ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಯುಗಾದಿಯ ದಿನದಂದು ‘ರಾಮರಕ್ಷಾ ಯಂತ್ರ’ ಪ್ರತಿಷ್ಠಾಪನೆ! Ram Raksha Yantra Installation

ಅಯೋಧ್ಯೆ (ಉತ್ತರ ಪ್ರದೇಶ) – ಚೈತ್ರ ನವರಾತ್ರಿಯ ಮೊದಲ ದಿನ, ಅಂದರೆ ಯುಗಾದಿಯ ಶುಭ ಸಂದರ್ಭದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹಸ್ತದಿಂದ ‘ರಾಮರಕ್ಷಾ ಯಂತ್ರ’ವನ್ನು ಪ್ರತಿಷ್ಠಾಪಿಸಲಾಯಿತು. ಬೆಳಿಗ್ಗೆ ೧೧:೫೫ ಗಂಟೆಗೆ ಅಭಿಜಿತ್ ಮುಹೂರ್ತದಲ್ಲಿ ಈ ಸಮಾರಂಭವು ಜರುಗಿತು. ಪೂಜೆಯ ನಂತರ, ಯಂತ್ರವನ್ನು ಮಂದಿರದ ಮೇಲಿನ ಮಹಡಿಯಲ್ಲಿ ಸ್ಥಾಪಿಸಲಾಯಿತು.

ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು. ಈ ಯಂತ್ರವನ್ನು ವಿಶೇಷ ಲೋಹಗಳಿಂದ ಸಿದ್ಧಪಡಿಸಲಾಗಿದ್ದು, ಇದನ್ನು ಆಧ್ಯಾತ್ಮಿಕ ಶಕ್ತಿ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವೈದಿಕ ಪದ್ಧತಿಯಂತೆ ಈ ಯಂತ್ರದ ಸ್ಥಾಪನೆಯನ್ನು ಮಾಡಲಾಯಿತು.