|

ಅಹಿಲ್ಯಾನಗರ – ಕಳೆದ ವರ್ಷದಂತೆ ಈ ವರ್ಷವೂ ಜಾತ್ರೆಯಲ್ಲಿ ಮುಸಲ್ಮಾನ ವ್ಯಾಪಾರಿಗಳು ಮಳಿಗೆಗಳನ್ನು ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ. ಮಢಿ (ತಾ. ಪಾಥರ್ಡಿ) ಇಲ್ಲಿನ ಗ್ರಾಮ ಪಂಚಾಯತಿಯು ಈ ಬಗ್ಗೆ ಠರಾವು ಅಂಗೀಕರಿಸಿದೆ. ಮಢಿ ಗ್ರಾಮದ ಸರಪಂಚ ಸಂಜಯ ಮರಕಡ ಅವರು ಈ ನಿಲುವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಕಳೆದ ವರ್ಷ ಈ ನಿರ್ಧಾರದ ಬಗ್ಗೆ ದೊಡ್ಡ ವಿವಾದ ಉಂಟಾಗಿತ್ತು ಮತ್ತು ಈ ಪ್ರಕರಣವು ನ್ಯಾಯಾಲಯಕ್ಕೂ ಹೋಗಿತ್ತು. ಇನ್ನು ಅಂತಿಮ ತೀರ್ಪು ಬಾರದೇ ಇದ್ದರೂ, ‘ಈ ವರ್ಷವೂ ಮುಸಲ್ಮಾನ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಬಿಡುವುದಿಲ್ಲ’ ಎಂಬ ನಿಲುವನ್ನು ಮಾಜಿ ಸರಪಂಚ ಹಾಗೂ ಆಡಳಿತಾಧಿಕಾರಿ ಸಂಜಯ ಮರಕಡ ಪುನರುಚ್ಚರಿಸಿದ್ದಾರೆ.
Ban on Muslim traders from conducting business at the Madhi Yatra in Ahilyanagar.
Locals allege some vendors entered temple premises after consuming non-veg food.
Hindu yatras are regarded as spiritual gatherings meant to foster devotion and inner upliftment.
Villagers say the… pic.twitter.com/2oaZkyib28
— Sanatan Prabhat (@SanatanPrabhat) February 27, 2026
ಕಳೆದ ವರ್ಷ ಮುಸಲ್ಮಾನ ವ್ಯಾಪಾರಿಗಳನ್ನು ವಿರೋಧಿಸುವ ಠರಾವು ೩೨೭ ಮತಗಳಿಂದ ಅಂಗೀಕಾರವಾಗಿತ್ತು. ಜಾತ್ರೆ-ಉತ್ಸವಗಳ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಾಣಿಗಳ ಹತ್ಯೆ ಮಾಡಲಾಗುತ್ತಿತ್ತು. ಈ ಹತ್ಯೆಯು ಈಗ ಕಡಿಮೆಯಾಗಿದ್ದರೂ, ಸ್ವಲ್ಪ ಮಟ್ಟಿಗೆ ನಡೆಯುತ್ತಿದೆ ಮತ್ತು ಇದು ಮುಸಲ್ಮಾನ ಸಮಾಜದವರಿಂದಲೇ ನಡೆಯುತ್ತಿರುವುದರಿಂದ, ಮುಸಲ್ಮಾನ ಸಮಾಜಕ್ಕೆ ವ್ಯಾಪಾರ ಮಾಡಲು ಅವಕಾಶ ನೀಡದಿರುವ ನಿರ್ಧಾರವು ಸರಿಯಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರ್ವಧರ್ಮ ಸಮಭಾವದ ನಿಲುವು ತಳೆಯುವುದಾದರೆ, ನಮಗೂ ಮಸೀದಿಗೆ ಹೋಗಿ ಕೀರ್ತನೆ ಮಾಡಲು ಅನುಮತಿ ನೀಡಲಿ! – ಸಂಜಯ ಮರಕಡ, ಸರಪಂಚ
ಗ್ರಾಮ ಪಂಚಾಯತಿಯ ಸರಪಂಚ ಸಂಜಯ ಮರಕಡ ಮಾತನಾಡಿ, ಜಾತ್ರೆಯ ಸಮಯದಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ಅನುಮತಿ ನೀಡದಿರುವ ನಿರ್ಧಾರವನ್ನು ಗ್ರಾಮ ಪಂಚಾಯತಿಯು ಉದ್ದೇಶಪೂರ್ವಕವಾಗಿಯೇ ತೆಗೆದುಕೊಂಡಿದೆ. ಕಾನಿಫನಾಥ ಮಂದಿರವು ನಮಗೆ ಪವಿತ್ರವಾದ ಸ್ಥಳವಾಗಿದೆ. ‘ಕೆಲವು ಮುಸಲ್ಮಾನ ವ್ಯಾಪಾರಿಗಳು ಮಾಂಸಾಹಾರ ಸೇವಿಸಿ ದೇವಸ್ಥಾನದ ಆವರಣಕ್ಕೆ ಬರುತ್ತಾರೆ’ ಎಂದು ಸ್ಥಳೀಯರಿಂದ ಸತತವಾಗಿ ದೂರುಗಳು ಬರುತ್ತಿದ್ದವು. ದೇವಸ್ಥಾನದ ಆವರಣದಲ್ಲಿ ಇಂತಹ ವರ್ತನೆ ಸರಿಯಲ್ಲ ಎಂಬ ಭಾವನೆ ಗ್ರಾಮಸ್ಥರಲ್ಲಿದೆ. ಒಂದು ವೇಳೆ ಸರ್ವಧರ್ಮ ಸಮಭಾವದ ನಿಲುವು ತಳೆಯಬೇಕೆಂದಿದ್ದರೆ, ನಮಗೂ ಮಸೀದಿಗೆ ಹೋಗಿ ಕೀರ್ತನೆ ಮಾಡಲು ಅನುಮತಿ ನೀಡಬೇಕಾಗುತ್ತದೆ ಎಂದು ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಸ್ಥಳೀಯ ಧಾರ್ಮಿಕ ಪರಂಪರೆ ಮತ್ತು ಗ್ರಾಮಸ್ಥರ ಭಾವನೆಗಳನ್ನು ಗೌರವಿಸಲು ಈ ಠರಾವು ಮಾಡಲಾಗಿದೆ ಎಂದು ಮರಕಡ ತಿಳಿಸಿದರು.
ಸಂಪಾದಕೀಯ ನಿಲುವು
|
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !