ಶಿವಡಿ (ಮುಂಬಯಿ): ಮತಾಂಧರಿಂದ ಹಿಂದೂ ಮಹಿಳೆಯರ ಮೇಲೆ ಹಲ್ಲೆ

೭ ಮತಾಂಧರ ವಿರುದ್ಧ ಮೊಕದ್ದಮೆ ದಾಖಲು

ಮುಂಬಯಿ – ಯುಗಾದಿ ಹಬ್ಬದ ಮುನ್ನಾ ದಿನದಂದು ಶಿವಡಿಯ ಕೋಳಸಾಬಂದರ ಪರಿಸರದಲ್ಲಿ ಚಿಕ್ಕ ಮಕ್ಕಳ ನಡುವಿನ ಸಣ್ಣ ಗಲಾಟೆಯು ದೊಡ್ಡ ಜಗಳವಾಗಿ ಮಾರ್ಪಟ್ಟು ಹಲ್ಲೆ ನಡೆದಿದೆ. ಈ ಗಲಾಟೆಯಲ್ಲಿ ಮುಸಲ್ಮಾನರು ಹಿಂದೂಗಳ ಮೇಲೆ ಕಬ್ಬಿಣದ ಸರಳುಗಳಿಂದ ದಾಳಿ ಮಾಡಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಹಿಂದೂ ಮಹಿಳೆಯರ ತಲೆಗೆ ತೀವ್ರ ಗಾಯಗಳಾಗಿವೆ. ಈ ಕುರಿತು ದೂರು ದಾಖಲಾಗಿದ್ದು, ೭ ಜನರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.

೧. ಚಿಕ್ಕ ಹೆಣ್ಣು ಮಕ್ಕಳು ಪರಸ್ಪರ ಕೀಟಲೆ ಮಾಡುತ್ತಿದ್ದರು. ಈ ವಿವಾದ ಬೆಳೆದು ಜಗಳವಾಯಿತು. ಚಿಕ್ಕ ಮಕ್ಕಳು ನೀರಿನ ಖಾಲಿ ಡಬ್ಬಿಗಳನ್ನು ಮತ್ತು ಪ್ಲೈವುಡ್ ತುಂಡುಗಳನ್ನು ಎಸೆದರು.

೨. ಇದನ್ನು ನೋಡಿ ರಿಜಾಯಾ ಎಂಬಾಕೆಯು ಸಲೋನಿ ಮತ್ತು ರೇಣು ಅವರ ಕೂದಲು ಹಿಡಿದು ಎಳೆದು ಕೆಳಕ್ಕೆ ಕೆಡವಿದಳು. ಆಗ ದೂರು ನೀಡಿದ ಮಹಿಳೆ ಮತ್ತು ಅವಳ ಸೋದರಸೊಸೆ ಖುಷಿ ಇಬ್ಬರೂ ಸಲೋನಿ ಹಾಗೂ ರೇಣು ಅವರನ್ನು ಬಿಡಿಸಲು ಹೋದರು. ಆಗ ಸಬೀನಾ ಮತ್ತು ಸನಾ ಎಂಬುವವರೂ ಅವರ ಮೇಲೆ ಹಲ್ಲೆ ಮಾಡಿದರು.

೩. ರಿಜಾಯಾಳ ಪತಿ ಅಕ್ರಮ್ ಎಂಬವನು ಮರದ ದೊಣ್ಣೆಯಿಂದ ದೂರು ನೀಡಿದ ಮಹಿಳೆಯ ತಲೆಗೆ ಹೊಡೆದನು. ಇದರಿಂದ ಆಕೆಗೆ ತೀವ್ರ ಗಾಯವಾಗಿ ತಲೆಯಿಂದ ರಕ್ತಸ್ರಾವವಾಯಿತು. ಸಬೀನಾಳ ತಮ್ಮನೂ ಕೂಡ ಕಬ್ಬಿಣದ ಸರಳಿನಿಂದ ಹೊಡೆದನು. ರಿಜಾಯಾಳ ಮೈದುನ ಶಾರುಖ್ ಮತ್ತು ಅಜಗರ್ ಅಲಿ ಕೂಡ ಹಲ್ಲೆ ಮಾಡಿದರು.

೪. ಅಲ್ಲಿದ್ದ ಅಪರಿಚಿತರೊಬ್ಬರು ಪೊಲೀಸರಿಗೆ ಈ ವಿಷಯ ತಿಳಿಸಿದಾಗ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಗಾಯಗೊಂಡ ಹಿಂದೂ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಿದರು.

೫. ಈ ಪ್ರಕರಣದಲ್ಲಿ ರಿಜಾಯಾ, ಅಕ್ರಮ್, ಸನಾ, ಶಾರುಖ್, ಸಬೀನಾ, ಅಜಗರ್ ಅಲಿ ಮತ್ತು ಛೋಟು ಎಂಬುವವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.

ಸ್ಥಳ ಬಿಟ್ಟು ಹೋಗುವಂತೆ ಮಾಡಲು ಹಿಂದೂಗಳಿಗೆ ಪದೇ ಪದೇ ಕಿರುಕುಳ ನೀಡುವ ಪ್ರಯತ್ನ!

‘ಕಳೆದ ಅನೇಕ ದಿನಗಳಿಂದ ಮುಸಲ್ಮಾನರು ಹಿಂದೂಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಚಿಕ್ಕ ವಯಸ್ಸಿನ ಹುಡುಗಿಯರು ಅಥವಾ ಯುವತಿಯರು ಯಾರನ್ನೂ ಬಿಡದೆ ಈ ಮುಸಲ್ಮಾನರು ತೊಂದರೆ ಕೊಡುತ್ತಿದ್ದಾರೆ’ ಎಂದು ಹಿಂದೂ ಕುಟುಂಬಗಳು ಆರೋಪಿಸಿವೆ. ಈ ಪ್ರದೇಶದಲ್ಲಿ ಕೇವಲ ಎರಡೇ ಹಿಂದೂ ಕುಟುಂಬಗಳಿವೆ. ಈ ಜಾಗವನ್ನು ಬಿಟ್ಟು ಹೋಗುವಂತೆ ಮಾಡಲು ಅವರು ಹಿಂದೂಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಸಹಕಾರ ನೀಡಬೇಕೆಂದು ಹಿಂದೂ ಕುಟುಂಬಗಳು ವಿನಂತಿಸಿವೆ. (ಹಿಂದೂಗಳೇ, ಮತಾಂಧರ ಭೀತಿಯಿಂದ ಪೊಲೀಸರು ಸಹಕರಿಸುವುದಿಲ್ಲ ಎಂಬುದನ್ನು ನೆನಪಿಡಿ. ಸುರಕ್ಷಿತ ಜೀವನ ನಡೆಸಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ! – ಸಂಪಾದಕರು)

ಸಂಪಾದಕೀಯ ನಿಲುವು

  • ಮತಾಂಧರ ಬಾಹುಳ್ಯವಿರುವ ಶಿವಡಿ ಪರಿಸರದಲ್ಲಿ ಬೇರೆ ಇನ್ನೇನು ನಿರೀಕ್ಷಿಸಲು ಸಾಧ್ಯ?
  • ಮತಾಂಧರ ಮೇಲೆ ಕೇವಲ ಮೊಕದ್ದಮೆ ದಾಖಲಾದರೆ ಸಾಲದು, ಇಂತಹವರ ವಿರುದ್ಧ ಕಠಿಣ ಕ್ರಮವೇ ಆಗಬೇಕು!
  • ಇಂದು ಶಿವಡಿಯಲ್ಲಿ ನಡೆದ ಘಟನೆ, ನಾಳೆ ಮುಂಬಯಿಯ ಉಳಿದ ಭಾಗಗಳಲ್ಲಿ ನಡೆಯಲು ಸಮಯ ತಗಲದು. ಮುಂದೆ ಇಂತಹ ಪರಿಸ್ಥಿತಿ ಎದುರಾದರೆ ಮುಂಬಯಿಯ ಹಿಂದೂಗಳು ಇದನ್ನು ಎದುರಿಸಲು ಸಿದ್ಧರಿದ್ದಾರೆಯೇ?