ರಮಜಾನ್ ಈದ್ ಸಮಯದಲ್ಲಿ ಮುಸಲ್ಮಾನ ಅಂಗಡಿಕಾರರಿಂದಲೇ ಖರೀದಿ ಮಾಡಿ ! – Tauqeer Nizami

  • ಅಹಲೆ ಸುನ್ನತ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ತೌಕೀರ್ ನಿಜಾಮಿ ಅವರಿಂದ ಮುಸಲ್ಮಾನರಿಗೆ ಕರೆ

  • ಚೈತ್ರ ನವರಾತ್ರಿಯಲ್ಲಿ ಹಿಂದೂಗಳು ಹಿಂದೂ ಅಂಗಡಿಕಾರರಿಂದಲೇ ಖರೀದಿ ಮಾಡಬೇಕು ! – ಹಿಂದೂ ಸಂಘಟನೆಗಳ ಪ್ರತ್ಯುತ್ತರ

ಭೋಪಾಲ್ (ಮಧ್ಯಪ್ರದೇಶ) – ರಮಜಾನ್ ಈದ್ ಹಿನ್ನೆಲೆಯಲ್ಲಿ ಮುಸಲ್ಮಾನರು ಕೇವಲ ಮುಸಲ್ಮಾನ ಅಂಗಡಿಕಾರರಿಂದಲೇ ಖರೀದಿ ಮಾಡಬೇಕು ಎಂದು ಅಹಲೆ ಸುನ್ನತ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ತೌಕೀರ್ ನಿಜಾಮಿ ಕರೆ ನೀಡಿದರು. ಇದರ ನಂತರ ಮಧ್ಯಪ್ರದೇಶದಲ್ಲಿ ವಿವಾದ ಉದ್ಭವಿಸಿದೆ. ಈ ಹೇಳಿಕೆಯ ನಂತರ ಕೆಲವು ಹಿಂದೂ ಸಂಘಟನೆಗಳು, ‘ಚೈತ್ರ ನವರಾತ್ರಿಯಲ್ಲಿ ಹಿಂದೂಗಳು ಹಿಂದೂ ಅಂಗಡಿಕಾರರಿಂದಲೇ ವಸ್ತುಗಳನ್ನು ಖರೀದಿ ಮಾಡಬೇಕು’ ಎಂದು ಹಿಂದೂಗಳಿಗೆ ಕರೆ ನೀಡಿವೆ. ಆಡಳಿತವು ಶಾಂತಿ ಕಾಪಾಡುವಂತೆ ವಿನಂತಿಸಿದ್ದು, ಪರಿಸ್ಥಿತಿಯ ಮೇಲೆ ನಿಗಾ ಇರಿಸಲಾಗಿದೆ.

ತೌಕೀರ್ ನಿಜಾಮಿ ಅವರು, ಸಮಾಜದ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಸ್ವಂತ ಹಣವನ್ನು ಸ್ವಂತ ಸಮಾಜದ ವ್ಯಾಪಾರಿಗಳಿಗೆ ಬೆಂಬಲ ನೀಡಲು ಬಳಸಬೇಕು ಎಂದು ಹೇಳಿದರು. ಜಕಾತ್‌ನ (ಮುಸಲ್ಮಾನರು ತಮ್ಮ ಸಂಪತ್ತಿನ ಒಂದು ಭಾಗವನ್ನು ಧರ್ಮದಾಯಕ್ಕಾಗಿ ದಾನ ಮಾಡುವುದು) ಯೋಗ್ಯ ಉಪಯೋಗ ಮಾಡಿಕೊಂಡು ಸಮಾಜದ ಸಣ್ಣ ವ್ಯವಹಾರಗಳಿಗೆ ಸಹಾಯವಾಗಬಹುದು ಎಂದು ಅವರು ತಿಳಿಸಿದರು.

ಸಂಪಾಕೀಯ ನಿಲುವು

1947 ರಲ್ಲಿ ಭಾರತದ ವಿಭಜನೆ ಮಾಡಿ ಮುಸಲ್ಮಾನರಿಗೆ ಪಾಕಿಸ್ತಾನವನ್ನು ನೀಡಲಾಗಿತ್ತು. ಆದ್ದರಿಂದ ಅವರು ಅಲ್ಲಿಗೆ ಹೋಗುವುದು ಅಪೇಕ್ಷಿತವಾಗಿದ್ದರೂ ಅವರು ಭಾರತದಲ್ಲೇ ಉಳಿದುಕೊಂಡಿದ್ದಾರೆ. ಈಗ ಅವರಿಗೆ ಪಾಕಿಸ್ತಾನಕ್ಕೆ ಹೋಗಲು ಹೇಳುವ ಸಮಯ ಬಂದಿದೆ ಎಂಬುದು ಇಂತಹ ಘಟನೆಗಳಿಂದ ಸ್ಪಷ್ಟವಾಗುತ್ತದೆ !