ಕೇರಳ ಉಚ್ಚ ನ್ಯಾಯಾಲಯದ ತೀರ್ಪು
ತಿರುವನಂತಪುರಂ (ಕೇರಳ) – ‘ಫಿಜಿಯೋಥೆರಪಿ’ ಎಂಬುದು ಒಂದು ವೈಜ್ಞಾನಿಕ ಮತ್ತು ಪುರಾವೆ ಆಧಾರಿತ ಚಿಕಿತ್ಸಾ ಪದ್ಧತಿಯಾಗಿದೆ. ಆದ್ದರಿಂದ ಈ ಕ್ಷೇತ್ರದ ತಜ್ಞರಿಗೆ ಪೂರ್ಣ ಸ್ವಾಯತ್ತತೆಯಿಂದ ಕೆಲಸ ಮಾಡುವ ಅಧಿಕಾರವಿದೆ ಎಂದು ಹೇಳುತ್ತಾ, ಕೇರಳ ಉಚ್ಚ ನ್ಯಾಯಾಲಯವು ಅರ್ಹ ಫಿಜಿಯೋಥೆರಪಿಸ್ಟ್ ಗಳಿಗೆ ತಮ್ಮ ಹೆಸರಿನ ಮುಂದೆ ‘ಡಾಕ್ಟರ್’ ಎಂದು ಸೇರಿಸಿಕೊಳ್ಳಲು ಅನುಮತಿ ನೀಡಿದೆ. ಅಲ್ಲದೆ, ಯಾವುದೇ ಅಡೆತಡೆಯಿಲ್ಲದೆ ಅವರು ಸ್ವತಂತ್ರವಾಗಿ ವೈದ್ಯಕೀಯ ವೃತ್ತಿಯನ್ನು ನಡೆಸಬಹುದು ಎಂದು ಸ್ಪಷ್ಟಪಡಿಸಿದೆ.
‘ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಕಲ್ ಮೆಡಿಸಿನ್ ಅಂಡ್ ರಿಹ್ಯಾಬಿಲಿಟೇಶನ್’ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ತೀರ್ಪು ನೀಡಿದೆ. ಫಿಜಿಯೋಥೆರಪಿಸ್ಟ್ ಗಳನ್ನು ಕೇವಲ ‘ತಂತ್ರಜ್ಞರು’ ಅಥವಾ ವೈದ್ಯರ ‘ಸಹಾಯಕರು’ ಎಂದು ಸೀಮಿತಗೊಳಿಸಬೇಕೆಂಬ ವಾದಗಳನ್ನು ನ್ಯಾಯಾಲಯವು ಸಂಪೂರ್ಣವಾಗಿ ತಿರಸ್ಕರಿಸಿದೆ. ವಿಶೇಷವೆಂದರೆ, ಇದಕ್ಕೂ ಮೊದಲು ನವೆಂಬರ್ ೨೦೨೫ ರಲ್ಲಿ ಇದೇ ನ್ಯಾಯಾಲಯವು ತನ್ನ ಒಂದು ಮಧ್ಯಂತರ ಆದೇಶದ ಮೂಲಕ ‘ಫಿಜಿಯೋಥೆರಪಿಸ್ಟ್’ಗಳು ‘ಡಾಕ್ಟರ್’ ಎಂಬ ಪದ ಬಳಸುವುದಕ್ಕೆ ತಾತ್ಕಾಲಿಕ ನಿಷೇಧ ಹೇರಿತ್ತು.
| ಫಿಜಿಯೋಥೆರಪಿ ಎಂದರೆ ದೈಹಿಕ ಚಿಕಿತ್ಸೆ ಅಥವಾ ಭೌತಿಕ ಚಿಕಿತ್ಸೆ ಎಂದರ್ಥ. ಔಷಧಿ ಅಥವಾ ಶಸ್ತ್ರಚಿಕಿತ್ಸೆಯ ಬದಲಾಗಿ ವ್ಯಾಯಾಮ, ಮಸಾಜ್ ಮತ್ತು ಉಷ್ಣತೆ ಅಥವಾ ವಿದ್ಯುತ್ ಉಪಕರಣಗಳಂತಹ ಭೌತಿಕ ಸಾಧನಗಳನ್ನು ಬಳಸಿ ಈ ಚಿಕಿತ್ಸಾ ಪದ್ಧತಿಯು ಶರೀರದ ಚಲನೆ, ಕಾರ್ಯಕ್ಷಮತೆ ಹಾಗೂ ಸ್ನಾಯುಗಳ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ. ಇದರಿಂದ ಗಾಯದ ನಂತರ ಅಥವಾ ಕಾಯಿಲೆಯ ನಂತರ ರೋಗಿಯ ಚಲನವಲನ ಮತ್ತು ಜೀವನಮಟ್ಟ ಸುಧಾರಿಸುತ್ತದೆ. ಈ ಚಿಕಿತ್ಸೆಯನ್ನು ನೀಡುವವರನ್ನು ಫಿಜಿಯೋಥೆರಪಿಸ್ಟ್ ಎಂದು ಕರೆಯಲಾಗುತ್ತದೆ. |

ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ