ಬಾಂಗ್ಲಾದೇಶ: ‘ನ್ಯಾಷನಲ್ ಸಿಟಿಜನ್ ಪಾರ್ಟಿ’ ನಾಯಕ ಹಸನತ್ ಅಬ್ದುಲ್ಲಾನ ಹಗಲುಗನಸಿನ ಹೇಳಿಕೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ‘ನ್ಯಾಷನಲ್ ಸಿಟಿಜನ್ ಪಾರ್ಟಿ’ ನಾಯಕ ಹಸನತ್ ಅಬ್ದುಲ್ಲಾ ಭಾರತದ ವಿರುದ್ಧ ತೀವ್ರ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾನೆ. ಶೇಖ್ ಹಸೀನಾ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಯ ಪ್ರಮುಖ ಸಂಚುಗಾರರಲ್ಲಿ ಒಬ್ಬನಾಗಿರುವ ಅಬ್ದುಲ್ಲಾ, ನೇರವಾಗಿ ಭಾರತವನ್ನು ವಿಭಜಿಸುವ ಬೆದರಿಕೆ ಹಾಕಿದ್ದಾನೆ.
🚨 Delusion of Grandeur from Bangladesh! 🚨
🗣️ “We will separate Northeast India from the rest of India!” – claims Hasnat Abdullah, leader of Bangladesh’s so-called National Citizen Party.
🤡 An insignificant leader of a nation born out of India now indulging in fantasies.… pic.twitter.com/gbz0FG2hcI
— Sanatan Prabhat (@SanatanPrabhat) December 16, 2025
ಶಹೀದ್ ಮಿನಾರ್ನಲ್ಲಿ ನಡೆದ ಸರ್ವಪಕ್ಷಗಳ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವನು, ಬಾಂಗ್ಲಾದೇಶವನ್ನು ಅಸ್ಥಿರಗೊಳಿಸಲು ಯಾವುದೇ ಪ್ರಯತ್ನ ನಡೆದರೆ, ಅದಕ್ಕೆ ಪ್ರತಿಯಾಗಿ ಭಾರತದ ‘ಸೆವೆನ್ ಸಿಸ್ಟರ್ಸ್’ (ಈಶಾನ್ಯ ಭಾರತದ ೭ ರಾಜ್ಯಗಳು) ಭಾಗವನ್ನು ಭಾರತದಿಂದ ಪ್ರತ್ಯೇಕಿಸಲಾಗುವುದು ಎಂದು ಹೇಳಿದ್ದಾನೆ.
ವಕ್ತಾರ ಶರೀಫ್ ಉಸ್ಮಾನ್ ಹಾದಿ ಮೇಲಿನ ಪ್ರಾಣಾಂತಿಕ ದಾಳಿಯನ್ನು ಖಂಡಿಸಲು ಇಂಕ್ವಿಲಾಬ್ ಮಂಚ್’ ಈ ಸಭೆಯನ್ನು ಆಯೋಜಿಸಿತ್ತು. ಈ ಸಭೆಯಲ್ಲಿ ಹಸನತ್ ಅಬ್ದುಲ್ಲಾ ಯಾರ ಹೆಸರನ್ನೂ ಹೇಳದೆ ಈ ಆರೋಪ ಮಾಡಿದ್ದಾನೆ:
⚡🇧🇩 Hasnat Abdullah, a central leader of the radical #Islamist political party NCP, has directly threatened to rapidly break up India’s Seven Sisters. 🇮🇳
This political party was formed with the support of #Yunus. #Bangladesh 🇧🇩 @rinikibsharma @PradyotManikya @pavanbadhe pic.twitter.com/fJRVPfwhBo
— Bangladeshi Hindus Community🚨🇧🇩 (@Hindubd49346) December 16, 2025
೧. ಕೆಲವು ಶಕ್ತಿಗಳು ಗಡಿಯಾಚೆಯಿಂದ ಆಶ್ರಯ ಮತ್ತು ಸಹಾಯ ಪಡೆಯುತ್ತಾ ಬಾಂಗ್ಲಾದೇಶದಲ್ಲಿ ಅಸ್ಥಿರತೆ ಉಂಟುಮಾಡಲು ಮತ್ತು ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸಲು ಸಂಚು ರೂಪಿಸುತ್ತಿವೆ.
೨. ಉಸ್ಮಾನ್ ಹಾದಿ ಮೇಲಿನ ದಾಳಿಯಲ್ಲಿ ಭಾಗಿಯಾದವರಿಗೆ ಭಾರತದಿಂದ ಬೆಂಬಲ ಸಿಗುತ್ತಿದೆ.
೩. ಬಾಂಗ್ಲಾದೇಶದ ಸಾರ್ವಭೌಮತ್ವ, ಸಾಮರ್ಥ್ಯ, ಮತದಾನದ ಹಕ್ಕು ಮತ್ತು ಮಾನವ ಹಕ್ಕುಗಳನ್ನು ಗೌರವಿಸದ ಶಕ್ತಿಗಳಿಗೆ ಆಶ್ರಯ ನೀಡಿದರೆ ಬಾಂಗ್ಲಾದೇಶ ತಕ್ಕ ಪ್ರತ್ಯುತ್ತರ ನೀಡಲಿದೆ. ಬಾಂಗ್ಲಾದೇಶ ಅಸ್ಥಿರಗೊಳಿಸುವ ಗಂಭೀರ ಪರಿಣಾಮಗಳನ್ನು ಇಡೀ ಪ್ರದೇಶವೇ ಅನುಭವಿಸಬೇಕಾಗುತ್ತದೆ.
೪. ಬಾಂಗ್ಲಾದೇಶ ಅಸ್ಥಿರವಾದರೆ ಪ್ರತಿಭಟನೆಯ ಬೆಂಕಿ ಗಡಿಯಾಚೆಗೂ ಹರಡಲಿದೆ.
೫. ಯೂನಸ್ ನೇತೃತ್ವದ ಸರಕಾರವು ಭಾರತದ ಬಗ್ಗೆ ಸ್ಪಷ್ಟ ನಿಲುವು ತಳೆಯಬೇಕು. ಇನ್ನು ಮುಂದೆ ಭಾರತವನ್ನು ಕೇವಲ ನೆರೆರಾಷ್ಟ್ರವೆಂದು ನೋಡಬಾರದು.
‘ಬಾಂಗ್ಲಾದೇಶದಲ್ಲಿ ಭಾರತದ ಪ್ರಾಬಲ್ಯವನ್ನು ನಿರ್ಮಿಸಲು ಬಿಡುವುದಿಲ್ಲ!’ – ನಾಹಿದ್ ಇಸ್ಲಾಂ
🚨 Selective Amnesia on Display! 🚨
🗣️ “We will not allow India’s dominance in Bangladesh!” – Nahid Islam
📜 Reminder he must not forget: On 16 Dec 1971, it was 🇮🇳 India’s intervention that forced Pakistan’s surrender and led to the creation of Bangladesh.
India had the power… pic.twitter.com/iOg0Y23N5d
— Sanatan Prabhat (@SanatanPrabhat) December 16, 2025
ಸಭೆಯಲ್ಲಿ, ಪಕ್ಷದ ಸಂಚಾಲಕ ನಾಹಿದ್ ಇಸ್ಲಾಂ ಅವರು ಮಾತನಾಡಿ, ಯಾವುದೇ ವ್ಯಕ್ತಿ, ಸಂಸ್ಥೆ, ವೃತ್ತಿಪರ ಗುಂಪು ಅಥವಾ ಬುದ್ಧಿಜೀವಿಗಳ ಮೂಲಕ ಬಾಂಗ್ಲಾದೇಶದಲ್ಲಿ ಭಾರತದ ಪ್ರಾಬಲ್ಯವನ್ನು ನಿರ್ಮಿಸಲು ಬಿಡುವುದಿಲ್ಲ ಎಂದು ಹೇಳಿದರು. ಬಾಂಗ್ಲಾದೇಶದಲ್ಲಿ ದೆಹಲಿಯ ಸಿಂಹಾಸನವನ್ನು ಸುಡಲಾಗುವುದು ಎಂದು ಅವರು ಬೆದರಿಕೆ ಹಾಕಿದರು.
ಸಂಪಾದಕೀಯ ನಿಲುವು
|
ಹಸು ಹಿಂದೂಗಳಿಗೆ ಪವಿತ್ರ: ಅದರ ಹತ್ಯೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು! – ಗುಜರಾತ್ ಹೈಕೋರ್ಟ್
‘ಎ ಐ’ನ ಮಿತಿಗಳು ಗಮನಕ್ಕೆ ಬರುತ್ತಿದ್ದಂತೆಯೇ ‘ಫೋರ್ಡ್’ ಸಂಸ್ಥೆಯು ನೂರಾರು ಎಂಜಿನಿಯರ್ ಗಳನ್ನು ಮರಳಿ ಕೆಲಸಕ್ಕೆ ತೆಗೆದು ಕೊಂಡಿತು!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ