ಶ್ರೀ ರಾಘವೇಂದ್ರ ಸ್ವಾಮಿಗಳ ಭಾವಚಿತ್ರ ಸ್ವೀಕರಿಸಲು ನಿರಾಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ !

ಬೆಂಗಳೂರು – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಬಂದಿದ್ದ ಯುವಕನೊಬ್ಬ ಅವರಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಲು ಮುಂದಾದರು; ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಸ್ವೀಕರಿಸಲು ನಿರಾಕರಿಸಿದರು. ಮುಖ್ಯಮಂತ್ರಿಯವರು ಜನರ ಸಮಸ್ಯೆಗಳನ್ನು ಆಲಿಸಿ ಮನವಿಗಳನ್ನು ಸ್ವೀಕರಿಸುತ್ತಿದ್ದಾಗ ಈ ಘಟನೆ ನಡೆದಿದೆ. ಅವರು ಆ ಯುವಕನ ಕಡೆಗೆ ಕೋಪದಿಂದ ನೋಡಿ ಭಾವಚಿತ್ರವನ್ನು ವಾಪಸ್ ನೀಡಿದರು; ಆದರೆ ಅದೇ ಸಮಯದಲ್ಲಿ ಮತ್ತೊಬ್ಬ ಅಭಿಮಾನಿ ಚಾಣಕ್ಯರ ಕುರಿತಾದ ಪುಸ್ತಕವನ್ನು ನೀಡಿದಾಗ ಸಿದ್ದರಾಮಯ್ಯ ಅದನ್ನು ಸ್ವೀಕರಿಸಿದರು.

ಈ ಘಟನೆಯ ಕುರಿತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಸಿದ್ದರಾಮಯ್ಯ ಅವರಿಗೆ ಹಿಂದೂ ದೇವರುಗಳು ಇಷ್ಟವಾಗುವುದಿಲ್ಲ. ಅವರಿಗೆ ಕೇವಲ ಗೋಲು ಟೋಪಿ ಧರಿಸಿದ ಮನುಷ್ಯರು ಕಂಡರೆ ಮಾತ್ರ ಸಂತೋಷವಾಗುತ್ತದೆ. ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿ ಕೋಮು ಗಲಭೆಗಳನ್ನು ನಡೆಸಲಾಯಿತು. ‘ಕೋಗಿಲು ಲೇಔಟ್’ನಲ್ಲಿ ಮುಸಲ್ಮಾನರಿಗೆ ಮನೆಗಳನ್ನು ನೀಡುವುದು ಅವರಿಗೆ ಇಷ್ಟವಾಗುತ್ತದೆ. ಹಿಂದೂಗಳು ಈ ವಿಷಯವನ್ನು ಗಮನಿಸಬೇಕು ಮತ್ತು ಸಿದ್ದರಾಮಯ್ಯ ಅವರಿಗೆ ಪಾಠ ಕಲಿಸಬೇಕು” ಎಂದು ಅವರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸ್ ಮುಖ್ಯಮಂತ್ರಿಯ ಹಿಂದೂ ದ್ವೇಷವನ್ನು ತಿಳಿಯಿರಿ!