ಬೆಳಗಾವಿಯಲ್ಲಿ ಖಮೇನಿ ಅವರ ಫಲಕಗಳು ರಾರಾಜಿಸಿದವು: ಶ್ರೀರಾಮ ಸೇನೆಯಿಂದ ತೀವ್ರ ವಿರೋಧ!

ಬೆಳಗಾವಿ – ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಅವರ ಬೆಂಬಲಾರ್ಥವಾಗಿ ಬೆಳಗಾವಿ ನಗರದಲ್ಲಿ ಫಲಕಗಳನ್ನು ಅಳವಡಿಸಿರುವುದನ್ನು ವಿರೋಧಿಸಿ ಶ್ರೀರಾಮ ಸೇನೆಯ ವತಿಯಿಂದ ಪ್ರತಿಭಟನೆ (ನಿದರ್ಶನ) ನಡೆಸಲಾಯಿತು. ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರ ನೇತೃತ್ವದಲ್ಲಿ ಬೆಳಗಾವಿಯ ಅಶೋಕ ವೃತ್ತ ಮತ್ತು ಕೊಲ್ಹಾಪುರ ವೃತ್ತದಲ್ಲಿ ಕಾರ್ಯಕರ್ತರು ಖಮೇನಿ ಬೆಂಬಲಿಗರನ್ನು ವಿರೋಧಿಸಿದರು. ಈ ಸಮಯದಲ್ಲಿ ಖಮೇನಿ ಅವರ ಫಲಕಕ್ಕೆ ಪ್ರತಿಯಾಗಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ಭಾರತದ ಪ್ರಧಾನಿ ಮೋದಿ ಅವರ ಭಾವಚಿತ್ರವಿರುವ ಫಲಕಗಳನ್ನು ಅಳವಡಿಸಲಾಯಿತು. ಹಾಗೆಯೇ ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನನ ಹೊಟ್ಟೆಯನ್ನು ಸೀಳುತ್ತಿರುವ ಚಿತ್ರವನ್ನು ತೋರಿಸಿ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ನಗರದಲ್ಲಿ ಯಾವುದೇ ಫಲಕಗಳನ್ನು ಅಳವಡಿಸಬಾರದು ಎಂದು ಬೆಳಗಾವಿ ನಗರ ಪೊಲೀಸರು ವಿನಂತಿಸಿದ್ದರು; ಆದರೆ ಪೊಲೀಸರ ವಿನಂತಿಯನ್ನು ತಿರಸ್ಕರಿಸಿ ಖಮೇನಿ ಬೆಂಬಲಿಗರು ನಗರದಲ್ಲಿ ಖಮೇನಿಯವರ ಭಾವಚಿತ್ರವಿರುವ ಫಲಕಗಳನ್ನು ಅಳವಡಿಸಿದ್ದರು. ಇದಕ್ಕೆ ಪ್ರತಿಯಾಗಿ ಶ್ರೀರಾಮ ಸೇನೆಯ ಕಾರ್ಯಕರ್ತರು ಇಸ್ರೇಲ್ ಮತ್ತು ಭಾರತದ ಪ್ರಧಾನ ಮಂತ್ರಿಗಳಿಗೆ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ‘ಛತ್ರಪತಿ ಶಿವಾಜಿ ಮಹಾರಾಜ್’ ಮತ್ತು ‘ಜೈ ಶ್ರೀರಾಮ್’ ಘೋಷಣೆಗಳಿಂದ ಇಡೀ ಪರಿಸರವೇ ಮೊಳಗಿತು.

ಸಂಪಾದಕೀಯ ನಿಲುವು

ಖಮೇನಿ ಅವರ ಫಲಕಗಳು ರಾರಾಜಿಸಲು ಬೆಳಗಾವಿ ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆಯೇ? ಸಹಜವಾಗಿಯೇ ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಎರಡನೇ ಪಾಕಿಸ್ತಾನವೇ ನೆಲೆಸಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿದ್ದರೆ, ಅದರಲ್ಲಿ ಆಶ್ಚರ್ಯವೇನಿಲ್ಲ!