|
![]() |
![]() |
(ಈ ಚಿತ್ರವನ್ನು ಯಾರದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಪ್ರಕಟಿಸಿಲ್ಲ, ಬದಲಾಗಿ ನಡೆದಿರುವ ಅಪಚಾರದ ಬಗ್ಗೆ ತಿಳಿಸಲು ಪ್ರಕಟಿಸಲಾಗಿದೆ. – ಸಂಪಾದಕರು)
ರಾಯಪುರ (ಛತ್ತೀಸಗಢ) – ಮಹಾಶಿವರಾತ್ರಿಯ ಪವಿತ್ರ ಹಬ್ಬದ ನಿಮಿತ್ತ ಛತ್ತೀಸಗಢದ ಪ್ರಮುಖ ದಿನಪತ್ರಿಕೆಗಳಾದ ‘ದೈನಿಕ ಭಾಸ್ಕರ’ ಮತ್ತು ‘ಹರಿಭೂಮಿ’ಗಳಲ್ಲಿ ಭಗವಾನ ಶಿವ ಮತ್ತು ಶ್ರೀ ಗಣೇಶನನ್ನು ವಾಣಿಜ್ಯ ಜಾಹೀರಾತುಗಳಲ್ಲಿ ಅಯೋಗ್ಯವಾಗಿ ಬಳಸಲಾಗಿತ್ತು. ಈ ಜಾಹೀರಾತು ಪ್ರಕಟಿಸಿದ ‘ಶ್ರೀ ಗಣೇಶ ಗ್ಲೋಬಲ್ ಗುಲಾಲ್ ಪ್ರೈವೇಟ್ ಲಿಮಿಟೆಡ್’ ಕಂಪನಿಯ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ನಡೆಸಿದ ತೀವ್ರ ಪ್ರತಿರೋಧಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ. ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸಗಢ ರಾಜ್ಯ ಸಂಘಟಕರಾದ ಶ್ರೀ. ಸುನೀಲ ಘನವಟ್ ಅವರು ಈ ಅವಮಾನಕಾರಿ ಜಾಹೀರಾತಿನ ವಿರುದ್ಧ ಪೊಲೀಸ್ ಕ್ರಮಕ್ಕೆ ಆಗ್ರಹಿಸಿದ ನಂತರ, ಕಂಪನಿಯು ಲಿಖಿತ ರೂಪದಲ್ಲಿ ಬೇಷರತ್ ಕ್ಷಮೆಯಾಚಿಸಿದೆ.
Company Withdraws Advertisement Insulting Bhagwan Shiv and Shri Ganesh Ji; Issues Written Apology
🚩On the sacred occasion of Mahashivratri, a major victory was secured after strong protests by the Hindu Janajagruti Samiti against Shri Ganesha Global Gulal Pvt Ltd for the… pic.twitter.com/NmE6nWMmRf
— HinduJagrutiOrg (@HinduJagrutiOrg) February 15, 2026
ಜಾಹೀರಾತಿನಲ್ಲಿ ಅಯೋಗ್ಯವಾಗಿದ್ದ ಅಂಶಗಳೇನು?
ಈ ಜಾಹೀರಾತಿನಲ್ಲಿ ಶ್ರೀ ಗಣೇಶನ ಕೈಯಲ್ಲಿ ‘ಗುಲಾಲ್’ (ಬಣ್ಣ) ಮತ್ತು ‘ಠಂಡಾಯಿ’ ಪಾನೀಯದ ಪ್ಯಾಕೆಟ್ಗಳನ್ನು ತೋರಿಸಲಾಗಿತ್ತು. ದೇವತೆಗಳನ್ನು ‘ಮಾಡೆಲ್’ಗಳಂತೆ (ಕಂಪನಿಯ ಉತ್ಪನ್ನಗಳ ಪ್ರಚಾರಕ್ಕಾಗಿ ನೇಮಕಗೊಂಡ ವ್ಯಕ್ತಿಗಳಂತೆ) ಪ್ರದರ್ಶಿಸಲಾಗಿತ್ತು. ಇದರೊಂದಿಗೆ ಜಾಹೀರಾತಿನಲ್ಲಿ ಭಗವಾನ ಶಿವ ಮತ್ತು ಶಿವಲಿಂಗದ ಸುತ್ತಲೂ ‘ಕ್ಯಾಪ್ಟನ್ ಅಮೆರಿಕಾ’ದಂತಹ ವಿದೇಶಿ ಕಾಲ್ಪನಿಕ ಪಾತ್ರಗಳ, ಹಾಗೂ ಇತರ ಉತ್ಪನ್ನಗಳ ಚಿತ್ರಣವನ್ನು ಮಾಡಲಾಗಿತ್ತು.
ತಪ್ಪು ಒಪ್ಪಿಕೊಂಡ ಕಂಪನಿ
ಸಮಿತಿಯ ವಿರೋಧದ ನಂತರ ಕಂಪನಿಯ ಸಂಚಾಲಕ ಉಮಂಗ ಗೋಯಲ್ ಅವರು, ಶ್ರೀ ಗಣೇಶನ ಕೈಯಲ್ಲಿ ತಮ್ಮ ಉತ್ಪನ್ನವನ್ನು ತೋರಿಸಿರುವುದು ತಮ್ಮ ದೊಡ್ಡ ತಪ್ಪು ಮತ್ತು ಅಜಾಗರೂಕತೆಯಿಂದಾದ ದೋಷವೆಂದು ಒಪ್ಪಿಕೊಂಡಿದ್ದಾರೆ. ಕಂಪನಿಯು ತನ್ನ ಪತ್ರದಲ್ಲಿ ಈ ದುರದೃಷ್ಟಕರ ಘಟನೆಯು ಅಜಾಗರೂಕತೆಯಿಂದ ನಡೆದಿದೆ ಮತ್ತು ಇದಕ್ಕಾಗಿ ನಾವು ಸಮಸ್ತ ಹಿಂದೂ ಸನಾತನಿ ಸಮಾಜದ ಕ್ಷಮೆ ಯಾಚಿಸುತ್ತೇವೆ ಎಂದು ತಿಳಿಸಿದೆ. ಅಲ್ಲದೆ ಭವಿಷ್ಯದಲ್ಲಿ ಇಂತಹ ತಪ್ಪು ಮರುಕಳಿಸುವುದಿಲ್ಲವೆಂದು ಭರವಸೆ ನೀಡಿದೆ.


ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !