
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಹಿಂದೂ ಯುವಕನೊಬ್ಬನನ್ನು ಜೀವಂತವಾಗಿ ಸುಡಲಾಗಿದೆ. ಚಂಚಲ್ ಚಂದ್ರ ಭೌಮಿಕ್ ಎಂಬಾತ ಮೃತಪಟ್ಟ ಯುವಕನಾಗಿದ್ದು, ಈತ ಕೊಮಿಲ್ಲಾ ಜಿಲ್ಲೆಯ ಲಕ್ಷ್ಮೀಪುರ ಗ್ರಾಮದ ನಿವಾಸಿಯಾಗಿದ್ದನು. ಈ ಘಟನೆಯು ಜನೇವರಿ ೨೩ರ ಶುಕ್ರವಾರ ರಾತ್ರಿ ನಡೆದಿದೆ. ಬಾಂಗ್ಲಾದೇಶದ ಪತ್ರಕರ್ತ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ ಅವರು ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್ ಮೂಲಕ ಈ ಘಟನೆಯ ವಿವರವಾದ ಮಾಹಿತಿಯನ್ನು ನೀಡಿದ್ದಾರೆ.
Chanchal Bhowmik Burned to Death in Bangladesh After Dipu–Khokon | Minority leaders demand building a safe Bangladesh for Hindus
Once again, an incident of burning a Hindu youth to death has occurred in Bangladesh. After Dipu Chandra Das was burned to death in Mymensingh and… pic.twitter.com/ERQVzIN5AO
— Salah Uddin Shoaib Choudhury (@salah_shoaib) January 24, 2026
೧. ಚಂಚಲ್ ಭೌಮಿಕ್ ಕಳೆದ ೬ ವರ್ಷಗಳಿಂದ ನರಸಿಂಗಡಿಯಲ್ಲಿ ರುಬಲ್ ಮಿಯಾ ಎಂಬುವವರ ಗ್ಯಾರೇಜನಲ್ಲಿ ಕೆಲಸ ಮಾಡುತ್ತಿದ್ದನು ಮತ್ತು ಅಲ್ಲಿಯೇ ವಾಸವಾಗಿದ್ದನು. ಸ್ಥಳೀಯರು ನೀಡಿದ ಮಾಹಿತಿಯ ಪ್ರಕಾರ, ಜನವರಿ ೨೩ರ ರಾತ್ರಿ ಕೆಲಸ ಮುಗಿಸಿ ಚಂಚಲ್ ಗ್ಯಾರೇಜನಲ್ಲಿಯೇ ಮಲಗಿದ್ದನು. ಸಮೀಪದ ಸಿಸಿಟಿವಿಯಲ್ಲಿ ತಡರಾತ್ರಿ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ಗ್ಯಾರೇಜ್ ಗೆ ಬೆಂಕಿ ಹಚ್ಚುತ್ತಿರುವುದು ಕಂಡುಬಂದಿದೆ. ಬೆಂಕಿ ಹಚ್ಚಿದ ನಂತರ ಆ ವ್ಯಕ್ತಿ ಬಹಳ ಹೊತ್ತು ಅಲ್ಲಿಯೇ ನಿಂತಿದ್ದನು. ಚಂಚಲ್ ಸಾವನ್ನಪ್ಪಿದ್ದಾನೆ ಎಂದು ಖಚಿತಪಡಿಸಿಕೊಂಡ ನಂತರವೇ ಆತ ಅಲ್ಲಿಂದ ತೆರಳಿರುವುದು ವಿಡಿಯೋದಿಂದ ಸ್ಪಷ್ಟವಾಗಿದೆ.
🚨 HINDU GENOCIDE CONTINUES IN BANGLADESH! 🇧🇩
Laxmipur village, Comilla District: In a horrific incident, a Hindu youth named Chanchal Chandra Bhowmik was brutally burnt alive on the night of Jan 23.
🔥 How long will this massacre continue?
While Hindus face systemic… https://t.co/KajfyLUVVY pic.twitter.com/dMXg5n5oE0
— Sanatan Prabhat (@SanatanPrabhat) January 25, 2026
೨. ಚಂಚಲ್ ಭೌಮಿಕ್ ತಂದೆಯ ಮರಣದ ನಂತರ ಅವನ ಮನೆಯ ಸಂಪೂರ್ಣ ಜವಾಬ್ದಾರಿ ಆತನ ಮೇಲಿತ್ತು. ಚಂಚಲ್ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಆತನ ಒಬ್ಬ ಸಹೋದರ ದಿವ್ಯಾಂಗನಾಗಿದ್ದಾನೆ. ಚಂಚಲ್ ಕುಟುಂಬದವರು ಕೂಡ ಇದು ಕೊಲೆ ಎಂದು ಆರೋಪಿಸಿದ್ದಾರೆ. ಹೆಸರು ಹೇಳಲಿಚ್ಛಿಸದ ಕೆಲವು ಸ್ಥಳೀಯರು ಧಾರ್ಮಿಕ ಕಾರಣಗಳಿಂದಲೇ ಚಂಚಲ್ ನನ್ನು ಹತ್ಯೆ ಮಾಡಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಹಿಂದೂ ಸಮಾಜದಲ್ಲಿ ಭೀತಿಯ ವಾತಾವರಣ
ಈ ಘಟನೆಯಿಂದ ಬಾಂಗ್ಲಾದೇಶದಲ್ಲಿನ ಹಿಂದೂ ಸಂಘಟನೆಗಳು ಮತ್ತು ಸಾಮಾನ್ಯ ಹಿಂದೂಗಳಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಹಿಂದೂ ಸಂಘಟನೆಗಳು ಈ ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಈ ಹಿಂದೆ ಮೆಮನಸಿಂಗ್ ನಲ್ಲಿ ದೀಪು ಚಂದ್ರ ದಾಸ್ ಅವರನ್ನು ಜೀವಂತವಾಗಿ ಸುಟ್ಟು ಹತ್ಯೆ ಮಾಡಲಾಗಿತ್ತು. ಅದರ ನಂತರ ಶರಿಯತಪುರದಲ್ಲಿ ಖೋಕನ್ ಚಂದ್ರ ದಾಸ್ ಅವರನ್ನು ಕೊಲ್ಲಲಾಯಿತು ಮತ್ತು ಈಗ ನರಸಿಂಗದಿಯಲ್ಲಿ ಚಂಚಲ್ ಚಂದ್ರ ಭೌಮಿಕ್ ಅವರನ್ನು ಜೀವಂತವಾಗಿ ಸುಡಲಾಗಿದೆ.
ಸಂಪಾದಕೀಯ ನಿಲುವು
|
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !
ಟೆಕ್ಸಾಸ್ (ಅಮೆರಿಕ) ನಲ್ಲಿ ಭಾರತದ ರಾಷ್ಟ್ರಧ್ವಜ ಹರಿದ ಅಮೆರಿಕನ್ ಯುವಕ