ಚಿಕ್ಕಮಗಳೂರಿನಲ್ಲಿ ದೇವಸ್ಥಾನದ ಧ್ವನಿವರ್ಧಕದ ಶಬ್ದ ಕಡಿಮೆ ಮಾಡುವಂತೆ ಮುಸ್ಲಿಂ ವ್ಯಕ್ತಿಯಿಂದ ಪೊಲೀಸ್ ದೂರು

ಭಜನೆ, ಜಾಗಟೆ ಮತ್ತು ಘಂಟಾನಾದದ ಬಗ್ಗೆಯೂ ಆಕ್ಷೇಪ

ಚಿಕ್ಕಮಗಳೂರು – ಜಿಲ್ಲೆಯ ಹಳೆ ಉಪ್ಪಳ್ಳಿಯ ಈಶ್ವರ ದೇವಸ್ಥಾನದಲ್ಲಿ ನಡೆಯುವ ಭಜನೆ, ಜಾಗಟೆ ಮತ್ತು ಘಂಟಾನಾದದ ಶಬ್ದದ ಬಗ್ಗೆ ಫಾರೂಕ್ ಎಂಬ ಸ್ಥಳೀಯ ಮುಸ್ಲಿಂ ವ್ಯಕ್ತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ದೇವಸ್ಥಾನದ ಎದುರೇ ಇರುವ ತನ್ನ ಮನೆಗೆ ಈ ಶಬ್ದದಿಂದ ತೊಂದರೆಯಾಗುತ್ತಿದೆ ಎಂದು ಅವನು ದೂರು ನೀಡಿದ್ದಾನೆ. ಅಷ್ಟೇ ಅಲ್ಲದೆ, ಭಜನೆಯ ಶಬ್ದವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಅವನು ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾನೆ. ಈ ವಿಷಯವಾಗಿ ಪೊಲೀಸರ ಮುಂದೆಯೇ ಮಾತಿನ ಚಕಮಕಿ ನಡೆದಿದೆ. ‘ದೇವಸ್ಥಾನದ ಮೇಲಿರುವ ಧ್ವನಿವರ್ಧಕವನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು’ ಎಂದು ಅವನು ಆಗ್ರಹಿಸಿದ್ದಾನೆ. ಇದರಿಂದ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ ಎಂದು ದೇವಸ್ಥಾನದ ಅರ್ಚಕರು ಮತ್ತು ವ್ಯವಸ್ಥಾಪನಾ ಸಮಿತಿಯವರು ಆಕ್ಷೇಪ ವ್ಯಕ್ತಪಡಿಸಿ ಅವನನ್ನು ವಿರೋಧಿಸಿದರು.

ಪೊಲೀಸರು ಪ್ರಸ್ತುತ ಧ್ವನಿವರ್ಧಕದ ಶಬ್ದದ ಮಟ್ಟವನ್ನು (ಡೆಸಿಬಲ್) ಪರಿಶೀಲಿಸುತ್ತಿದ್ದಾರೆ. ‘ದೇವಸ್ಥಾನದ ಸುತ್ತಮುತ್ತಲಿನ ನಿವಾಸಿಗಳಿಗೆ ಶಬ್ದದಿಂದ ತೊಂದರೆಯಾಗದಂತೆ ಜಾಗ್ರತೆ ವಹಿಸಬೇಕು ಎಂದು ಅರ್ಚಕರಿಗೆ ಸೂಚನೆ ನೀಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಎರಡೂ ಕಡೆಯವರೊಂದಿಗೆ ಚರ್ಚಿಸಿ ಸಂಧಾನ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಭಜನೆ, ಜಾಗಟೆ ಮತ್ತು ಘಂಟಾನಾದದ ಶಬ್ದದಿಂದ ತೊಂದರೆಯಾಗುವವರಿಗಾಗಿ ೭೮ ವರ್ಷಗಳ ಹಿಂದೆಯೇ ಪಾಕಿಸ್ತಾನವನ್ನು ನೀಡಲಾಗಿದೆ. ಅವರು ಅಲ್ಲಿಗೆ ಹೊರಟು ಹೋಗಬೇಕು ಎಂದು ಈಗ ಬಹಿರಂಗವಾಗಿ ಹೇಳುವ ಸಮಯ ಬಂದಿದೆ!