
ಉಜ್ಜಯಿನಿ (ಮಧ್ಯಪ್ರದೇಶ) – ಹಿಂದೂಗಳಂತೆ ಉಡುಪು ಧರಿಸಿ, ಕೊರಳಲ್ಲಿ ತುಳಸಿ ಮಾಲೆ, ಹಣೆಯ ಮೇಲೆ ತಿಲಕ ಮತ್ತು ಕೇಸರಿ ವಸ್ತ್ರವನ್ನು ಧರಿಸಿ ಅಡ್ಡಾಡುತ್ತಿದ್ದ ಮುಸಲ್ಮಾನ ಯುವಕನನ್ನು ಬಜರಂಗ ದಳದ ಕಾರ್ಯಕರ್ತರು ಹಿಡಿದಿದ್ದಾರೆ. ವಿಶೇಷವೆಂದರೆ ಈತನು ಪ್ರಸಿದ್ಧ ಜ್ಯೋತಿರ್ಲಿಂಗ ಶ್ರೀ ಮಹಾಕಾಳೇಶ್ವರ ಮಂದಿರ ಸೇರಿದಂತೆ ಮಂಗಳನಾಥ ಮಂದಿರದ ಪರಿಸರದಲ್ಲೂ ಓಡಾಡುತ್ತಿದ್ದನು. ಬಜರಂಗ ದಳದ ಕಾರ್ಯಕರ್ತರು ಆತನನ್ನು ಹಿಡಿದು ವಿಚಾರಣೆ ನಡೆಸಿದರು ಮತ್ತು ಕೆಲವರು ಆತನನ್ನು ಥಳಿಸಿದ್ದಾರೆ.
Bajrang Dal members beat a Muslim man wearing saffron clothes near the Shri Mahakaleshwar Temple in Ujjain (Madhya Pradesh).
Attempts to disguise identity in sensitive religious spaces can trigger security concerns and public suspicion.
Strict and uniform security protocols -… pic.twitter.com/YBSlqVHtBr
— Sanatan Prabhat (@SanatanPrabhat) February 18, 2026
೧. ಬಜರಂಗ ದಳದ ಜಿಲ್ಲಾ ಸಂಯೋಜಕ ರಿಷಭ ಕುಶ್ವಾಹ ಅವರು ಮಾಹಿತಿ ನೀಡಿ, ಯುವಕನೊಬ್ಬ ಹೋಟೆಲ್ ನಲ್ಲಿ ತಂಗಲು ಕೋಣೆ ಪಡೆಯಲು ಪ್ರಯತ್ನಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು; ಆದರೆ ಆತನು ತನ್ನ ಗುರುತುಪತ್ರದ ಬದಲು ಯುವತಿಯೊಬ್ಬಳ ಗುರುತುಪತ್ರದಲ್ಲಿ ಕೋಣೆಯನ್ನು ಕಾಯ್ದಿರಿಸುತ್ತಿದ್ದನು. ಮಾಹಿತಿ ಸಿಗುತ್ತಿದ್ದಂತೆಯೇ ಬಜರಂಗ ದಳದ ಕಾರ್ಯಕರ್ತರು ನಾನಾಖೇಡಾಕ್ಕೆ ತಲುಪಿದರು. ಅಲ್ಲಿ ಸಂಬಂಧಿತ ಯುವಕ ಪತ್ತೆಯಾದನು. ಆತನ ವೇಷಭೂಷಣ ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ಏಕೆಂದರೆ ಆತನು ಮುಸಲ್ಮಾನನಾಗಿದ್ದರೂ, ತನ್ನ ಗುರುತನ್ನು ಮರೆಮಾಚಲು ಕೇಸರಿ ವಸ್ತ್ರ ಧರಿಸಿದ್ದನು. ಕೊರಳಲ್ಲಿ ತುಳಸಿ ಮಾಲೆ ಮತ್ತು ಹಣೆಯ ಮೇಲೆ ತಿಲಕವನ್ನಿಟ್ಟುಕೊಂಡಿದ್ದನು.
೨. ಯುವಕನಿಗೆ ಹೆಸರು ಕೇಳಿದಾಗ ಆತನು ಹಿಂದೂ ಹೆಸರನ್ನು ಹೇಳಿದನು; ಆದರೆ ಆತನ ಬಳಿ ಇದ್ದ ದಾಖಲೆಗಳನ್ನು ಪರಿಶೀಲಿಸಿದಾಗ ಆತನ ಹೆಸರು ಜಾಫರ್ ಎಂದು ಸ್ಪಷ್ಟವಾಯಿತು. ಜಾಫರ್ ಎಂಬಾತನು ದೆಹಲಿಯಿಂದ ಯುವತಿಯೊಬ್ಬಳನ್ನು ಉಜ್ಜಯಿನಿಗೆ ಕರೆದುಕೊಂಡು ಬಂದಿದ್ದನು ಎನ್ನಲಾಗಿದೆ. ಹೋಟೆಲ್ ನಲ್ಲಿ ಕೋಣೆ ಪಡೆಯಲು ಆತನು ತನ್ನ ಗುರುತುಪತ್ರದ ಬದಲು ಯುವತಿಯ ದಾಖಲೆಗಳನ್ನು ಬಳಸಿದ್ದನು.
೩. ಕಾರ್ಯಕರ್ತರು ತೀವ್ರ ವಿಚಾರಣೆ ನಡೆಸಿದಾಗ, ತಾನು ಆ ಯುವತಿಯೊಂದಿಗೆ ಮಹಾಶಿವರಾತ್ರಿಯ ನಿಮಿತ್ತ ಮಂಗಲನಾಥ ಮತ್ತು ಮಹಾಕಾಳ ಮಂದಿರದ ಪರಿಸರದಲ್ಲಿ ದಿನವಿಡೀ ಸುತ್ತಾಡುತ್ತಿದ್ದೆ ಮತ್ತು ಸಂಜೆ ಹೋಟೆಲ್ಗೆ ಹೋಗಿದ್ದೆ ಎಂದು ಹೇಳಿದ್ದಾನೆ.
೪. ಕೆಲವು ಕಾರ್ಯಕರ್ತರು ಜಾಫರ್ ನನ್ನು ಥಳಿಸಿದ್ದಾರೆ. ನಂತರ ಕಾರ್ಯಕರ್ತರು ಆತನನ್ನು ತಕ್ಷಣವೇ ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರ ವಶಕ್ಕೆ ಒಪ್ಪಿಸಿದರು.
ಸಂಪಾದಕೀಯ ನಿಲುವುನಾಳೆ ಇಂತಹ ಮತಾಂಧರು ವಿಧ್ವಂಸಕ ಕೃತ್ಯ ಎಸಗಿದರೆ ಆಶ್ಚರ್ಯಪಡಬೇಕಿಲ್ಲ. ಇದಕ್ಕಾಗಿ ಮಂದಿರದ ಆವರಣ ಪ್ರವೇಶಿಸುವ ಮೊದಲು ಪ್ರತಿಯೊಬ್ಬರ ಆಧಾರ ಕಾರ್ಡ್, ಮತದಾನದ ಗುರುತಿನ ಚೀಟಿ ಮುಂತಾದ ದಾಖಲೆಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು. |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ