ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಇವರಿಂದ ಜಿಲ್ಲಾ ಕಾಂಗ್ರೆಸ್ ಕಮೀಟಿ ಸಭೆಯಲ್ಲಿನ ಹೇಳಿಕೆ

ಭಾಗ್ಯನಗರ (ತೆಲಂಗಾಣ) – ಗಾಂಧಿ ಕುಟುಂಬಕ್ಕೆ ಅಗತ್ಯವಿದ್ದರೆ ಆರ್ಥಿಕ ಸಹಾಯ ಮಾಡಲು ಸಿದ್ಧರಾಗಿರಿ. ಗಾಂಧಿ ಕುಟುಂಬದವರು ಸಹಾಯ ಕೇಳಿದರೆ ನಾನು 1 ಸಾವಿರ ಕೋಟಿ ರೂಪಾಯಿಗಳನ್ನೂ ಸಂಗ್ರಹಿಸಬಲ್ಲೆ ಎಂದು ತೆಲಂಗಾಣದ ಕಾಂಗ್ರೆಸ್ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ. ಇಲ್ಲಿನ ಹರಿತಾ ವ್ಯಾಲಿ ರೆಸಾರ್ಟ್ನಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಆಧರಿಸಿ ಭಾಜಪ ಮತ್ತು ಭಾರತ್ ರಾಷ್ಟ್ರ ಸಮಿತಿ (BRS) ಪಕ್ಷಗಳು ತೆಲಂಗಾಣ ರಾಜ್ಯ ಕಾಂಗ್ರೆಸ್ ಸಮಿತಿಯನ್ನು ಗಾಂಧಿ ಕುಟುಂಬದ ‘ಎಟಿಎಂ’ (ಆಟೋ ಮೇಟೆಡ್ ಟೆಲರ್ ಮಷೀನ್ ಸ್ವಯಂಚಾಲಿತ ನಗದು ವಿತರಣಾ ಯಂತ್ರ) ಎಂದು ಕರೆದಿವೆ.
"If the Gandhi family asks, we'll collect ₹1,000 Cr".
Telangana CM Revanth Reddy sparks controversy…
Can India break free? If parties prioritize fund collection over governance, can the nation ever achieve true progress?#Congress #Corruption #NavjotKaur #CongressExposed… https://t.co/jDKNyFMs8S pic.twitter.com/dRWxNldLeu
— Sanatan Prabhat (@SanatanPrabhat) February 24, 2026
ಮುಖ್ಯಮಂತ್ರಿಗಳಿಗೆ ನಾಚಿಕೆಯಾಗಬೇಕು! – ಭಾಜಪ
“ರಾಜ್ಯದ ಬೊಕ್ಕಸದ ಮೇಲೆ ಒತ್ತಡವಿರುವಾಗ, ಕಲ್ಯಾಣ ಯೋಜನೆಗಳು ಬಾಕಿ ಇರುವಾಗ ಮತ್ತು ನೌಕರರ ಸಂಬಳ ವಿಳಂಬವಾಗುತ್ತಿರುವಾಗ, ಮುಖ್ಯಮಂತ್ರಿಗಳು ಒಂದು ಕುಟುಂಬಕ್ಕಾಗಿ ಹಣ ಸಂಗ್ರಹಿಸುವ ಬಗ್ಗೆ ಹೇಗೆ ಮಾತನಾಡುತ್ತಾರೆ? ಮುಖ್ಯಮಂತ್ರಿಗಳಿಗೆ ಈ ವಿಷಯದಲ್ಲಿ ನಾಚಿಕೆಯಾಗಬೇಕು,” ಎಂದು ಭಾಜಪದ ರಾಜ್ಯ ಮುಖ್ಯ ವಕ್ತಾರ ಎನ್.ವಿ. ಸುಭಾಷ್ ಕಿಡಿಕಾರಿದ್ದಾರೆ.
Shocking statement by CM Revanth Reddy!
While Telangana’s youth await DSC notifications and farmers struggle for Rythu Bharosa, the CM boasts about mobilising ₹1,000 CRORE for the “financial requirements” of the Gandhi family.
Is Telangana’s hard-earned revenue meant for… pic.twitter.com/LuyDdZdlBO
— NV Subhash (@nvsubhash4bjp) February 22, 2026
ಉಪಮುಖ್ಯಮಂತ್ರಿಗಳ ಸ್ಪಷ್ಟನೆ
ಈ ಕುರಿತು ಸ್ಪಷ್ಟನೆ ನೀಡಿದ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ, “ಮುಖ್ಯಮಂತ್ರಿಗಳ ಉದ್ದೇಶವು ಸಾಮೂಹಿಕ ಶಕ್ತಿಯ ಬಗ್ಗೆ ಇತ್ತೇ ಹೊರತು, ಯಾವುದೇ ಕಾನೂನುಬಾಹಿರ ವಸೂಲಾತಿಯ ಬಗ್ಗೆ ಇರಲಿಲ್ಲ” ಎಂದು ಹೇಳಿದ್ದಾರೆ. (ಈ ಸ್ಪಷ್ಟನೆಯನ್ನು ಚಿಕ್ಕ ಮಗು ವಾದರು ನಂಬಲು ಸಾಧ್ಯವೇ? – ಸಂಪಾದಕರು)
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ