ಸಿಡ್ನಿ (ಆಸ್ಟ್ರೇಲಿಯಾ) ಇಲ್ಲಿಯ ಭಯೋತ್ಪಾದಕ ದಾಳಿ ಪ್ರಕರಣ

ಕ್ಯಾನ್ಬೆರಾ (ಆಸ್ಟ್ರೇಲಿಯಾ)– ಸಿಡ್ನಿಯಲ್ಲಿ ನಡೆದ ದಾಳಿಯು ಇಸ್ಲಾಮಿಕ್ ಸ್ಟೇಟ್ ಸಿದ್ಧಾಂತದಿಂದ ಪ್ರೇರಿತವಾದಂತೆ ಕಂಡುಬರುತ್ತಿದೆ. ಇಸ್ಲಾಮಿಕ್ ಸ್ಟೇಟ್ ಸಿದ್ಧಾಂತವು ಸುಮಾರು ಒಂದು ದಶಕದ ಹಿಂದೆ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಇಡೀ ಜಗತ್ತು ಈ ದ್ವೇಷಪೂರಿತ ಮತ್ತು ಕಟ್ಟರವಾದಿ ಸಿದ್ಧಾಂತವನ್ನು ಎದುರಿಸುತ್ತಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಪ್ರತಿಕ್ರಿಯಿಸಿದ್ದಾರೆ.
ಅವರು ಮಾತು ಮುಂದುವರೆಸುತ್ತಾ, “ದಾಳಿ ಮಾಡಿದವರಲ್ಲಿ ಒಬ್ಬನನ್ನು 2019 ರಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು; ಆದರೆ ಆ ಸಮಯದಲ್ಲಿ ಅವನನ್ನು ‘ಅಪಾಯಕಾರಿ’ ಎಂದು ವರ್ಗೀಕರಿಸಿರಲಿಲ್ಲ ಮತ್ತು ಅವನ ಮೇಲೆ ನಿರಂತರ ನಿಗಾ ಇಟ್ಟಿರಲಿಲ್ಲ. ಅದರ ನಂತರ ಅವನು ಹೆಚ್ಚು ಕಟ್ಟರ ಆಗಿದ್ದನೇ? ಎಂಬ ಬಗ್ಗೆ ಈಗ ತನಿಖೆ ನಡೆಸುವ ಅಗತ್ಯವಿದೆ. ನಾವು ಯಹುದಿ ವಿರೋಧಿ ದ್ವೇಷದ ನಿರ್ಮೂಲನೆಗಾಗಿ ಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಇದು ಬಹಳ ಹಳೆಯ ಸಮಸ್ಯೆಯಾಗಿದೆ,” ಎಂದು ಹೇಳಿದರು.
ಪಾಕಿಸ್ತಾನ ಶೇ. 100 ರಷ್ಟು ಭಯೋತ್ಪಾದಕ ದೇಶ! – ಗೀರ್ಟ್ ವಿಲ್ಡರ್ಸ್

ಆಸ್ಟ್ರೇಲಿಯಾದಲ್ಲಿ ನಡೆದ ಭಯೋತ್ಪಾದಕ ಘಟನೆಯ ಬಗ್ಗೆ ಜಗತ್ತಿನಾದ್ಯಂತ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ನೆದರ್ಲ್ಯಾಂಡ್ಸ್ನ ‘ಪಾರ್ಟಿ ಫಾರ್ ಫ್ರೀಡಂ’ ಪಕ್ಷದ ಅಧ್ಯಕ್ಷ ಮತ್ತು ಸಂಸದ ಗೀರ್ಟ್ ವಿಲ್ಡರ್ಸ್ ಅವರು, “ಪಾಕಿಸ್ತಾನವು ಶರಿಯತ್ ಕಾನೂನಿನಂತೆ ನಡೆಯುವ ಅತ್ಯಂತ ಅಪಾಯಕಾರಿ ಮತ್ತು ಹಿಂದುಳಿದ ದೇಶವಾಗಿದೆ. ಈ ದಾಳಿಯ ಮೂಲಕ ಅದು ಮತ್ತೊಮ್ಮೆ ಜಗತ್ತಿಗೆ ಇದನ್ನು ನೆನಪಿಸಿಕೊಟ್ಟಿದೆ. ಕುಖ್ಯಾತ ಅಲ್ ಖೈದಾ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲೇ ಅವಿತಿದ್ದನು. ಪಾಕಿಸ್ತಾನವು 100 ಕ್ಕೆ ನೂರರಷ್ಟು ಭಯೋತ್ಪಾದಕ ದೇಶವಾಗಿದೆ. ಇದು ಖಂಡಿತವಾಗಿಯೂ ಒಂದು ನೀಚ ದೇಶವಾಗಿದೆ. ನನಗೆ ಪಾಕಿಸ್ತಾನಿ ಮೌಲ್ವಿಗಳಿಂದ (ಇಸ್ಲಾಮಿಕ್ ಧಾರ್ಮಿಕ ಮುಖಂಡರಿಂದ) ಹಲವು ಬಾರಿ ಬೆದರಿಕೆಗಳು ಬಂದಿವೆ,” ಎಂದು ಹೇಳಿದ್ದಾರೆ.
Pakistan is 100% terror state.
A dangerous sharia shithole.
Osama Bin Laden lived there for many years.
The #bondibeach terrorists are from Pakistan.
I got many fatwas to kill me from Pakistani mullahs.
We all should boycott and isolate #Pakistan! https://t.co/omhpOYj3fU
— Geert Wilders (@geertwilderspvv) December 15, 2025
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !