ಹಿಂದೂ ಸಂಘಟನೆಗಳ ನೇತೃತ್ವದಲ್ಲಿ 4 ಮಕ್ಕಳೊಂದಿಗೆ ಹಿಂದೂ ಧರ್ಮಕ್ಕೆ ಪೀಡಿತ ಯುವತಿಯ ಮರು-ಪ್ರವೇಶ !

ಪಿಂಪ್ರಿ ಚಿಂಚವಾಡ (ಪುಣೆ ಜಿಲ್ಲೆ) – ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಪಿಂಪ್ರಿಯ ಆರ್ಯ ಸಮಾಜ ಮಂದಿರದಲ್ಲಿ ಮಾರ್ಚ್ 8 ರಂದು ಪೀಡಿತ ಹಿಂದೂ ಯುವತಿ ಮತ್ತು ಆಕೆಯ 4 ಮಕ್ಕಳನ್ನು ವಿಧಿವಿಧಾನಗಳೊಂದಿಗೆ ಹಿಂದೂ ಧರ್ಮಕ್ಕೆ ಮರು-ಪ್ರವೇಶ ಮಾಡಿಸಲಾಯಿತು. ‘ಲವ್ ಜಿಹಾದ್’ ಮತ್ತು ಬಲವಂತದ ಮತಾಂತರಕ್ಕೆ ಬಲಿಯಾಗಿದ್ದ ಈ ಯುವತಿ 10 ವರ್ಷಗಳ ನರಕಯಾತನೆಯ ನಂತರ ಮತ್ತೆ ಸ್ವಧರ್ಮಕ್ಕೆ ಮರಳಿದ್ದಾಳೆ. ಈ ಸಂದರ್ಭದಲ್ಲಿ ಪೂರ್ವಾಶ್ರಮದ ‘ಸಾಯಲಿ’ (ಮದುವೆಯ ನಂತರದ ಅಲಿಜಾ)ಳನ್ನು ಶುದ್ಧೀಕರಿಸಿ ಆಕೆಗೆ ‘ಆದ್ಯಾ’ ಎಂದು ನಾಮಕರಣ ಮಾಡಲಾಯಿತು. ಈ ವೇಳೆ ಆದ್ಯಾ ಮತ್ತು ಆಕೆಯ ಮಕ್ಕಳಿಗೆ ಜೇಜುರಿ ದೇವಸ್ಥಾನದ ವಿಶ್ವಸ್ತರು ಮತ್ತು ಧರ್ಮಪ್ರೇಮಿಗಳು ಉಡುಗೊರೆಗಳನ್ನು ನೀಡಿ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.
ಏನಿದು ಪ್ರಕರಣ ?
ಪಿಂಪ್ರಿ-ಚಿಂಚವಾಡದ ಸಾಯಲಿ ಸುರ್ವೆ ಎಂಬ ಏರ್ ಹೋಸ್ಟೆಸ್ ತರಬೇತಿ ಪಡೆದ ಯುವತಿಯು, 2016 ರಲ್ಲಿ ಕುಟುಂಬದ ವಿರೋಧವನ್ನು ಮೀರಿ ಮೀರಾರೋಡ್ನ ಉದ್ಯಮಿ ಆತಿಫ್ ತಾಸೆ ಎಂಬಾತನನ್ನು ವಿವಾಹವಾಗಿದ್ದಳು. ವಿವಾಹಕ್ಕಾಗಿ ಆಕೆಯನ್ನು ಬಲವಂತವಾಗಿ ಮತಾಂತರಿಸಿ ‘ಅಲಿಜಾ’ ಎಂದು ಹೆಸರಿಡಲಾಗಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ಆಕೆಗೆ ಕಿರುಕುಳ ಆರಂಭವಾಯಿತು. ಕಳೆದ 10 ವರ್ಷಗಳಲ್ಲಿ ಆಕೆಗೆ 4 ಮಕ್ಕಳಾದವು; ಆದರೆ ಈ ಅವಧಿಯಲ್ಲಿ ಆಕೆ ಅತ್ತೆ-ಮನೆಯವರಿಂದ ಅಮಾನವೀಯ ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳನ್ನು ಸಹಿಸಬೇಕಾಯಿತು.
ಪೊಲೀಸರ ಉದಾಸೀನತೆ ಮತ್ತು ಹಿಂದೂ ಸಂಘಟನೆಗಳ ಆಸರೆ !
ಪೀಡಿತ ಯುವತಿಯು ಹಲವು ಬಾರಿ ಪೊಲೀಸರಿಗೆ ದೂರು ನೀಡಲು ಪ್ರಯತ್ನಿಸಿದಳು; ಆದರೆ ದುರದೃಷ್ಟವಶಾತ್ ಪೊಲೀಸರು ಆಕೆಯ ದೂರನ್ನು ದಾಖಲಿಸಿಕೊಳ್ಳಲಿಲ್ಲ. ಕೊನೆಗೆ ಆಕೆ ಕೆಲವು ಹಿಂದುತ್ವನಿಷ್ಠ ಸಂಘಟನೆಗಳ ಸಂಪರ್ಕಕ್ಕೆ ಬಂದಳು ಮತ್ತು ಆಕೆಯನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಸ್ವಧರ್ಮಕ್ಕೆ ಮರಳುವ ದಿಟ್ಟ ನಿರ್ಧಾರ ತೆಗೆದುಕೊಂಡ ನಂತರ, ಆಕೆಯನ್ನು ಮತ್ತು ಆಕೆಯ ನಾಲ್ವರು ಮಕ್ಕಳನ್ನು ವಿಧಿವಿಧಾನದೊಂದಿಗೆ ಹಿಂದೂ ಧರ್ಮಕ್ಕೆ ಸ್ವಾಗತಿಸಲಾಯಿತು. (ಒಬ್ಬ ಸಂತ್ರಸ್ತೆಗೆ ನ್ಯಾಯ ಪಡೆಯಲು ಹಿಂದೂ ಸಂಘಟನೆಗಳ ದಾರಿ ಕಾಯಬೇಕೆಂದಾದರೆ, ಪೊಲೀಸ್ ಆಡಳಿತ ಯಾರ ಪರವಾಗಿ ಕೆಲಸ ಮಾಡುತ್ತಿದೆ? ಇಂತಹ ಕರ್ತವ್ಯಹೀನ ಪೊಲೀಸರ ಮೇಲೆಯೂ ಕಠಿಣ ಕ್ರಮವಾಗಬೇಕು. – ಸಂಪಾದಕ)
ಗಣ್ಯರ ಉಪಸ್ಥಿತಿ !
ಈ ಸಮಾರಂಭದಲ್ಲಿ ರಾಜ್ಯಸಭೆಯ ಬಿಜೆಪಿ ಸಂಸದೆ ಪ್ರೊ. ಡಾ. (ಸೌ.) ಮೇಧಾ ಕುಲಕರ್ಣಿ, ಬಿಜೆಪಿ ಶಾಸಕಿ ಸೌ. ಉಮಾತಾಯಿ ಖಾಪ್ರೆ, ಸಮಸ್ತ ಹಿಂದೂ ಅಘಾಡಿಯ ಶ್ರೀ ಮಿಲಿಂದ್ ಏಕಬೋಟೆ, ಬಜರಂಗದಳದ ಶ್ರೀ ಕುನಾಲ್ ಸಾಠೆ, ಹಿಂದುತ್ವನಿಷ್ಠ ಶ್ರೀ ಸಮೀರ್ ಕುಲಕರ್ಣಿ ಸೇರಿದಂತೆ ಅನೇಕ ಧರ್ಮಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಹಿಂದೂ ಹುಡುಗಿಯರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವಾಗ ಜಾಗರೂಕರಾಗಿರಬೇಕು! – ಪ್ರೊ. ಡಾ. (ಸೌ.) ಮೇಧಾ ಕುಲಕರ್ಣಿ, ಸಂಸದರು

ಆದ್ಯಾ ತೋರಿಸಿದ ಧೈರ್ಯ ಶ್ಲಾಘನೀಯ. ಹಿಂದೂ ಹುಡುಗಿಯರು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಅತ್ಯಂತ ಜಾಗರೂಕರಾಗಿರುವುದು ಅವಶ್ಯಕ. ಸಂಕಷ್ಟದ ಸಮಯದಲ್ಲಿ ಇಂತಹ ಮಹಿಳೆಯರ ಬೆನ್ನಿಗೆ ಸರ್ಕಾರ ನಿಲ್ಲಲಿದೆ ಎಂದು ಅವರು ಭರವಸೆ ನೀಡಿದರು.
ದೇಶದ ಜನಸಂಖ್ಯಾ ಬದಲಾವಣೆಯ ಸಂಚಿಗೆ ‘ಲವ್ ಜಿಹಾದ್’ ಒಂದು ಅಸ್ತ್ರ! – ಮಿಲಿಂದ್ ಏಕಬೋಟೆ

ದೇಶದ ಜನಸಂಖ್ಯಾ (ಡೆಮೋಗ್ರಫಿ) ಬದಲಾವಣೆಯ ಸಂಚಿಗೆ ‘ಲವ್ ಜಿಹಾದ್’ ಅನ್ನು ಒಂದು ಅಸ್ತ್ರವಾಗಿ ಬಳಸಲಾಗುತ್ತಿದೆ. ಆದ್ಯಾರಂತಹ ಅನೇಕ ಹುಡುಗಿಯರು ಮರಳಿ ಬರಲು ಇಚ್ಛಿಸುತ್ತಾರೆ; ಆದರೆ ಭಯದಿಂದಾಗಿ ಅವರು ಹೆಜ್ಜೆ ಇಡಲು ಸಾಧ್ಯವಾಗುತ್ತಿಲ್ಲ.
ಹಿಂದೂ ಧರ್ಮದಲ್ಲಿ ಸ್ತ್ರೀಯರಿಗೆ ನೀಡುವ ಗೌರವ ಬೇರೆಲ್ಲೂ ಇಲ್ಲ! – ಪೀಡಿತ ಯುವತಿ“ಹಿಂದೂ ಧರ್ಮದಲ್ಲಿ ಸ್ತ್ರೀಯರಿಗೆ ನೀಡುವ ಗೌರವ ಬೇರೆಲ್ಲೂ ಸಿಗುವುದಿಲ್ಲ. ಪ್ರಪಂಚದ ಅರಿವಿಲ್ಲದೆ ಭಾವನಾತ್ಮಕವಾಗಿ ತೆಗೆದುಕೊಂಡ ನಿರ್ಧಾರ ನನಗೆ ಭಾರಿ ಬೆಲೆ ತೆರುವಂತೆ ಮಾಡಿತು. ಮೊದಲು ನನ್ನ ಆಲೋಚನೆಗಳು ‘ಸೆಕ್ಯುಲರ್’ (ಧರ್ಮನಿರಪೇಕ್ಷ) ಆಗಿದ್ದವು; ಆದರೆ 10 ವರ್ಷಗಳಲ್ಲಿ ಅನುಭವಿಸಿದ ನರಕದಿಂದ ಈಗ ನಾನು ದೃಢವಾಗಿ ಹೇಳಬಲ್ಲೆ, ನಮ್ಮ ಸಂಸ್ಕೃತಿಯೇ ಶ್ರೇಷ್ಠ. ಭವಿಷ್ಯದಲ್ಲಿ ಇಂತಹ ಪೀಡಿತ ಹುಡುಗಿಯರಿಗೆ ಸಹಾಯ ಮಾಡಲು ನಾನು ಪ್ರಯತ್ನಿಸುತ್ತೇನೆ,” ಎಂದು ಆದ್ಯಾ ಭಾವುಕರಾಗಿ ಹೇಳಿದರು. |
ಅಡ್ವೊಕೇಟ್ ವೀರೇಂದ್ರ ಇಚಲಕರಂಜೀಕರ್ ಅವರಿಗೆ ಕೃತಜ್ಞತೆಗಳು!
ಈ ಸಂದರ್ಭದಲ್ಲಿ ‘ಆರ್ಯ ಸಮಾಜ ಮಂದಿರ’ವು ಈ ಪ್ರಕರಣದಲ್ಲಿ ‘ಹಿಂದೂ ವಿಧಿಜ್ಞ ಪರಿಷತ್’ನ ಅಡ್ವೊಕೇಟ್ ವೀರೇಂದ್ರ ಇಚಲಕರಂಜೀಕರ್ ಅವರು ನೀಡಿದ ಕಾನೂನು ಸಹಾಯಕ್ಕಾಗಿ ಕೃತಜ್ಞತೆ ಸಲ್ಲಿಸಿತು.
ಸಂಪಾದಕೀಯ ನಿಲುವುಹಿಂದೂ ಸಂಘಟನೆಗಳ ಕಾರ್ಯ ಶ್ಲಾಘನೀಯ; ಆದರೆ ಎಲ್ಲಿಯವರೆಗೆ ಪ್ರತಿ ಹಿಂದೂ ಮನೆಯಲ್ಲಿ ಹೆಣ್ಣುಮಕ್ಕಳಿಗೆ ಧರ್ಮ ಶಿಕ್ಷಣ ನೀಡಲಾಗುವುದಿಲ್ಲವೋ, ಅಲ್ಲಿಯವರೆಗೆ ‘ಲವ್ ಜಿಹಾದ್’ ಎಂಬ ಈ ವಿಷದ ಬಳ್ಳಿಯನ್ನು ಬೇರುಸಹಿತ ಕಿತ್ತೊಗೆಯಲು ಸಾಧ್ಯವಿಲ್ಲ. ಇಂದು ಒಬ್ಬ ಯುವತಿ ಮರಳಿದ್ದಾಳೆ; ಆದರೆ ಇಂತಹ ಸಾವಿರಾರು ಯುವತಿಯರು ಇನ್ನೂ ನರಕಯಾತನೆ ಅನುಭವಿಸುತ್ತಿದ್ದಾರೆ ಎಂಬುದನ್ನು ಹಿಂದೂಗಳು ಮರೆಯಬಾರದು ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!