‘ಜೈ ಶ್ರೀರಾಮ್’ ಘೋಷಣೆಗಾಗಿ ಪಟ್ಟು ಹಿಡಿದ ಶಿವಸೇನಾ ಶಾಸಕಿ ದೇವಯಾನಿ ಫರಾಂದೆ !

ಮುಂಬಯಿ, ಮಾರ್ಚ್ ೧೮ (ಸುದ್ದಿ) – ವಿಧಾನಸಭೆಯಲ್ಲಿ ಮಾರ್ಚ್ ೧೮ ರಂದು ಪ್ರಶ್ನೋತ್ತರ ವೇಳೆಯಲ್ಲಿ ಮನರೇಗಾ ವಿಷಯದ ಕುರಿತು ಚರ್ಚೆ ನಡೆಯುತ್ತಿದ್ದಾಗ, ಹಿಂದುತ್ವದ ಅಂಶಗಳ ಮೇಲೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಠಾಕ್ರೆ ಗುಂಪಿನ ಶಾಸಕ ಭಾಸ್ಕರ ಜಾಧವ ಅವರು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮಾತನಾಡುವಾಗ, ‘ಜನರನ್ನು ಜೈ ಶ್ರೀರಾಮ್ ಮಾಡಲು ನಿರ್ಧರಿಸಿದ್ದೀರಾ?’ ಎಂದು ವ್ಯಂಗ್ಯವಾಗಿ ಟೀಕಿಸಿದರು. (ಜಾಧವ ಅವರು ಈ ಮೂಲಕ ಸರಕಾರದ ಧೋರಣೆಗಳು ಕಾರ್ಮಿಕರನ್ನು ಮರಣೋನ್ಮುಖರನ್ನಾಗಿ (ರಾಮ್ ನಾಮ್ ಸತ್ಯ ಹೈ) ಮಾಡುತ್ತಿವೆಯೇ? ಎಂದು ಹೇಳಬಯಸಿದ್ದರು.) ಇದಕ್ಕೆ ತಕ್ಷಣವೇ ಆಕ್ರಮಣಕಾರಿ ಪ್ರತಿಕ್ರಿಯೆ ನೀಡಿದ ಭಾಜಪ ಪ್ರಖರ ಹಿಂದುತ್ವನಿಷ್ಠ ಶಾಸಕಿ ದೇವಯಾನಿ ಫರಾಂದೆ ಅವರು, ಜಾಧವ ಅವರಿಗೆ ‘ಜೈ ಶ್ರೀರಾಮ್’ ಹೇಳಬೇಕೆಂದು ಪಟ್ಟು ಹಿಡಿದರು.
ಪ್ರಭು ಶ್ರೀರಾಮನ ನಾಮವನ್ನು ಅಪಮಾನಿಸುವ ಪ್ರಯತ್ನ!
ಶಾಸಕ ಜಾಧವ ಅವರು ಕಾರ್ಮಿಕರ ವೇತನದ ವಿಷಯವಾಗಿ ಸರಕಾರವನ್ನು ಮುತ್ತಿಗೆ ಹಾಕುವ ಪ್ರಯತ್ನದಲ್ಲಿ ಪ್ರಭು ಶ್ರೀರಾಮನ ಪವಿತ್ರ ನಾಮವನ್ನು ನಕಾರಾತ್ಮಕ ಸಂದರ್ಭದಲ್ಲಿ ಬಳಸಿದರು. ಈ ವಿಷಯ ಗಮನಕ್ಕೆ ಬಂದ ತಕ್ಷಣ ಶಾಸಕಿ ಫರಾಂದೆ ಅವರು ತಮ್ಮ ಜಾಗದಿಂದ ಎದ್ದು ಮೊದಲ ಸಾಲಿಗೆ ಬಂದು ಜಾಧವ ಅವರನ್ನು ತಡೆದರು. ‘ನೀವು ಜೈ ಶ್ರೀರಾಮ್ ಎನ್ನಿ’ ಎಂದು ಅವರು ಒತ್ತಾಯಿಸಿದರು. ಪ್ರಭು ಶ್ರೀರಾಮನ ನಾಮಸ್ಮರಣೆಯನ್ನು ವಿರೋಧಿಸುವ ಮತ್ತು ಅದನ್ನು ಉಪಹಾಸ ಮಾಡುವ ವೃತ್ತಿಯನ್ನು ಅವರು ಸದನದಲ್ಲಿ ಕಟುವಾಗಿ ಖಂಡಿಸಿದರು.
ಶಾಸಕಿ ಫರಾಂದೆ ಅವರು ಮಂಡಿಸಿದ ಪ್ರಖರ ಹಿಂದುತ್ವನಿಷ್ಠ ನಿಲುವಿನಿಂದ ಭಾಸ್ಕರ ಜಾಧವ ಸಂಕಷ್ಟಕ್ಕೆ ಸಿಲುಕಿದರು. ಜಾಧವ ಅವರು ಫರಾಂದೆ ಅವರ ಪಾಂಡಿತ್ಯದ ಬಗ್ಗೆ ಟೀಕೆ ಮಾಡುತ್ತಾ ವಿಷಯಾಂತರ ಮಾಡಲು ಪ್ರಯತ್ನಿಸಿದರು. ಈ ಸಮಯದಲ್ಲಿ ವಿಧಾನಸಭೆಯ ಸಭಾಧ್ಯಕ್ಷರು ಫರಾಂದೆ ಅವರಿಗೆ ತಮ್ಮ ಜಾಗದಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು; ಆದರೆ ಫರಾಂದೆ ಅವರು ತಮ್ಮ ಹಠವನ್ನು ಬಿಡದೆ ಹಿಂದುತ್ವದ ಅಭಿಮಾನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ವಿರೋಧ ಪಕ್ಷದವರು ಕಾರ್ಮಿಕರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಘೋಷಣೆಗಳನ್ನು ಕೂಗುತ್ತಾ ಸಭಾತ್ಯಾಗ ಮಾಡಿದರು. ಕಾರ್ಮಿಕರ ಕಲ್ಯಾಣಕ್ಕಿಂತ ಪ್ರಭು ಶ್ರೀರಾಮನ ನಾಮವನ್ನು ವಿರೋಧಿಸುವುದರಲ್ಲೇ ವಿರೋಧ ಪಕ್ಷದವರು ಧನ್ಯತೆ ಅನುಭವಿಸಿದ್ದು ಈ ವೇಳೆ ಕಂಡುಬಂದಿತು.
ಸಂಪಾಕೀಯ ನಿಲುವುಶಾಸಕಿ ದೇವಯಾನಿ ಫರಾಂದೆ ಅವರಂತಹ ಶಾಸಕರೇ ಹಿಂದೂ ಧರ್ಮದ ನಿಜವಾದ ಶಕ್ತಿ ! |
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ