಕೇವಲ 8 ರಿಂದ 9 ನಕ್ಸಲೀಯರು ಮಾತ್ರ ಉಳಿದಿದ್ದಾರೆ. ‘ಉಳಿದ ನಕ್ಸಲೀಯರೂ ಕೂಡ ಶರಣಾಗಬೇಕು’ ಎಂದು ಕರೆ ನೀಡಿದ ಅವರು, ‘ಸರಕಾರದ ಪುನರ್ವಸತಿ ನೀತಿಯ ಪೂರ್ಣ ಪ್ರಯೋಜನ ನೀಡಲಾಗುವುದು’ ಎಂದು ಭರವಸೆ ನೀಡಿದರು. ಮೊದಲ ಬಾರಿಗೆ ಛತ್ತೀಸಗಢದ ದಂಡಕಾರಣ್ಯದಲ್ಲೂ ನಕ್ಸಲ್ ಸಂಘಟನೆಯ ಬಹುತೇಕ ನಾಯಕತ್ವವಿಲ್ಲದಂತಾಗಿದೆ. ಇದನ್ನು ಸರಕಾರದ ದೊಡ್ಡ ಯಶಸ್ಸು ಎಂದು ಪರಿಗಣಿಸಲಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ