ಬಾಂಗ್ಲಾದೇಶಕ್ಕೆ ಪಾಠ ಕಲಿಸಬೇಕು ! – ಅಸ್ಸಾಂ ನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಗುವಾಹಟಿ (ಅಸ್ಸಾಂ) – ಭಾರತವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ರಾಷ್ಟ್ರವಾಗಿದ್ದು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಂಗ್ಲಾದೇಶ ಇಂತಹ ಕಲ್ಪನೆಯನ್ನು ಹೇಗೆ ಮಾಡಬಹುದು? ಬಾಂಗ್ಲಾದೇಶದಲ್ಲಿ ಜನರ ಮನಸ್ಥಿತಿ ಕೆಟ್ಟದಾಗಿದೆ. ಆದ್ದರಿಂದ ಭಾರತವು ಆ ದೇಶಕ್ಕೆ ಹೆಚ್ಚು ಸಹಾಯ ಮಾಡಬಾರದು. ಒಂದು ವೇಳೆ ಭಾರತದ ವಿರುದ್ಧ ಇಂತಹ ನಿಲುವು ತೆಗೆದುಕೊಂಡರೆ ಬಾಂಗ್ಲಾದೇಶಕ್ಕೆ ಪಾಠ ಕಲಿಸಬೇಕಾಗುತ್ತದೆ, ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬಾಂಗ್ಲಾದೇಶದ ನಾಯಕ ಹಸನತ್ ಅಬ್ದುಲ್ಲಾ ಅವರು ಭಾರತದ ಈಶಾನ್ಯದ ೭ ರಾಜ್ಯಗಳನ್ನು ಪ್ರತ್ಯೇಕಿಸಿ ಬಾಂಗ್ಲಾದೇಶಕ್ಕೆ ವಿಲೀನಗೊಳಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಸರಮಾ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಪಾಠ ಕಲಿಸುವ ಸಮಯ ಬಂದಿದೆ ಮತ್ತು ಇದಕ್ಕಾಗಿ ಈಶಾನ್ಯ ಭಾರತದ ರಾಜ್ಯಗಳು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು!