ಭಟ್ಕಳದಲ್ಲಿ ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ : ೭ ಅಪ್ರಾಪ್ತ ಮುಸಲ್ಮಾನರ ಬಂಧನ

  • ದಾಳಿಕಾರರು ಮಾದಕ ವಸ್ತು ಸೇವಿಸಿರುವುದು ಪತ್ತೆ

ಭಟ್ಕಳ ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದ ಹಿಂದೂಗಳ ಸಮೂಹ

ಭಟ್ಕಳ – ಭಟ್ಕಳ ತಾಲೂಕಿನ ಮುರುಡೇಶ್ವರ-ಬೈಲೂರು ಮಾರ್ಗದ ತೆಂಗಾರ ರಸ್ತೆಯಲ್ಲಿ ರಾತ್ರಿ ದ್ವಿಚಕ್ರ ವಾಹನದಲ್ಲಿ ಬಂದ ೭ ಅಪ್ರಾಪ್ತ ಮುಸಲ್ಮಾನರು ಹಿಂದೂಗಳ ಕೆಲವು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆಯು ಫೆಬ್ರವರಿ ೨೩ ರಂದು ನಡೆದಿದೆ. ಇದರಿಂದ ಮನೆಗಳ ಕಿಟಕಿಗಳು ಪುಡಿಪುಡಿಯಾಗಿವೆ. ಘಟನೆಯ ಸಮಯದಲ್ಲಿ ಸಿಕ್ಕಿಬಿದ್ದ ೨ ಹುಡುಗರನ್ನು ಸ್ಥಳೀಯ ಜನರು ಪೊಲೀಸರಿಗೆ ಒಪ್ಪಿಸಿದ್ದಾರೆ. ತದನಂತರ ಪೊಲೀಸರು ಉಳಿದ ೫ ಹುಡುಗರನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದ ಪರಿಸರದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ವಶಕ್ಕೆ ಪಡೆದ ಹುಡುಗರ ವೈದ್ಯಕೀಯ ತಪಾಸಣೆ ನಡೆಸಿದಾಗ ಅವರೆಲ್ಲರೂ ಮಾದಕ ವಸ್ತು ಸೇವಿಸಿರುವುದು ಪತ್ತೆಯಾಗಿದೆ. ಇವರೆಲ್ಲರನ್ನು ಬಾಲ ನ್ಯಾಯಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬೈಲೂರು ಮತ್ತು ಮುರುಡೇಶ್ವರ ಭಾಗಗಳಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಸಂಪಾದಕೀಯ ನಿಲುವು

  • ಮಾದಕ ವಸ್ತು ಸೇವಿಸಿದ ಈ ಹುಡುಗರಿಗೆ ಕಲ್ಲು ತೂರಾಟ ನಡೆಸಲು ಹಿಂದೂಗಳ ಮನೆಗಳೇ ಹೇಗೆ ಸಿಕ್ಕವು?’, ಎನ್ನುವುದಕ್ಕೆ ಪೊಲೀಸರು ಉತ್ತರಿಸಬೇಕು!
  • ರಾಜ್ಯದಲ್ಲಿ ಹಿಂದೂವಿರೋಧಿ ಮತ್ತು ಮುಸಲ್ಮಾನ ಓಲೈಕೆಯ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಈ ಮತಾಂಧ ಹುಡುಗರು ಮುಕ್ತವಾಗಿ ತಿರುಗಾಡುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ!