‘ಪುಣೆ ಪುಸ್ತಕ ಮಹೋತ್ಸವ’ದಲ್ಲಿ ಭಾರತದ ಪ್ರಖರ ವಿದೇಶಾಂಗ ನೀತಿಯ ಅಂಶಗಳನ್ನು ಮಂಡಿಸಿದ ವಿದೇಶಾಂಗ ಸಚಿವರು

ಪುಣೆ – ಭಾರತದಲ್ಲಿ ಒಂದು ಕಾಲವಿತ್ತು, ಆಗ ಯಾವುದೇ ರಾಜಕೀಯ ಪಕ್ಷಕ್ಕೆ ಸ್ಪಷ್ಟ ಬಹುಮತವಿರಲಿಲ್ಲ. ಇದರಿಂದಾಗಿ ವಿವಿಧ ಪಕ್ಷಗಳು ಮೈತ್ರಿ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದವು. ಇಂದು ವಿಶ್ವದ ಪರಿಸ್ಥಿತಿಯೂ ಹಾಗೆಯೇ ಆಗಿದೆ; ಇಲ್ಲಿ ಯಾರಿಗೂ ಸ್ಪಷ್ಟ ಬಹುಮತವಿಲ್ಲ. ಇಂತಹ ಅಸ್ಥಿರ ಜಾಗತಿಕ ವಾತಾವರಣದಲ್ಲಿ ಭಾರತವು ಅತ್ಯಂತ ಚಾಣಾಕ್ಷತನದಿಂದ ಮತ್ತು ಕೇವಲ ‘ರಾಷ್ಟ್ರೀಯ ಹಿತಾಸಕ್ತಿ’ಯನ್ನು ಕೇಂದ್ರದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕಿದೆ. “ನನ್ನ ದೇಶಕ್ಕೆ ಯಾವುದು ಹಿತವೋ, ಅದೇ ನನ್ನ ಆಯ್ಕೆ” ಎಂಬುದು ನಮ್ಮ ಮೂಲಭೂತ ಸಿದ್ಧಾಂತವಾಗಿದೆ ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅಭಿಪ್ರಾಯಪಟ್ಟರು. ‘ನ್ಯಾಷನಲ್ ಬುಕ್ ಟ್ರಸ್ಟ್’ ಆಯೋಜಿಸಿದ್ದ ‘ಪುಣೆ ಪುಸ್ತಕ ಮಹೋತ್ಸವ’ದ ‘ಡಿಪ್ಲೊಮಸಿ ಟು ಡಿಸ್ಕೋರ್ಸ್’ (ರಾಜತಾಂತ್ರಿಕತೆಯಿಂದ ಸಂವಾದದವರೆಗೆ) ಎಂಬ ವಿಷಯದ ಕುರಿತ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.
“I am striving to put PM Narendra Modi’s vision into action.”- EAM Dr. S. Jaishankar at Pune Lit Fest
India has a rich diplomatic heritage – Shri Krishna & Hanuman are our ideals. In an unstable world, India must act with national interest at the center.#PuneBookFestival pic.twitter.com/vGwjIPVw1c
— Sanatan Prabhat (@SanatanPrabhat) December 21, 2025
ವಿದೇಶಾಂಗ ಸಚಿವರು ಮಂಡಿಸಿದ ಪ್ರಮುಖ ಅಂಶಗಳು!
1. ಶ್ರೀಲಂಕಾದ ಬಿಕ್ಕಟ್ಟು ಇರಲಿ ಅಥವಾ ಕೊರೊನಾ ಸಾಂಕ್ರಾಮಿಕ ಕಾಲವಿರಲಿ; ಭಾರತವು ನೆರೆಹೊರೆಯ ರಾಷ್ಟ್ರಗಳಿಗೆ ಕುಟುಂಬದಂತೆ ಸಹಾಯ ಮಾಡುವ ಮೂಲಕ ತನ್ನ ನೈತಿಕ ಜವಾಬ್ದಾರಿಯನ್ನು ನಿಭಾಯಿಸಿದೆ.
2. ಅಮೆರಿಕದೊಂದಿಗೆ ಸಂವಾದ ನಡೆಸುವುದು ಕಷ್ಟಕರವಾಗಿದೆ ಮತ್ತು ಚೀನಾದ ನಿರ್ವಹಣೆ ಜಟಿಲವಾಗಿದೆ. ಇಂತಹ ಸಮಯದಲ್ಲಿ ರಷ್ಯಾದ ವಿಶ್ವಾಸವನ್ನು ಉಳಿಸಿಕೊಂಡು, ಯುರೋಪ್ ಅನ್ನು ಸಹಾಯಕನನ್ನಾಗಿ ಮಾಡಿಕೊಳ್ಳಲು ಭಾರತ ಪ್ರಯತ್ನಿಸುತ್ತಿದೆ.
3. ಸ್ಪರ್ಧಾತ್ಮಕ ಜಗತ್ತಿನಲ್ಲಿ ದಬಾಯಿಸಲ್ಪಡದೆ ಭಾರತವು ಈಗ ತನ್ನ ಧ್ವನಿಯನ್ನು ಎತ್ತಬೇಕು. ದೃಢ ನಾಯಕತ್ವದಿಂದಾಗಿಯೇ ಇಂದು ಭಾರತದ ‘ಗ್ಲೋಬಲ್ ಬ್ರಾಂಡ್’ (ಜಗತ್ತಿನಲ್ಲಿ ವಿಶಿಷ್ಟ ಗುರುತು) ನಿರ್ಮಾಣವಾಗಿದೆ.
4. ಯುವಕರು ಕೇವಲ ದೇಶಕ್ಕೆ ಸೀಮಿತವಾಗದೆ ಇಡೀ ವಿಶ್ವವನ್ನೇ ತಮ್ಮ ‘ಕಾರ್ಯಕ್ಷೇತ್ರ’ವಾಗಿ ನೋಡಬೇಕು; ರಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ಭಾರತೀಯರಿಗೆ ಉತ್ತಮ ಅವಕಾಶಗಳಿವೆ.
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !