LPG Crisis IRCTC : ಮುಂಬಯಿ: ಐ.ಆರ್‌.ಸಿ.ಟಿ.ಸಿ. ಊಟ ಸೇವೆ ಬಂದ್

ಸಿಲಿಂಡರ್ ಗಳ ಕೊರತೆಯ ಪರಿಣಾಮ

ಮುಂಬಯಿ – ಇಲ್ಲಿನ ಐ.ಆರ್.ಸಿ.ಟಿ.ಸಿ.ಯು (ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮ) ಮುಂಬಯಿನಲ್ಲಿರುವ ತನ್ನ ಅಡುಗೆ ಮನೆಯನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಪ್ರಸ್ತುತ ನಡೆಯುತ್ತಿರುವ ಇರಾನ್ – ಅಮೆರಿಕ ಯುದ್ಧದ ಹಿನ್ನೆಲೆಯಲ್ಲಿ ಉಂಟಾಗಿರುವ ಸಿಲಿಂಡರ್ ಗಳ ಕೊರತೆಯಿಂದಾಗಿ ಇದನ್ನು ಮುಚ್ಚಿರಬಹುದೆಂದು ಹೇಳಲಾಗುತ್ತಿದೆ. ರೈಲ್ವೆಗಳಲ್ಲಿ ನೀಡುವ ಆಹಾರ ಸೇವೆಯ ಮೇಲೂ ಇದರ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಐ.ಆರ್‌.ಸಿ.ಟಿ.ಸಿ.ಯು ಪವಯಿ, ಶಿವಡಿ ಮತ್ತು ಕುರ್ಲಾದಲ್ಲಿ ತನ್ನ ಅಡುಗೆ ಮನೆಗಳನ್ನು ಹೊಂದಿದೆ. ಆದರೆ ರೈಲ್ವೆ ಅಧಿಕಾರಿಗಳು ‘ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು,’ ಎಂದು ಭರವಸೆ ನೀಡಿದ್ದಾರೆ.