ರಾಷ್ಟ್ರೀಯ ಹೆದ್ದಾರಿಯಲ್ಲಿ ‘ಈ ರಸ್ತೆ ಮುಸ್ಲಿಮರಿಗಾಗಿ ಅಲ್ಲ’ ಎಂದು ಬರೆದ ಮೂವರು ಹಿಂದೂಗಳ ಬಂಧನ!

  • ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದ ಘಟನೆ

  • ಸನಾತನ ಧರ್ಮಕ್ಕಾಗಿ ೧೦ ಬಾರಿ ಜೈಲಿಗೆ ಹೋಗಲು ಸಿದ್ಧ! – ಬಂಧಿತ ಯುವತಿ

ಸಹರಾನ್‌ಪುರ (ಉತ್ತರ ಪ್ರದೇಶ) – ಇಲ್ಲಿಂದ ಹಾದುಹೋಗುವ ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯಲ್ಲಿ (ಕ್ರಮಾಂಕ ‘೭೨ ಅ’ದಲ್ಲಿ) ಮೂವರು ಹಿಂದೂಗಳು ಕಥಿತವಾಗಿ ಕೆಲವು ಆಕ್ಷೇಪಾರ್ಹ ಮತ್ತು ವಿವಾದಾತ್ಮಕ ಘೋಷಣೆಗಳನ್ನು ಬರೆದಿರುವುದು ಬೆಳಕಿಗೆ ಬಂದಿದೆ. ಈ ಘಟನೆಯು ಫೆಬ್ರವರಿ ೨೬ ರಂದು ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಮೂವರು ರಸ್ತೆ ಬದಿಯಲ್ಲಿದ್ದ ಸಿಮೆಂಟ್ ಬ್ಲಾಕ್‌ಗಳ ಮೇಲೆ ಮತ್ತು ಬಸ್ ನಿಲ್ದಾಣದಲ್ಲಿ ‘ಸ್ಪ್ರೇ ಪೇಂಟ್’ ಬಳಸಿ ದೊಡ್ಡ ಅಕ್ಷರಗಳಲ್ಲಿ ‘ಈ ರಸ್ತೆ ಮುಸ್ಲಿಮರಿಗಾಗಿ ಅಲ್ಲ’ ಎಂದು ಬರೆದಿದ್ದಾರೆ. ಇದರ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸಹರಾನ್‌ಪುರ ಪೊಲೀಸರು ಸಕ್ರಿಯರಾಗಿದ್ದು, ಆರೋಪಿಗಳ ಶೋಧ ಕಾರ್ಯ ಆರಂಭಿಸಿದರು. (ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಚಿತ್ರಗಳು ಅಥವಾ ಬರಹವನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವವರ ವಿರುದ್ಧ ಪೊಲೀಸರು ಎಂದಾದರೂ ಇಷ್ಟೊಂದು ತತ್ಪರತೆ ತೋರಿಸುತ್ತಾರೆಯೇ? – ಸಂಪಾದಕರು).

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೨ ಯುವಕರು ಮತ್ತು ೧ ಯುವತಿಯನ್ನು ಬಂಧಿಸಲಾಗಿದೆ. ಬಂಧನದ ನಂತರ ಯುವತಿಯು ಪೊಲೀಸ್ ಮತ್ತು ಪ್ರಸಾರ ಮಾಧ್ಯಮಗಳಿಗೆ, ತಾನು ಮಾಡಿದ ಕೃತ್ಯದ ಬಗ್ಗೆ ತನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ. ಸನಾತನ ಧರ್ಮಕ್ಕಾಗಿ ೧೦ ಬಾರಿ ಬೇಕಾದರೂ ಜೈಲಿಗೆ ಹೋಗಲು ತಾನು ಸಿದ್ಧ ಎಂದು ಅವಳು ಹೇಳಿದ್ದಾಳೆ.