|
(‘ಎಫ್.ಎಸ್.ಎಸ್.ಎ.ಐ.’ ಎಂದರೆ ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ, ಅಂದರೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ)
ಜೈಪುರ (ರಾಜಸ್ಥಾನ) – ಇಲ್ಲಿ ‘ಎಕ್ಸ್ಪೈರಿ ಡೇಟ್’ ಮುಗಿದಿರುವ ಅಮೂಲ್ ಸಂಸ್ಥೆಯ ಸುಮಾರು ಒಂದೂವರೆ ಲಕ್ಷ ಕಿಲೋ ಆಹಾರ ಉತ್ಪನ್ನಗಳನ್ನು ಜಪ್ತಿ ಮಾಡಿ ನಾಶಪಡಿಸಲಾಯಿತು. ಈ ಬೃಹತ್ ದಾಸ್ತಾನನ್ನು ಎಫ್.ಎಸ್.ಎಸ್.ಎ.ಐ. ವಿಭಾಗವು ಕಾರ್ಯಾಚರಣೆ ನಡೆಸಿ ನಾಶಪಡಿಸಿತು. ಇಷ್ಟೊಂದು ಪ್ರಮಾಣದ ಸರಕನ್ನು ನಾಶಪಡಿಸಲು 4 ದಿನಗಳು ಬೇಕಾದವು. ಒಟ್ಟು 27 ಟ್ರಕ್ಗಳಷ್ಟು ಈ ಸರಕು ಇತ್ತು. ಜೈಪುರದ ಖೋ ನಾಗೋರಿಯನ್ ಪ್ರದೇಶದ ಗೋದಾಮಿನ ಮೇಲೆ ದಾಳಿ ನಡೆಸಿ ಈ ಕಾರ್ಯಾಚರಣೆ ನಡೆಸಲಾಯಿತು. ತನಿಖೆಯ ವೇಳೆ, ಬೃಹತ್ ಪ್ರಮಾಣದಲ್ಲಿ ಕಾಲಾವಧಿ ಮುಗಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಟ್ಟು, ಅವುಗಳ ಮೇಲಿನ ‘ಎಕ್ಸ್ಪೈರಿ ಡೇಟ್’ ಅಳಿಸಿ ಹೊಸ ದಿನಾಂಕವನ್ನು ಮುದ್ರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂಬ ಮಾಹಿತಿ ವಿಭಾಗಕ್ಕೆ ಲಭಿಸಿತ್ತು.
🚨 Jaipur (Rajasthan): 1.5 Lakh kg Expired Amul Products Destroyed
⚖️ The FSSAI carried out a 4-day disposal operation after uncovering a massive stock of expired Amul products.
❗ Shockingly, attempts were reportedly being made to sell these products by altering the expiry… pic.twitter.com/SGBw7bE1li
— Sanatan Prabhat (@SanatanPrabhat) March 12, 2026
ತನಿಖೆಯ ಸಮಯದಲ್ಲಿ ಅಧಿಕಾರಿಗಳಿಗೆ ಅಂದಾಜು 12 ಸಾವಿರ ಕಾರ್ಟನ್ (ಪೆಟ್ಟಿಗೆ) ಕಾಲಾವಧಿ ಮುಗಿದ ಉತ್ಪನ್ನಗಳು ಪತ್ತೆಯಾದವು. ಇವುಗಳಲ್ಲಿ ಸುಮಾರು 3 ಸಾವಿರ ‘ಕಾರ್ಟನ್’ಗಳ ಮೇಲಿದ್ದ ಪ್ಯಾಕೆಟ್ಗಳ ‘ಎಕ್ಸ್ಪೈರಿ ಡೇಟ್’ ಅಳಿಸಿರುವುದು ಕಂಡುಬಂದಿದೆ. ಗೋದಾಮಿನಿಂದ ಥಿನ್ನರ್, ಅಸಿಟೋನ್ ಮತ್ತು ಇತರ ರಾಸಾಯನಿಕಗಳನ್ನೂ ಜಪ್ತಿ ಮಾಡಲಾಗಿದೆ. ಪ್ಯಾಕೆಟ್ಗಳ ಮೇಲಿರುವ ಹಳೆಯ ದಿನಾಂಕವನ್ನು ತೆಗೆದುಹಾಕಲು ಈ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತು ಎಂಬ ಸಂಶಯವಿದೆ.
ಸಂಪಾದಕೀಯ ನಿಲುವು
|
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !